Monday, February 2, 2026
Monday, February 2, 2026

Ministry of Youth Affairs and Sports ನವೆಂಬರ್ 16. ಶಿವಮೊಗ್ಗ ಜಿಲ್ಲಾಯುವಜನೋತ್ಸವ-2024

Date:

Ministry of Youth Affairs and Sports, ಭಾರತ ಸರ್ಕಾರ, ಯುವ ವ್ಯವಹಾರ ಮತ್ತುಕ್ರೀಡಾ ಸಚಿವಾಲಯ,ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಶಿವಮೊಗ್ಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಶಿವಮೊಗ್ಗ, ನೆಹರು ಯುವ ಕೇಂದ್ರ ಶಿವಮೊಗ್ಗ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ,ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ-2024 ಪಂಚಪ್ರಾಣ-ಭಾರತ@2047 ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರ, ಶಿವಮೊಗ್ಗದಲ್ಲಿ ದಿನಾಂಕ 16.11.2024 ರಂದು ನಡೆಸಲಾಗುವುದು.

ಈ ಕಾರ್ಯಕ್ರಮದಲ್ಲಿ ಯುವಜನತೆಗೆ ವಿವಿಧ ಪ್ರತಿಭೆಗಳ ಅನಾವರಣ ಹಾಗೂ ಸ್ಪರ್ಧಾಕಾರ್ಯಕ್ರಮವನ್ನು ನಡೆಸಲಾಗುವುದು. ಕಾರ್ಯಕ್ರಮವು ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೂ ಇರುವುದು. ಸ್ಥಳೀಯ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಉದ್ದೇಶದಿಂದ ಹಾಗೂ ಮನೋರಂಜನೆ ಅಲ್ಲದೇ ಸಾಮಾಜಿಕ ಸಂದೇಶವನ್ನು ಯುವಜನರಿಗೆ ಮುಟ್ಟಿಸುವ ಕೆಲಸವು ಈ ಸ್ಪರ್ಧಾ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಈ ಕಾರ್ಯಕ್ರಮದ ಸ್ಟರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ15ರಿಂದ29 ವರ್ಷದೊಳಗಿರಬೇಕು(01.01.2025)ಶಿವಮೊಗ್ಗ ಜಿಲ್ಲೆಯವರಿಗ ಮಾತ್ರ ಅವಕಾಶ. ಇದರಲ್ಲಿ ವಿಜೇತರಾದ ತಂಡ/ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ/ಪ್ರಶಸ್ತಿ ಪತ್ರ ನೀಡಲಾಗುವುದು.

ಸ್ಪರ್ಧೆಗಳ ವಿವರ ಮತ್ತು ನಿಯಮಗಳು:ಯುವಕಲಾವಿದ ಸ್ಪರ್ಧೆ(ಚಿತ್ರಕಲೆ)ಸಮಯಾವಕಾಶ 90 ನಿಮಿಷ ಚಿತ್ರಬಿಡಿಸುವ ಪರಿಕರಗಳನ್ನು ಸ್ಪರ್ಧಿಗಳೆ ತರತಕ್ಕದ್ದು. ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು ಪ್ರಥಮ-2500/-ದ್ವಿತೀಯ-1500/-ತೃತೀಯ-1000/-

ಪರಿಕಲ್ಪನೆ: ಪಂಚಪ್ರಾಣ-ಭಾರತ@2047.
ಯುವ ಬರಹಗಾರಸ್ಪರ್ಧೆ (ಕವಿತೆ) :ಸಮಯಾವಕಾಶ 60 ನಿಮಿಷ (1000 ಪದಗಳಿಗೆ ಮೀರದಂತೆಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಬರೆಯಬಹುದು.ಪ್ರಥಮ-2500/-, ದ್ವಿತೀಯ-1500/-, ತೃತೀಯ-1000/-ಪರಿಕಲ್ಪನೆ: ಪಂಚಪ್ರಾಣ-ಭಾರತ@2047.

ಯುವ ಬರಹಗಾರ ಸ್ಪರ್ಧೆ (ಕಥೆ):ಸಮಯಾವಕಾಶ60 ನಿಮಿಷ (1000 ಪದಗಳಿಗೆ ಮೀರದಂತೆಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಬರೆಯಬಹುದು.ಪ್ರಥಮ-2500/-, ದ್ವಿತೀಯ-1500/-, ತೃತೀಯ-1000/-ಪರಿಕಲ್ಪನೆ: ಪಂಚಪ್ರಾಣ-ಭಾರತ@2047.

ಭಾಷಣ ಸ್ಪರ್ಧೆ : ಸಮಯಾವಕಾಶ3 ನಿಮಿಷ, ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತನಾಡಲುಅವಕಾಶವಿರುತ್ತದೆ. (ಕನ್ನಡ ಭಾಷೆರಾಜ್ಯ ಮಟ್ಟದವರೆಗೆ ಮಾತ್ರ ಸೀಮಿತವಾಗಿದೆ.) ಪ್ರಥಮ-5000/-ದ್ವಿತೀಯ-2500/-ತೃತೀಯ-1500

ಪರಿಕಲ್ಪನೆ: ಪಂಚಪ್ರಾಣ-ಭಾರತ@2047.

ಸಾಂಸ್ಕ್ರೃತಿಕ ಉತ್ಸವ–(ಜನಪದ ನೃತ್ಯತಂಡ ಮತ್ತು ವೈಯಕ್ತಿಕ) :- ಭಾಗವಹಿಸುವವರ ಸಂಖ್ಯೆತAಡದಲ್ಲಿ10 ಜನ, ವೈಯಕ್ತಿಕ05 ಜನಇರಬೇಕು. ಸಮಯಾವಕಾಶ15 ನಿಮಿಷ. ತಂಡದ ಬಹುಮಾನ ಪ್ರಥಮ7000/ ದ್ವಿತೀಯ-5000/-ತೃತೀಯ-3000/- ಮತ್ತು ವೈಯಕ್ತಿಕ ಬಹುಮಾನ ಪ್ರಥಮ-3000/-ದ್ವಿತೀಯ-2000/-, ತೃತೀಯ-1000/- ನೀಡಲಾಗುವುದು. ನೃತ್ಯವುಜನಪದ ಪ್ರಕಾರ ಮತ್ತುಕರ್ನಾಟಕ/ಭಾರತೀಯ ಶೈಲಿಯದ್ದಾಗಿರಬೇಕು.

Ministry of Youth Affairs and Sports, ಸಾಂಸ್ಕೃತಿಕ ಉತ್ಸವ–(ಜನಪದಗೀತೆತಂಡ ಮತ್ತು ವೈಯಕ್ತಿಕ) :- ಭಾಗವಹಿಸುವವರ ಸಂಖ್ಯೆ ತಂಡದಲ್ಲಿ10 ಜನ, ವೈಯಕ್ತಿಕ 05 ಜನ ಇರಬೇಕು. ಸಮಯಾವಕಾಶ07 ನಿಮಿಷ. ತಂಡದ ಬಹುಮಾನ ಪ್ರಥಮ-5000/-ದ್ವಿತೀಯ- 3000/- ತೃತೀಯ-2000/- ಮತ್ತು ವೈಯಕ್ತಿಕ ಬಹುಮಾನ ಪ್ರಥಮ-3000/-ದ್ವಿತೀಯ-2000/-, ತೃತೀಯ-1000/-ನೀಡಲಾಗುವುದು. ಹಲವು ಜನಪದ ಹಾಡುಗಳ ಮಿಶ್ರಿತ ಹಾಡುಗಾರಿಕೆಗೆ ಅವಕಾಶವಿಲ್ಲ. ಚಲನಚಿತ್ರ ಗೀತೆಗಳನ್ನು ಹಾಡಲು ಅವಕಾಶವಿರುವುದಿಲ್ಲ.

ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. (ಜನಪದಗೀತೆ & ನೃತ್ಯ ಹೊರತು ಪಡಿಸಿ) ಸ್ಪರ್ಧಾ ಕಾರ್ಯಕ್ರಮದಲ್ಲಿ ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ.

ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆ ಇರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು MYBHARAT ಪೋರ್ಟಲ್ (mybharat.gov.in) ನಲ್ಲಿರಿಜಿಸ್ಟ್ರೆಷನ್ ಮಾಡಿಕೊಳ್ಳತಕ್ಕದ್ದು.
ದಿನಾಂಕ 16.11.2024ರಂದು ಬೆಳಿಗ್ಗೆ 10 ಗಂಟೆಯ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ 08182-220883, 9961332968, 9900280416 ಸಂಪರ್ಕಿಸಬಹುದೆಂದು ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ತಿಳಿಸಿದ್ದಾರೆ.

ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಕೊಳ್ಳತಕ್ಕದ್ದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...