Monday, December 15, 2025
Monday, December 15, 2025

Upper Bhadra Project ಲಂಚ ಸ್ವೀಕಾರ ಪ್ರಕರಣ. ನೀರಾವರಿ ನಿಗಮ ಸೆಕ್ಷನ್ ಆಫೀಸರ್ & ಲೈಟ್ ಮಜದೂರ್ ಲೋಕಾಯುಕ್ತ ಬಲೆಗೆ

Date:

Upper Bhadra Project  ಪಿರ್ಯಾದುದಾರರಾದ ಶ್ರೀ.ವಿ.ರವಿ. ಬಿನ್ ನಾಗರಾಜ.ವಿ. 32ವರ್ಷ, ಪಿಡಬ್ಲ್ಯೂಡಿ ಕ್ಲಾಸ್-02, ಕಾಂಟ್ರ್ಯಾಕ್ಟರ್ ಕೆಲಸ, ವಾಸ: ಶೆಟ್ಟಿ ಅಂಗಡಿ ಹತ್ತಿರ. ಕಾಕರ್ಲ ತೋಟ, ಬಳ್ಳಾರಿ ಟೌನ್ ರವರು ಪಿಡಬ್ಲ್ಯೂಡಿ ಕ್ಲಾಸ್-02 ಕಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್‌ಪಿ ವ್ಯಾಪ್ತಿಯ ಭದ್ರಾವತಿ ತಾಲ್ಲೂಕಿನ ಗೋಂಧಿ ಬಲದಂಡೆ ನಾಲೆಯಲ್ಲಿ ಶಿಕ್ಷೆ ತಗೆಯಲು ಇ-ಟೆಂಡರ್ ಕರೆದಿದ್ದು, ಅದರಂತೆ ಪಿರ್ಯಾದಿಗೆ 2023ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಇ-ಟೆಂಡರ್ ಆಗಿರುತ್ತದೆ.

ಈ ಎರಡು ಕಾಮಗಾರಿಗಳ ಒಟ್ಟು ಮೊತ್ತ ಜಿಎಸ್‌ಟಿ ಸೇರಿ 9,16,999/-ರೂಗಳಾಗಿದ್ದು, ಪಿರ್ಯಾದಿಯು 2023 ನೇ ಡಿಸೆಂಬರ್ ತಿಂಗಳಲ್ಲಿ ಕೆಲಸ ಪ್ರಾರಂಭಿಸಿ, 2024 ನೇ ಜನವರಿ ತಿಂಗಳಲ್ಲಿ ಶಿಲ್ಪ ತಗೆಯುವ ಕಾಮಗಾರಿಯನ್ನು ಮುಕ್ತಾಯ ಮಾಡಿರುತ್ತಾರೆ. ಪಿರ್ಯಾದಿಯು ಕಾಮಗಾರಿಯ ಬಿಲ್ ಅನ್ನು ಮಂಜೂರು ಮಾಡುವಂತೆ ಹಲವಾರು ಬಾರಿ ಕಛೇರಿಗೆ ಹೋಗಿ ಕೇಳಿದ್ದು, ಟೆಂಡರ್ ಹಣ ಬಿಡುಗಡೆ ಮಾಡಿರುವುದಿಲ್ಲ. ದಿನಾಂಕ:-27-12-2024 ರಂದು ಪಿರ್ಯಾದಿಯು ಡಿ.ಬಿ ಹಳ್ಳಿಯ ಕರ್ನಾಟಕ ನೀರಾವರಿ ನಿಮಗ ನಿಯಮಿತ ಕಛೇರಿಗೆ ಹೋಗಿ, ಕಛೇರಿಯಲ್ಲಿದ್ದ ಸೆಕ್ಷನ್ ಆಫೀಸರ್ ಕೊಟ್ರಪ್ಪ,ಟಿ, ರವರನ್ನು ಭೇಟಿ ಮಾಡಿ, ತನ್ನ ಕಾಮಗಾರಿಯ ಬಿಲ್ ಅನ್ನು ಮಂಜೂರು ಮಾಡುವಂತೆ ಕೇಳಿಕೊಂಡಾಗ ಕೊಟ್ರಪ್ಪರವರು ನಿನ್ನ ಬಿಲ್ ಮಂಜೂರು ಮಾಡಬೇಕಾದರೆ ಇನ್ನು 1.20,000/-ರೂಗಳನ್ನು ಕೊಟ್ಟರೆ ಮಾತ್ರ ಮಾಡುತ್ತೇವೆಂದು ಇಲ್ಲದಿದ್ದರೆ ನಿನ್ನ ಕಾಮಗಾರಿಯ ಬಿಲ್ ಹಣವನ್ನು ಬಿಡುಗಡೆ ಮಾಡುವುದಿಲ್ಲವೆಂದು ಪಿರ್ಯಾದಿಗೆ ಹೇಳಿರುತ್ತಾರೆ.

Upper Bhadra Project  ಪಿರ್ಯಾದಿಯು ಅವರು ಮಾತನಾಡಿದ್ದನ್ನು ಪಿಯಾದಿಯ ಮೊಬೈಲ್ ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಪಿರ್ಯಾದಿಗೆ ಲಂಚದ ಹಣವನ್ನು ನೀಡಲು ಇಷ್ಟವಿಲ್ಲದೇ ಇದುದ್ದರಿಂದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್‌ಪಿ ವ್ಯಾಪ್ತಿಯ ಡಿ.ಬಿ. ಹಳ್ಳಿಯ ಸೆಕ್ಷನ್ ಅಫೀಸರ್ ಕೊಟ್ರಪ್ಪ ರವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಸಾರಾಂಶವಾಗಿರುತ್ತದೆ.

ದಿನಾಂಕ:01/01/2025 ರಂದು ಸಂಜೆ 04:30 ಗಂಟೆ ಸಮಯದಲ್ಲಿ ಅಪಾದಿತ ಅಧಿಕಾರಿ ಶ್ರೀ.ಕೊಟ್ರಪ್ಪ ಸೆಕ್ಷನ್ ಆಫೀಸರ್ (ಪ್ರಬಾರ ಎ.ಇ.ಇ) ಮತ್ತು ಅವರ ಕಛೇರಿಯ ಲೈಟ್ ಮಜದೂರ್ ಶ್ರೀ.ಅರವಿಂದ್ ರವರು ಪಿರಾದುದಾರರಿಂದ ರೂ 1,20,000/-ಲಂಚದ ಹಣವನ್ನು ಅವರ ಕಛೇರಿಯಲ್ಲಿ ಸ್ವೀಕರಿಸಿದ್ದು, ಸದರಿ ಆಪಾದಿತ ಸರ್ಕಾರಿ ನೌಕರರನ್ನು ಟ್ರ್ಯಾಪ್ ಮಾಡಲಾಗಿರುತ್ತದೆ. ಮತ್ತು ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಅಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ವೀರಬಸಪ್ಪ.ಎಲ್.ಕುಸಲಾಪುರ ರವರು ಕೈಗೊಂಡರು.

ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಶ್ರೀ.ಮಂಜುನಾಥ ಚೌದರಿ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ನೇತೃತ್ವದಲ್ಲಿ ನಡೆಸಲಾಗಿದ್ದು ಟ್ರ್ಯಾಪ್ ಕಾಲಕ್ಕೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಹೆಚ್.ಎಸ್ ಸುರೇಶ್, ಶ್ರೀ.ಪ್ರಕಾಶ್, ಸಿಬ್ಬಂದಿಯವರಾದ ಶ್ರೀ.ಯೋಗೇಶ್ ಸಿ.ಹೆಚ್.ಸಿ. ಶ್ರೀ.ಟೀಕಪ್ಪ ಸಿ.ಹೆಚ್.ಸಿ, ಶ್ರೀ.ಸುರೇಂದ್ರ ಸಿ.ಹೆಚ್.ಸಿ, ಶ್ರೀ.ಮಂಜುನಾಥ್ ಎಂ. ಶ್ರೀ.ಪ್ರಶಾಂತ್ ಕುಮಾರ್, ಸಿ.ಪಿ.ಸಿ, ಶ್ರೀ ಚೆನ್ನೇಶ್, ಸಿ.ಪಿ.ಸಿ ಶ್ರೀ.ಅರುಣ್ ಕುಮಾರ್ ಸಿ.ಪಿ.ಸಿ, ಶ್ರೀ ದೇವರಾಜ್, ಸಿ.ಪಿ.ಸಿ ಶ್ರೀ ಪ್ರಕಾಶ್, ಸಿ.ಪಿ.ಸಿ ಶ್ರೀ ಆದರ್ಶ ಸಿ.ಪಿ.ಸಿ ಶ್ರೀಮತಿ ಪುಟ್ಟಮ್ಮ.ಎನ್. ಮ.ಪಿ.ಸಿ, ಶ್ರೀಮತಿ ಅಂಜಲಿ ಮ.ಪಿ.ಸಿ ಶ್ರೀ ಗಂಗಾಧರ ಎ.ಪಿ.ಸಿ. ಶ್ರೀ ಪ್ರದೀಪ್, ಎ.ಪಿ.ಸಿ ರವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...