Monday, February 2, 2026
Monday, February 2, 2026

Friends Center Shivamogga ರಸಿಕರ ಮನರಂಜಿಸಿದ ವಿಜೇತ ಅಣತಿ ಅವರ ಸರೋದ್ ವಾದನ ಕಚೇರಿ

Date:

Friends Center Shivamogga ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ 41ನೇ ಕಾರ್ಯಕ್ರಮವಾಗಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ವಿಜೇತ ಅಣತಿರವರ ಸರೋದ್ ನಾದ ಕಾರ್ಯಕ್ರಮ ಶ್ರೋತೃಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಇವರಿಗೆ ತಬಲಾದಲ್ಲಿ ತುಕಾರಾಂ ರಂಗದೊಳ್, ತಾನ್ಪುರದಲ್ಲಿ ಡಾ. ನೇತ್ರಾವತಿ ಸಾಥ್ ನೀಡಿದ್ದರು.
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ ಇವರ ಶಿಷ್ಯರಾಗಿರುವ ವಿಜೇತ ಅಣತಿಯವರು ಅಕಾಶವಾಣಿಯ ಕಲಾವಿದರಾಗಿದ್ದು, ಆಕಾಶವಾಣಿ ಧಾರವಾಡ, ಡಿಡಿ ಚಂದನ, ಐಸಿಸಿಆರ್ ಬೆಂಗಳೂರು, ಭಾರತೀಯ ವಿದ್ಯಾಭವನ ಬೆಂಗಳೂರು, ಸುಚಿತ್ರ ಬೆಂಗಳೂರು, ನೀನಾಸಂ ಹೆಗ್ಗೋಡು, ಮೈಸೂರು ಸಂಗೀತ ವಿದ್ಯಾಲಯ ಮುಂಬೈ, ಕರ್ನಾಟಕ ಸಂಗೀತ ನೃತ್ಯ Friends Center Shivamogga ಅಕಾಡೆಮಿಗಳಿಗಾಗಿ ಬಳ್ಳಾರಿಯ ಯುವ ಸಂಗೀತೋತ್ಸವ ಅಲ್ಲದೆ ಮುಂಬೈ, ಕೋಲ್ಕತ್ತಾ, ಮೈಸೂರು, ಕಾರ್ಕಳ, ಉಡುಪಿ, ಹಾಸನ… ಮುಂತಾದ ಸ್ಥಳಗಳಲ್ಲಿ ಸರೋದ್ ವಾದನದ ಕಚೇರಿಗಳನ್ನು ನೀಡಿ, ಗಮನ ಸೆಳೆದಿದ್ದಾರೆ. ತಮ್ಮ ಗುರುಗಳ ಜೊತೆಯೂ ಸಹ ವಾದಕರಾಗಿ ಕಾರ್ಯಕ್ರಮ ನೀಡಿ, ಸೈ ಎನಿಸಿಕೊಂಡಿದ್ದಾರೆ. ಇವರಿಗೆ ನಾದನಿಧಿ ಸಂಸ್ಥೆ ಹೊನ್ನಾಳಿ ಇವರು ಧಾರಿಣಿ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಕೌಶಲ್ಯವನ್ನು ಮೆಚ್ಚಿಕೊಂಡಿರುವ ಸಂಗೀತ ವಿಮರ್ಶಕರು ಬರೆದಿರುವ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿರವುದನ್ನು ಗಮನಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...