Monday, February 2, 2026
Monday, February 2, 2026

Shimoga News ವ್ಯಾವಹಾರಿಕ ಕೌಶಲ್ಯ,ವ್ಯಸನಮುಕ್ತಬೆಳವಣಿಗೆಯಿಂದ ಸಮುದಾಯದ ಅಭಿವೃದ್ದಿ -ಪ್ರೊ.ಸತ್ಯನಾರಾಯಣ

Date:

Shimoga News ಸಮುದಾಯ ಅಭಿವೃದ್ದಿಗೆ, ಸಮಗ್ರ ಪ್ರಜೆಗಳ ಆರ್ಥಿಕ, ಸಾಮಾಜಿಕ, ವ್ಯವಹಾರಿಕ, ಕೌಶಲ್ಯ, ವ್ಯಸನ ಮುಕ್ತ ಬೆಳವಣಿಗೆ ಯಿಂದ ಮಾತ್ರ ಸಾದ್ಯ ಎಂದು ರೋಟರಿ ಜ್ಯೂಬಿಲಿಯ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೋ.ಸತ್ಯನಾರಾಯಣ್ ಮಾತನಾಡುತ್ತಿದ್ದರು.
ಜನರ ಗುಂಪು ಸಮುದಾಯ ಎನಿಸಿ ಕೊಳ್ಳುತ್ತದೆ. ತೆಗೆದು ಕೊಳ್ಳು ತೀರ್ಮಾನ, ಮುಂದಾಲೋಚನೆಗಳು ಜೀವನ ಉತ್ತಮ ಪಡಿಸಿ ಕೊಳ್ಳಲು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.
ಆರ್ಥಿಕವಾಗಿ ಅಭಿವೃದ್ದಿ ಹೋಂದಿದರೆ ಸಾಲದು. ಮಾನವನ ಜೀನಕ್ಕೆ ಅಗತ್ಯನಾದ ಸಕಲ ಸೌಲತ್ತು ಆ ದೇಶದಲ್ಲಿ ದೊರಕಿದಾಗ ಮಾತ್ರ ಅಭಿವೃದ್ದಿ ಹೊಂದಿದ ದೇಶ ಎನಿಸಿಕೊಳ್ಳುತ್ತದೆ.
ವಿಶ್ವದಲ್ಲೆ ಅತೀ ಹೆಚ್ಚು ಜನ ಸಂಖ್ಯೆ ಹೋಂದಿರುವ ನಮ್ಮ ದೇಶದ ಪ್ರಜೆಗಳ ನೆಮ್ಮದಿಯಲ್ಲಿ ವಿಶ್ವದಲ್ಲೆ 144ನೇ ಸ್ಥಾನದಲ್ಲಿ ಇದ್ದೇವೆ. ಚೈನಾ 98, ಸಣ್ಣ ದೇಶಗಳು ಹೆಚ್ಚಿನ ಸ್ಥಾನ ಪಡೆದಿವೆ.
78213ಕೋಟಿ ಹಣ ನಮ್ಮ ದೇಶದ ಬ್ಯಾಂಕ್ ಗಳಲ್ಲಿ ಹನ್ನೆರಡು ವರ್ಷದಿಂದ ಉಪಯೋಗಿಸದೆ ಹಾಗೆ ನಿಖರ ಠೇವಣಿ ಇದೆಯಂತೆ. ಹೀಗೆ ನಿರಪಯುಕ್ತ ಆಸ್ತಿಗಳು ದೇಶದ ಪ್ರಗತಿಗೆ ತೊಡಕಾಗುತ್ತವೆ. ಇತರರನ್ನು ಕಂಡು ಅವರಂತೆ ಆಗಬೇಕೆಂದು, ಸಾಲ ಮಾಡಿ ಪ್ರತಿಷ್ಟೆ ಹೆಚ್ಚಿಸಿಕೊಳ್ಳುವ ಬದಲು, ಹಾಸಿಗೆ ಇದ್ದಷ್ಟು ಕಾಲು ಚಾಚುವುದು ದೇಶದ ಪ್ರಗತಿಗೆ ಪೂರಕ.
ಸ್ವ-ಹಿತದಿಂದಲೂ ದೇಶದ ಪ್ರಗತಿ ಸಾದ್ಯ ಎಂದು ಆರ್ಥಿಕ ತಜ್ಞ ಆಡಮ್ ಸ್ಮಿತ್ ಹೇಳಿದ್ದಾರೆ. ಜೀವನದಲ್ಲಿ ಆಸೆ ಇರಬೇಕು. ದುರಾಸೆ ಇರಬಾರದು ಎಂದು ಮಹಾತ್ಮಗಾಂಧಿ ಹೆಳಿದ್ದಾರೆ.
Shimoga News ಸ್ವಹಿತ ಮೀರಿದ ಸೇವೆಯಿಂದ ರೋಟರಿ ಸಂಸ್ಥೆ ಇಂದು ವಿಶ್ವದಲ್ಲಿಯೆ ಪ್ರಥಮ ಸ್ಥಾನದಲ್ಲಿ ಇದ್ದು ಸಮುದಾಯ ಸೇವೆಯಲ್ಲಿ ಮುಂಚೋಣಿಯಲ್ಲಿದೆ ಎಂದರು.
ಅಧ್ಯಕ್ಷೆ ರೊ.ರೂಪ ಪುಣ್ಯಕೋಟಿ ಸ್ವಾಗತಿಸಿದರು
ಎಸ್.ಎಸ್.ವಾಗೇಶ್ ಪ್ರಾಸ್ಥಾವಿಕವಾಗಿ ಮಾತನಾಡಿದರು, ರೇಣುಕಾರಾದ್ಯ ನಿರೂಪಿಸಿದರು, ಸತ್ಯನಾರಾಯಣ್ ವಂದಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...