Saturday, December 6, 2025
Saturday, December 6, 2025

Rotary Club Shimoga ಆತ್ಮಶ್ರದ್ಧೆ ಇಲ್ಲದವರು ಭಗವಂತನಲ್ಲಿ‌ ಶ್ರದ್ಧೆ ಇರಿಸಲು ಅಸಾಧ್ಯ ಎಂದ ಗುರುನಾನಕರು- ಕಿರಣ್ ಕುಮಾರ್

Date:

Rotary Club Shimoga ಶಿವಮೊಗ್ಗ ನಗರದ ಓಟಿ ರಸ್ತೆಯಲ್ಲಿರುವ ಗುರುದ್ವಾರ ಗುರುನಾನಕ್ ದರಬಾರ್‌ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸದಸ್ಯರು ಹಾಗೂ ಸಿಖ್ ಸಮುದಾಯದ ಜನರು 555ನೇ ಗುರುನಾನಕ್ ಜಯಂತಿ ಆಚರಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಸಿಖ್ ಸಮುದಾಯದ ಸಂಸ್ಥಾಪಕ ಮೊದಲ ಗುರು ಗುರುನಾನಕ್ ಸಾಹೇಬ ಅವರ 555ನೇ ಜಯಂತಿ ಹಾರ್ದಿಕ ಶುಭಾಶಯಗಳು. ಗುರುನಾನಕ್ ಅವರು ಆತ್ಮಶ್ರದ್ಧೆ ಇಲ್ಲದವರು ಭಗವಂತನಲ್ಲಿ ಶ್ರದ್ಧೆ ಹೊಂದಿರುವುದು ಸಾಧ್ಯವಿಲ್ಲ ಎಂದು ತಿಳಿಸಿದರು.

ಪ್ರೀತಿ, ಶಾಂತಿ, ಸತ್ಯದ ಸಂದೇಶಗಳನ್ನು ವಿಶ್ವಕ್ಕೆ ಸಾರಿದ ಮಹಾನ್ ದಾರ್ಶನಿಕ. ಅವರ ತತ್ವ ಸಿದ್ಧಾಂತಗಳು ಇಂದಿಗೂ ಆದರ್ಶವಾಗಿವೆ. ಜೀವನದಲ್ಲಿ ನಾವೆಲ್ಲರೂ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮಾಜಿ ಅಧ್ಯಕ್ಷ ಧರ್ಮೇಂದ್ರ ಸಿಂಗ್ ಅವರು ಕಾರ್ಯಕ್ರಮ ಸಂಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸಿಖ್ ಸಮುದಾಯದ ಪ್ರಮುಖರಾದ ಪ್ರೊಬ್ಜೋತ್ ಸಿಂಗ್, ಜಗದೀಶ್ ಕೌರ್, ಗುರುಮೇಲ್ ಸಿಂಗ್, ಜಿತೆಂದ್ರ ಸಿಂಗ್, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಚಂದ್ರು ಜೆಪಿ, ಇಂದ್ರೇಶ್, ರಾಜೇಶ್, ಈಶ್ವರ್ ಬಿವಿ, ಗೀತಾ ಜಗದೀಶ್, ಶುಭಾ ಚಿದಾನಂದ್, ರಂಜಿತ್ ಕೌರ್ ಹಾಗೂ ಸೆಂಟ್ರಲ್ ಕ್ಲಬ್ಬಿನ ಎಲ್ಲಾ ಸದಸ್ಯರು, ಸಮಾಜದ ಎಲ್ಲ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...