Monday, December 15, 2025
Monday, December 15, 2025

Rotary Club Shimoga ರೋಟರಿ 3182 ಜಿಲ್ಲಾ ಗವರ್ನರ್ ಆಗಿ ವಸಂತ ಹೋಬಳಿದಾರ್ ಆಯ್ಕೆ

Date:

Rotary Club Shimoga ರೋಟರಿ ಜಿಲ್ಲೆ 3182 ರ 2027-28 ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ಶಿವಮೊಗ್ಗದ ರೊ.ವಸಂತ್ ಹೋಬಳಿದಾರ್ ಪ್ರಚಂಡ ಬಹುಮತದಿಂದ ಜಯಗಳಿಸಿದ್ದು ಶಿವಮೊಗ್ಗದ ಎಲ್ಲಾ ರೋಟರಿ ಕ್ಲಬ್ ಗಳ ಸದಸ್ಯರು ಅಭಿನಂದಿಸಿದ್ದಾರೆ.

ಇತ್ತೀಚೆಗೆ ಉಡುಪಿಯಲ್ಲಿ ಜರುಗಿದ ನವೋತ್ಸಾಹ ಜಿಲ್ಲಾ ಸಮ್ಮೇಳನದಲ್ಲಿ ನಡೆದ ಜಿಲ್ಲಾ ಗವರ್ನರ್ ಚುನಾವಣೆಯಲ್ಲಿ ಚಲಾವಣೆಯಾದ 129 ಮತಗಳ ಪೈಕಿ 121 ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಜಯಗಳಿಸಿದ್ದಾರೆ.

Rotary Club Shimoga ರೋಟರಿ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷರು, ವಲಯ 11 ರ ಮಾಜಿ ಅಸಿಸ್ಟಂಟ್ ಗವರ್ನರ್, ಶಿವಮೊಗ್ಗ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ನ ಕಾರ್ಯದರ್ಶಿ, ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕ, ಯೂತ್ ರೆಡ್ಕ್ರಾಸ್ ನ ರಾಜ್ಯ ಉಪಸಮಿತಿಯ ಸದಸ್ಯ, ಕುವೆಂಪು ವಿಶ್ವವಿದ್ಯಾಲಯ ದ ಆಂಟಿ – ರಾಗಿಂಗ್ ಸಮಿತಿಯ ಸದಸ್ಯರು, ಸಿಮ್ಸ್ ವೈದ್ಯಕೀಯ ಮಹಾ ಸಂಸ್ಥೆಯ ಎಥಿಕ್ಸ್ ಸಮಿತಿಯ ಸದಸ್ಯರು, ರೋಟರಿ ಯ RMB ಫೆಲೋಷಿಪ್ ಗ್ರೂಪ್ ನ ಶಿವಮೊಗ್ಗ ಚಾಪ್ಟರ್ ನ ಸಂಸ್ಥಾಪಕ ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉನ್ನತ ಕೌಶಲ್ಯಾಭಿವೃದ್ಧಿ ಕೇಂದ್ರದ ಚೇರ್ಮನ್, ಶಿವಮೊಗ್ಗ ಜಿಲ್ಲಾ ಭಗೀರಥ ಸಹಕಾರ ಸಂಘದ ಉಪಾಧ್ಯಕ್ಷ, ಭಗೀರಥ ಜಿಲ್ಲಾ ನೌಕರರ ಮತ್ತು ವೃತ್ತಿಪರರ ಸಂಘದ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ಹಿಂದೂ ಎಕನಾಮಿಕ್ ಫೋರಂನ ಸಂಸ್ಥಾಪಕ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ನೇರ ನಡೆ ನುಡಿಯ ವ್ಯಕ್ತಿತ್ವದ ಉತ್ಸಾಹಿ ಸಮಾಜ. ಸೇವಕರಾದ ವಸಂತ್ ಹೋಬಳಿದಾರ್ ರವರು ಐತಿಹಾಸಿಕ ಬಹುಮತದಿಂದ ಜಯಗಳಿಸಿರುವುದು ರೋಟರಿ ಶಿವಮೊಗ್ಗ ಪೂರ್ವಕ್ಕೆ ಹೆಮ್ಮೆ ತಂದಿದೆ, ಅವರ ಅವಧಿಯಲ್ಲಿ ಇತಿಹಾಸ ನಿರ್ಮಿಸುವಂತಹ ಸಾಮಾಜಿಕ ಸೇವಾ ಕಾರ್ಯಗಳು ಜರುಗಲಿ ಎಂದು ರೋಟರಿ ಶಿವಮೊಗ್ಗ ಪೂರ್ವದ ಮಾಜಿ ಅಸಿಸ್ಟಂಟ್ ಗವರ್ನರ್ ಗಳಾದ ಜಿ.ವಿಜಯಕುಮಾರ್, ಡಾ.ಗುಡದಪ್ಪ ಕಸಬಿ, ಚಂದ್ರಹಾಸ ರಾಯ್ಕರ್, ಎ ಟಿ ಸುಬ್ಬೇಗೌಡ ಹಾಗೂ ಅಧ್ಯಕ್ಷ ಅರುಣ್ ದೀಕ್ಷಿತ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಹಾಗು ಮಾಜಿ ಅಧ್ಯಕ್ಷರುಗಳಾದ ಎನ್ ಹೆಚ್ ಶ್ರೀಕಾಂತ್, ಮಹೇಶ್ ಆಲೆಮನೆ, ಮಂಜುನಾಥ್ ಕದಂ, ಸತೀಶ್ಚಂದ್ರ, ಸುಮತಿ, ಅಭಿಷೇಕ್ ಮೋಹನ್, ರವಿ ಕೋಟೋಜಿ, ಕಡಿದಾಳ್ ಗೋಪಾಲ್, ಆಧಿಮೂರ್ತಿ, ಕೆ ಬಿ ರವಿಶಂಕರ್, ಪ್ರತಾಪ್ ಎಂ ಎಲ್ ಹಾಗು ಕಿಶೋರ್ ಕುಮಾರ್, ಸಿ ಕೆ ವಿಜಯಕುಮಾರ್,ಇನ್ನರ್ ವೀಲ್. ಮಾಜಿ ಅಧ್ಯಕ್ಷರು. ಬಿಂದು ವಿಜಯ್ ಕುಮಾರ್ ಮುಂತಾದವರು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...