Thursday, March 26, 2026
Thursday, March 26, 2026

Friends Center Shivamogga ರಸಿಕರ ಮನರಂಜಿಸಿದ ವಿಜೇತ ಅಣತಿ ಅವರ ಸರೋದ್ ವಾದನ ಕಚೇರಿ

Date:

Friends Center Shivamogga ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ 41ನೇ ಕಾರ್ಯಕ್ರಮವಾಗಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ವಿಜೇತ ಅಣತಿರವರ ಸರೋದ್ ನಾದ ಕಾರ್ಯಕ್ರಮ ಶ್ರೋತೃಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಇವರಿಗೆ ತಬಲಾದಲ್ಲಿ ತುಕಾರಾಂ ರಂಗದೊಳ್, ತಾನ್ಪುರದಲ್ಲಿ ಡಾ. ನೇತ್ರಾವತಿ ಸಾಥ್ ನೀಡಿದ್ದರು.
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ ಇವರ ಶಿಷ್ಯರಾಗಿರುವ ವಿಜೇತ ಅಣತಿಯವರು ಅಕಾಶವಾಣಿಯ ಕಲಾವಿದರಾಗಿದ್ದು, ಆಕಾಶವಾಣಿ ಧಾರವಾಡ, ಡಿಡಿ ಚಂದನ, ಐಸಿಸಿಆರ್ ಬೆಂಗಳೂರು, ಭಾರತೀಯ ವಿದ್ಯಾಭವನ ಬೆಂಗಳೂರು, ಸುಚಿತ್ರ ಬೆಂಗಳೂರು, ನೀನಾಸಂ ಹೆಗ್ಗೋಡು, ಮೈಸೂರು ಸಂಗೀತ ವಿದ್ಯಾಲಯ ಮುಂಬೈ, ಕರ್ನಾಟಕ ಸಂಗೀತ ನೃತ್ಯ Friends Center Shivamogga ಅಕಾಡೆಮಿಗಳಿಗಾಗಿ ಬಳ್ಳಾರಿಯ ಯುವ ಸಂಗೀತೋತ್ಸವ ಅಲ್ಲದೆ ಮುಂಬೈ, ಕೋಲ್ಕತ್ತಾ, ಮೈಸೂರು, ಕಾರ್ಕಳ, ಉಡುಪಿ, ಹಾಸನ… ಮುಂತಾದ ಸ್ಥಳಗಳಲ್ಲಿ ಸರೋದ್ ವಾದನದ ಕಚೇರಿಗಳನ್ನು ನೀಡಿ, ಗಮನ ಸೆಳೆದಿದ್ದಾರೆ. ತಮ್ಮ ಗುರುಗಳ ಜೊತೆಯೂ ಸಹ ವಾದಕರಾಗಿ ಕಾರ್ಯಕ್ರಮ ನೀಡಿ, ಸೈ ಎನಿಸಿಕೊಂಡಿದ್ದಾರೆ. ಇವರಿಗೆ ನಾದನಿಧಿ ಸಂಸ್ಥೆ ಹೊನ್ನಾಳಿ ಇವರು ಧಾರಿಣಿ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಕೌಶಲ್ಯವನ್ನು ಮೆಚ್ಚಿಕೊಂಡಿರುವ ಸಂಗೀತ ವಿಮರ್ಶಕರು ಬರೆದಿರುವ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿರವುದನ್ನು ಗಮನಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prabhuling Kavalikatti ಅಸ್ಪೃಶ್ಯತೆ ನಿರ್ಮೂಲನೆಗೆ ಒತ್ತು ಜೊತೆಗೆ ಕಾಯಿದೆಯಡಿ ಕಟ್ಟುನಿಟ್ಟಿನ ಕ್ರಮ- ಪ್ರಭುಲಿಂಗ ಕವಳಿಕಟ್ಟಿ.

Prabhuling Kavalikatti ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ...

MESCOM ಮಾರ್ಚ್ 26. ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

World Tuberculosis Day ಕ್ಷಯರೋಗಿಗಳು ದುಶ್ಚಟಗಳಿಂದ ದೂರವಿದ್ದು ,ಪೌಷ್ಠಿಕ ಆಹಾರ ಸೇವಿಸಿದರೆ ರೋಗ ವಾಸಿ- ಡಾ.ಕೆ.ಎಸ್.ನಟರಾಜ್.

World Tuberculosis Day ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ...

Shimoga News ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು- ಎನ್.ಪ್ರಕಾಶ್

Shivamogga News ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಉನ್ನತ...