Monday, December 15, 2025
Monday, December 15, 2025

Royal English Medium School ಆರೋಗ್ಯದಲ್ಲಿ ತರಕಾರಿಗಳ ಮಹತ್ವ.‌ರಾಯಲ್ ಡೈಮಂಡ್ ಶಾಲೆಯಲ್ಲಿ‌ ವಿಶಿಷ್ಟ ಕಾರ್ಯಕ್ರಮ

Date:

Royal English Medium School ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನೆಡದ ತರಕಾರಿಗಳ ಮೇಳ ಕಾರ್ಯಕ್ರಮ ನಡೆಯಿತು. ತರಕಾರಿಗಳ ಮಹತ್ವ ಅರಿತು ಹೆಚ್ಚು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು. ಆರೋಗ್ಯ ದಿನಾಚರಣೆ ಅಂಗವಾಗಿ ತರಕಾರಿಗಳ ಮೇಳ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು.

ತರಕಾರಿಗಳ ಸೇವನೆಯಿಂದ ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದ ಒತ್ತಡವನ್ನು ಸುಧಾರಿಸಿ , ಕಣ್ಣುಗಳಿಗೆ ಸಹಾಯ, ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತಗೆ ಮೆದುಳನ್ನು ಯೌವನ ವಾಗಿರಿಸಿಕೊಳ್ಳಲು ಸಹಾಯಕವಾಗಿದೆ.

ಚರ್ಮರೋಗವನ್ನು ಬಿಸಿಲಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಎಂದು ಕನ್ನಡ ಭಾಷಾಸಹ ಶಿಕ್ಷಕರಾದ ಅರುಣ್ ಕುಮಾರ್ ಹೆಚ್ ಎಂ ರವರು ತಿಳಿಸಿದರು.

ನಂತರ ವಿದ್ಯಾರ್ಥಿಗಳು ಐಶ್ವರ್ಯ ಹಿರೇಕಾಯಿ, ಬೃಂದಾ ಹೂ ಕೋಸು, ನುಗ್ಗೆ ಸೊಪ್ಪು ದೃತಿ, ಮೂಲಂಗಿ ಪ್ರೀತಮ್, ಕೊತ್ತಂಬರಿ ಸೊಪ್ಪು ಸಿಂಚನ, ಕ್ಯಾರೆಟ್ ಸೂರಜ್, ತೇಜಲ್ ಹಾಗಲಕಾಯಿ, ಗೆಡ್ಡೆಕೋಸು ಯಶಸ್, ಈ ವಿದ್ಯಾರ್ಥಿಗಳು ಉಪಯೋಗಗಳನ್ನು ಪರಿಚಯ ಮಾಡಿಕೊಟ್ಟರು. ಈ ತರಕಾರಿಗಳಲ್ಲಿ ಇರುವ ಎ, ಸಿ, ಜೀವಸತ್ವಗಳಿವೆ ಎಂಬುದನ್ನು ಪರಿಚಯಿಸಿದರು.

Royal English Medium School ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳೆಸುವಂತಹ ತರಕಾರಿಗಳನ್ನು ಸಂಗ್ರಹಿಸಿದ್ದರು. ಹೀರೇಕಾಯಿ, ಹೂಕೋಸು ನುಗ್ಗೆ ಸೊಪ್ಪು, ಈರುಳ್ಳಿ , ಗೆಡ್ಡೆಕೋಸು ಬೀನ್ಸು, ಬೆಂಡೆಕಾಯಿ ಎಲೆಕೋಸು, ಕೆಂಪು ಬಿಟ್ರೋಟ್ ಮುಂತಾದ ತರಕಾರಿಗಳನ್ನು ಸಂಗ್ರಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ರಾಯಲ್ ಇಂಗ್ಲೀಷ್ ಮೇಡಂ ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಮೇಡಂ ಮಾತನಾಡಿ ವಿದ್ಯಾರ್ಥಿಗಳು ಪ್ರತಿನಿತ್ಯದ ಆಹಾರ ಸೇವನೆಯಲ್ಲಿ ತರಕಾರಿಗಳ ಮಹತ್ವವನ್ನ ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಸದೃಢವಾಗಿ ಇರಬೇಕಾದರೆ ಸದೃಢವಾದ ಆಹಾರ ಪದಾರ್ಥಗಳನ್ನು ಸೇವನೆ ಅವಶ್ಯಕ ಎಂದು ಹೇಳಿದರು. ಹಾಗೆ ಪ್ರತಿ ತರಕಾರಿಗಳನ್ನು ಯಾವ ರೀತಿಯಲ್ಲಿ ಬೆಳೆಯುತ್ತಾರೆ. ತರಕಾರಿಗಳನ್ನು ಬಳಸುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳನ್ನು ಪರಿಚಯಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ವಿನಯ್, ಶಿಕ್ಷಕಿಯಾದ ವಿಂಧ್ಯಾ ರವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...