Thursday, March 26, 2026
Thursday, March 26, 2026

Kannada Rajyotsava 2024 ರಾಜ್ಯೋತ್ಸವ ಶಾಲಾಕಾಲೇಜುಗಳಿಗೆ ಸೀಮಿತವಾಗದೇ ಒಟ್ಟು ಕನ್ನಡಿಗರ ಹಬ್ಬವಾಗಲಿ- ಡಾ.ಹಾ.ಮ.ನಾಗಾರ್ಜುನ

Date:

Kannada Rajyotsava 2024 ನುಡಿ ಮನೆ ಕನ್ನಡ ಸಂಘ, ಶಿ. ವೈ.ವಿ.ಸಂ. ಶಿವಮೊಗ್ಗ.೬೯ನೇ ಕನ್ನಡ ರಾಜ್ಯೋತ್ಸವ” ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕನ್ನಡ ನುಡಿ ಮನೆ ಯಲ್ಲಿ ,”ಕನ್ನಡ ನಾಡು ನುಡಿಯ ಅನನ್ಯತೆ” ಕುರಿತು ಕನ್ನಡ ಕೇವಲ ಭಾಷಾವಾಚಿಕವಾಗದೆ ಇದೊಂದು ಅಖಂಡವಾದ ಕನ್ನಡದ ಅಸ್ಮಿತೆಯ ಸಂಭ್ರಮವಾಗಿದ್ದು ಶಾಲಾ ಕಾಲೇಜುಗಳಿಗೆ ಅಷ್ಟೇ ಸೀಮಿತವಾಗದೆ ಇದು ಒಟ್ಟು ಕನ್ನಡಿಗರ ಮನ ಮನೆಯ ಹಬ್ಬವಾಗಬೇಕಿದೆ ಈ ದೃಷ್ಠಿಯಿಂದ ಸಿಮ್ಸ್ ಶಿವಮೊಗ್ಗ ಹಮ್ಮಿಕೊಂಡಿರುವ ಕನ್ನಡದ ಈ ಸಂಭ್ರಮ ಅನ್ಯಭಾಷಿಗರ, ಅನ್ಯನಾಡಿನವರಲ್ಲಿ ಕನ್ನಡದ ಕಂಪನ್ನು, ಕನ್ನಡಿಗರ ಸಹಿಷ್ಣುತೆಯನ್ನು, ವಿಶ್ವ ಭಾತೃತ್ವವನ್ನು ಹಾಗೂ ಒಟ್ಟು ಕನ್ನಡದ ಆಶಯಗಳನ್ನು ಸರಳವಾಗಿ ಜಾನಪದ ಸಾಹಿತ್ಯದಿಂದ Kannada Rajyotsava 2024 ವಡ್ಡಾರಾಧನೆ,ಕವಿರಾಜಮಾರ್ಗ,ಪಂಪ,ರನ್ನ,ಪೊನ್ನ,ಜನ್ನಾದಿ ಕವಿಗಳ ಕಾವ್ಯಗಳು ಮತ್ತು ಹನ್ನೆರಡನೆ ಶತಮಾನದ ವಚನಸಾಹಿತ್ಯ ನಂತರದ ದಾಸ ಸಾಹಿತ್ಯ,ಹೊಸಗನ್ನಡ ಸಾಹಿತ್ಯದಲ್ಲಿ ಮೂಡಿಬಂದಿರುವ ನಾಡು-ನುಡಿಯನ್ನು ಕಟ್ಟುವಲ್ಲಿ, ನೆಲಮೂಲದ ಆಶಯಗಳನ್ನು ಉಲ್ಲೇಖಿಸುವಲ್ಲಿ ಅವರ ಆದರ್ಶಗಳು ಆ ಮುಲಕ ಅವರ ದಾರ್ಶನಿಕತೆ ಕುರಿತು ಸುದೀರ್ಘವಾಗಿ ಕರಿಯನ್ನು ಕನ್ನಡಿಯಲ್ಲಿ ತೋರಿದಂತೆ ಡಾ ಹಾ ಮ ನಾಗಾರ್ಜನ ಪ್ರಾಧ್ಯಾಪಕರು ಸವಿಕಾಶಿ, ತಮ್ಮ ಉಪನ್ಯಾಸವನ್ನು ಮಾಡಿದರು. ಕಾಲೇಜಿನ ನಿರ್ದೇಶಕರು ಹಾಗೂ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಡಾ ವಿರುಪಾಕ್ಷಪ್ಪ ವಿ ಅವರು ಪ್ರಸ್ತುತ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಜ್ಞಾನವನ್ನು ಬೆಳೆಸುತ್ತದೆ ಎಂದರು, ಅತಿಥಿಗಳ ಪರಿಚಯದೊಂದಿಗೆ ಕರ್ನಾಟಕ ದ ಏಕೀಕರಣ ಕುರಿತು ಜಿಲ್ಲಾ ಮುಖ್ಯ ಶಸ್ತ್ರಚಿಕಿತ್ಸಕರಾದ ಡಾ ಸಿದ್ಧನಾಡಗೌಡ ಪಿ ಮಾತನಾಡಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ರಮೇಶ್ ನಾಯಕ್ ಸಂಘಟಿಸಿದ್ದು, ಸಿಮ್ಸ್ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ನಾಡು ನುಡಿ ಗೀತಾ ಗಾಯನ ಮಾಡಿ, ನಿರೂಪಿಸಿದರು.ಸಿಮ್ಸ್ನ ಎಲ್ಲ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prabhuling Kavalikatti ಅಸ್ಪೃಶ್ಯತೆ ನಿರ್ಮೂಲನೆಗೆ ಒತ್ತು ಜೊತೆಗೆ ಕಾಯಿದೆಯಡಿ ಕಟ್ಟುನಿಟ್ಟಿನ ಕ್ರಮ- ಪ್ರಭುಲಿಂಗ ಕವಳಿಕಟ್ಟಿ.

Prabhuling Kavalikatti ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ...

MESCOM ಮಾರ್ಚ್ 26. ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

World Tuberculosis Day ಕ್ಷಯರೋಗಿಗಳು ದುಶ್ಚಟಗಳಿಂದ ದೂರವಿದ್ದು ,ಪೌಷ್ಠಿಕ ಆಹಾರ ಸೇವಿಸಿದರೆ ರೋಗ ವಾಸಿ- ಡಾ.ಕೆ.ಎಸ್.ನಟರಾಜ್.

World Tuberculosis Day ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ...

Shimoga News ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು- ಎನ್.ಪ್ರಕಾಶ್

Shivamogga News ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಉನ್ನತ...