Saturday, December 6, 2025
Saturday, December 6, 2025

DVS College of Arts, Science and Commerce ಬಸವಣ್ಣನವರ ವಚನ ಓದಿ ಅರ್ಥೈಸಿಕೊಂಡು ಜೀವನದಲ್ಲಿ‌ ಅಳವಡಿಸಿಕೊಳ್ಳಬೇಕು- ಡಾ.ಅರವಿಂದ ಜತ್ತಿ

Date:

ಕನ್ನಡತ್ವ ಮತ್ತು ಬಸವಣ್ಣ ನೆಲದ ಅಸ್ಮಿತೆಗೆ ಮೆರುಗು ನೀಡಿದ ಎರಡು ಸಂಗತಿಗಳು ಎಂದು ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾಷೆಯಾಗಿ ಪ್ರಾಚೀನತೆಯಿಂದ ಆಧುನಿಕತೆಯವರೆಗೆ ಕನ್ನಡವೂ, ಧರ್ಮದಾಚೆಗೆ ವಚನಗಳು ತನ್ನತನವನ್ನು ಹುಡುಕಿಕೊಳ್ಳುವ ಪ್ರಮೇಯದಿಂದ ಬಸವಣ್ಣನೂ ನಮಗೆ ಮುಖ್ಯವಾಗಬೇಕು. ಆಗ ನಾವು ನಮ್ಮನ್ನು ಹುಡುಕುತ್ತ ವಾಸ್ತವ ಜ್ಞಾನದೆಡೆಗೆ ಸಾಗುತ್ತೇವೆ ಎಂದು ತಿಳಿಸಿದರು.

ಬಸವಣ್ಣನ ವಚನಗಳು ಸರಳವಾಗಿವೆ. ವಚನಗಳನ್ನು ಅಧ್ಯಯನ ನಡೆಸಿ ಅರ್ಥ ಮಾಡಿಕೊಳ್ಳಬೇಕು. ವಚನದಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ ಎಂದರು.

ಜಗದಗಲ ಮುಗಿಲಗಲ… ವಚನದ ಬಗೆಯ ಅರ್ಥ ವಿವರಣೆಯನ್ನು ಸಂಶೋಧಿತ ವಿಡಿಯೋ ತುಣುಕುಗಳ ಮೂಲಕ ವಿಶ್ಲೇಷಣೆ ಮಾಡಿದರು.

DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿಯ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಅತೀವ ಅನುಭವವುಳ್ಳ ಡಾ. ಅರವಿಂದ ಜತ್ತಿ ಅವರು ಕನ್ನಡ ನಾಡಿನ ಉತ್ಸವವನ್ನು ಹಬ್ಬವಾಗಿಸುವ ಚಾತಿಯುಳ್ಳವರು. ಅವರಲ್ಲಿರುವ ಅಗಾಧ ಜ್ಞಾನ ಎಲ್ಲರಿಗೂ ಸ್ಪೂರ್ತಿ ಎಂದು ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಸಹ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯ ಆಳವನ್ನು ಕುತೂಹಲದ ಕಣ್ಣಿನಿಂದ ಗ್ರಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ರುದ್ರಪ್ಪ ಕೊಳಲೆ ಮಾತನಾಡಿ, ಜತ್ತಿ ಅವರ ಭಾಷೆಯ ಪ್ರೇಮ ದೊಡ್ಡದು. ಅವರು ವಚನಗಳನ್ನು ಅನೇಕ ಭಾಷೆಗಳಿಗೆ ಅನುವಾದ ಮಾಡಿಸುವ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ವೆಂಕಟೇಶ, ಪ್ರೊ. ಕುಮಾರಸ್ವಾಮಿ, ಪ್ರೊ. ಸಾವಿತ್ರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...