Sunday, December 14, 2025
Sunday, December 14, 2025

Youth Hostel Association of India ಉತ್ತಮ ಸಮಾಜ ಕಾರ್ಯ ಜನರ ಮನಸ್ಸಿನಲ್ಲಿ ಉಳಿಯುತ್ತದೆ- ಎನ್.ಗೋಪಿನಾಥ್

Date:

Youth Hostel Association of India ಜೀವನದಲ್ಲಿ ನಾವು ಮಾಡಿದ ಉತ್ತಮ ಸೇವಾ ಕಾರ್ಯಗಳು ಸದಾ ಜನರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯುತ್ತವೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ವಾಗೀಶ್ ಅವರು ವೃತ್ತಿ ಜೀವನದ ಜತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವುದರ ಮುಖಾಂತರ ಜನರಿಗೆ ಹೆಚ್ಚು ಪರಿಚಿತರು. ನಿವೃತ್ತಿ ನಂತರ ಅವರ ಸೇವೆ ಇನ್ನೂ ಸಮಾಜಕ್ಕೆ ಹೆಚ್ಚು ಸಿಗಲಿ ಎಂದು ಹಾರೈಸಿ ಸನ್ಮಾನಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ, ಯೂತ್ ಹಾಸ್ಟೆಲ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಾಗೀಶ್ ಅವರು ಯೂತ್ ಹಾಸ್ಟೆಲ್, ಸೈಕಲ್ ಕ್ಲಬ್, ಕರ್ನಾಟಕ ಸಂಘ. ವಿಕಾಸ ರಂಗ ಹಾಗೂ ರೋಟರಿ ಸಂಸ್ಥೆಗಳಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ. ನಿವೃತ್ತಿ ಜೀವನದ ನಂತರ ಇವರ ಸೇವೆ ಸಮಾಜಕ್ಕೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ದೊರಕಲಿ ಎಂದು ಅಭಿನಂದಿಸಿದರು.
Youth Hostel Association of India ಸನ್ಮಾನ ಸ್ವೀಕರಿಸಿ ವಾಗೀಶ್ ಮಾತನಾಡಿ, ಎಲ್ಲರಿಗೂ ಜೀವನ ಕಟ್ಟಿಕೊಳ್ಳಲು ಉದ್ಯೋಗ ಬೇಕು. ರಾಜ್ಯ ಹಣಕಾಸು ಸಂಸ್ಥೆ ನನಗೆ ಪ್ರಾರಂಭದಲ್ಲಿ ದಿನಗೂಲಿ ನಂತರ ಖಾಯಂ ಉದ್ಯೋಗ ನೀಡಿ ಸಹಕರಿಸಿದ್ದರಿಂದ ಉತ್ತಮ ಜೀವನ ನಡೆಸಲು ಅನುಕೂಲವಾಯಿತು. ಸಮಾಜ ಸೇವೆ ಮಾಡಲು ಸಹಕಾರಿಯಾಯಿತು. ಸಂಸ್ಥೆ ಅಧಿಕಾರಿಗಳು, ಸಹದ್ಯೋಗಿಗಳ ಮಾರ್ಗದರ್ಶನದಿಂದ ಪ್ರವರ್ತಕರು ಸಂತೃಪ್ತಿಯಿಂದ ನಮ್ಮ ಕಾರ್ಯ ಶ್ಲಾಘಿಸಿದ್ದಾರೆ. ಇದರಿಂದ ಸಮಾಜದ ಹಲವಾರು ಸಂಘಟನೆಯಲ್ಲಿ ಕೆಲಸ ಮಾಡಲು ಅವಕಾಶ ದೊರೆತಿದೆ. ವ್ಯಕ್ತಿಗತವಾಗಿ ಗುರುತಿಸಿಕೊಳ್ಳಲು ಸಾದ್ಯವಾಗಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಹಾಗೂ ಎಲ್ಲಾ ಪದಾಧಿಕಾರಿಗಳು ಆತ್ಮೀಯವಾಗಿ ಅಭಿನಂದಿಸಿದರು. ಕಾರ್ಯದರ್ಶಿ ಸುರೇಶ್ ಕುಮಾರ್, ನಿರ್ದೇಶಕರಾದ ಮಲ್ಲಿಕಾರ್ಜುನ್ ಕಾನೂರು, ಮಮತಾ, ಡಾ. ಗುರುಪಾದಪ್ಪ, ದಿಲೀಪ್ ನಾಡಿಗ್, ವೇಣುಗೋಪಾಲ್, ಗೋಪಿನಾಥ್, ರವಿಕುಮಾರ್, ನಾಗಲಾಬಿಕಾ, ಬಿಂದು ವಿಜಯಕುಮಾರ್, ರೇವಣ್ಣ, ಭಾರತಿ, ಮಮತ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...