Saturday, December 6, 2025
Saturday, December 6, 2025

Thirtahalli Police ತೀರ್ಥಹಳ್ಳಿ ಮೃತ‌ವ್ಯಕ್ತಿಯ ಬಗ್ಗೆ ವಾರಸುದಾರರಿಗೆ ಮಾಹಿತಿ ತಿಳಿಸಲು ಪೊಲೀಸ್ ಪ್ರಕಟಣೆ

Date:

Thirtahalli Police ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ರಮೇಶ್, ಸುಮಾರು 45 ವರ್ಷ ಈತನು ಅಸ್ವಸ್ಥನಾದ ಕಾರಣಕ್ಕೆ ಅ.24 ರಂದು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾನೆಂದು
ತಿಳಿಸಿರುತ್ತಾನೆ.

ರಮೇಶ್ ತಾನು ಮಂಗಳೂರಿನ ಕಡೆಯಿಂದ ಬಂದವನು, ತನಗೆ ಯಾರೂ ಇಲ್ಲ, ಕೆಲಸ ನೀಡಿರೆಂದು ಕೂಲಿ ಕೆಲಸಕ್ಕೆ ಸೇರಿರುತ್ತಾನೆ. ಪ್ರತಿ ದಿನ ಮದ್ಯಪಾನ ಮಾಡಿ ಅಸ್ವಸ್ಥನಾಗಿರುತ್ತಾನೆ. ಶವವನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Thirtahalli Police ಮೃತನು 5 ಅಡಿ ಎತ್ತರ, ಎದೆ ಮೇಲೆ ಜ್ಯೋತಿ ಅಂತ ಹಚ್ಚೆ ಇದ್ದು, ಹೊಟ್ಟೆ ಮೇಲೆ 4*2 ಇಂಚು ಉದ್ದ ಅಗಲದ ಮಚ್ಚೆ ಇರುತ್ತದೆ. ಕುರುಚಲು ಗಡ್ಡ, 02 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು ಕೆಂಪು ತುಂಬು ತೋಳಿನ ಷರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಠಾಣಾಧಿಕಾರಿ, ತೀರ್ಥಹಳ್ಳಿ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...