Monday, December 15, 2025
Monday, December 15, 2025

Shimoga Yakshagana ಫೆಬ್ರವರಿ 22 ರಿಂದ ಶಂಭುಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ – ಶಿವಾನಂದ‌‌ ಹೆಗಡೆ

Date:

Shimoga Yakshagana “ಕೋವಿಡ್ ನಂತರದ ಕಾಲಾವಧಿಯಲ್ಲಿ‌ ಯಕ್ಷಗಾನ ಕಲಾಕೇಂದ್ರ ಆರ್ಥಿಕ ಸಂಕಷ್ಟದಿಂದ ಮುಂಚಿನಂತೆ ಕ್ರಿಯಾಶೀಲವಾಗಲಿಲ್ಲ. ಆದರೂ‌ ಪ್ರೋತ್ಸಾಹಕರು,‌ದಾನಿಗಳು ,ಆತ್ಮೀಯರಿಂದ‌ ಕೆರೆಮನೆ ಶಂಭುಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ‌‌ ವರ್ಷದಿಂದ‌ ವರ್ಷಕ್ಕೆ
ಹೊಸ ಮೆರುಗು ಪಡೆಯುತ್ತಿದೆ.
ಇಡಗುಂಜಿಯ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಪ್ರಸ್ತುತ
ಯುನೆಸ್ಕೊ ಮಾನ್ಯತೆ ಲಭಿಸಿದೆ. ಈ ಯಶಸ್ಸಿಗೆ ಕೆರೆಮನೆ ಕುಟುಂಬದ ಹಿರಯರು ಮಂಡಳಿಯ ಕಲಾವಿದರು ಹಾಗೂ‌‌ ಯಕ್ಷಗಾನ ಪ್ರೇಮಿಗಳ ಸಂಘಟಿತ ಪ್ರಯತ್ನವೇ ಕಾರಣ ” ಎಂದು ಮಂಡಳಿಯ ನಿರ್ದೇಶಕ ಶಿವಾನಂದ ಹೆಗಡೆ ಹೇಳಿದರು.

Shimoga Yakshagana ಶಿವಮೊಗ್ಗದ ಅಭ್ಯುದಯ‌ ಮತ್ತು ಶ್ರೀಮಯ 90. ಸಾರಥಿಗಳ‌ ಆಶ್ರಯದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ‌ ಹೆಗಡೆ ಮಾತನಾಡುತ್ತಿದ್ದರು.
ನಮ್ಮ ಹಿರಿಯರು
ಕೇವಲ ಹನ್ನೆರಡು ರೂಪಾಯಿಗಳಿಂದ ಮಂಡಳಿಯನ್ನ ಆರಂಭ ಮಾಡಿದ್ದರು.
ಆದರೆ ಹಣಕ್ಕೆ ‌ಪ್ರಧಾನ್ಯತೆ ಕೊಡದೇ ಕಲೆಗೆ ಪ್ರಾಮುಖ್ಯತೆ ನೀಡಿದ್ದರಿಂದ‌ ಮಂಡಳಿ‌ ಇಂದಿನ ಹಂತ ಮುಟ್ಟಿದೆ. ತೊಂಭತ್ತು ವಸಂತಗಳನ್ಮ ಸಾರ್ಥಕತೆ‌‌ ದಕ್ಕಿದೆ.
ಸಂಕಷ್ಟದ ದಿನಗಳಲ್ಲಿ‌‌ ಶಿವಮೊಗ್ಗದ ‌ಯಕ್ಷಗಾನ ಪ್ರೇಮಿಗಳು,ಆಪ್ತರು‌
ಕಲೆಗೆ ನೀರೆರೆದು ಪೋಷಿಸಿದರು.
ಇಂತಹ ಕಲಾಸಂಘಟನೆ ತೊಂಭತ್ತು ವರ್ಷದ ಹರ್ಷದಲ್ಲಿದೆ. ಫೆಬ್ರವರಿ 22 ರಿಂದ‌ ಮಾರ್ಚ್ 2 ರವರೆಗೆ ‌ನಡೆಯಲಿರುವ ‌ಶಂಭುಹೆಗಡೆ ರಾಷ್ಡ್ರೀಯ ನಾಟ್ಯೋತ್ಸವಕ್ಕೆ‌‌ ಎಲ್ಲರೂ ಬನ್ನಿ‌ ಎಂದು
ಶಿವಾನಂದ ಹೆಗಡೆ ತಮ್ಮ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದರು.

ಅಭ್ಯುದಯ ಸಂಸ್ಥೆಯ ಲಕ್ಷ್ಮೀನಾರಾಯಣ ಕಾಶಿ ಎಲ್ಲರಿಗೂ ಸ್ವಾಗತ ಕೋರಿದರು.
ಡಾ.ರತ್ನಾಕರ್ ಶಿವಾನಂದ ಹೆಗಡೆ ಅವರನ್ನು ಆತ್ಮೀಯವಾಗಿ ಪರಿಚಯಿಸಿದರು.
ಸಂಘಟಕರಾದ ಬಾಬಣ್ಣ, ಡಾ.ಕೃಷ್ಣ ಎಸ್ ಭಟ್, ಡಾ.ಸಂಜಯ್, ಐತಾಳ್, ರಾಮಚಂದ್ರ,ಮುಂತಾದವರು‌ ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆಯಾಗಿ ಇಡಗುಂಜಿ ಮೇಳದವರಿಂದ
“ಸೀತಾಪಹರಣ” ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...