Saturday, December 6, 2025
Saturday, December 6, 2025

Shivamogga Karnataka ಅಕ್ಟೋಬರ್ 28 . ಶಿವಮೊಗ್ಗ ಕರ್ನಾಟಕ. ಸಂಘದಲ್ಲಿ “ತಿಂಗಳ ಅತಿಥಿ”ಯಾಗಿ ಕಾದಂಬರಿಕಾರ ಎಂ.ಅರ್.ದತ್ತಾತ್ರಿ

Date:

Shivamogga Karnataka ಅ. 28ರ ಸೋಮವಾರ, ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಕವಿ, ಕಾದಂಬರಿಕಾರ, ಅಂಕಣಕಾರ ಹಾಗೂ ಅನುವಾದಕ ಬೆಂಗಳೂರಿನ ಎಂ.ಆರ್. ದತ್ತಾತ್ರಿ ಅವರೊಡನೆ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರೊ. ಹೆಚ್.ಆರ್. ಶಂಕರನಾರಾಯಣಶಾಸ್ತ್ರಿ ವಹಿಸುವರು. ದತ್ತಾತ್ರಿ ಅವರು ‘ ತಂತ್ರಜ್ಞಾನ ಯುಗದಲ್ಲಿ ಕಾದಂಬರಿ ಬರವಣಿಗೆ ಮತ್ತು ಓದು’ ವಿಷಯದ ಕುರಿತು ಮಾತನಾಡಲಿದ್ದಾರೆ.

Shivamogga Karnataka ದತ್ತಾತ್ರಿ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆದರೂ, ಪ್ರವೃತ್ತಿಯಲ್ಲಿ ಈ ಕಾಲಮಾನದ ಬಹು ಚರ್ಚಿತ ಕನ್ನಡ ಬರಹಗಾರ. ಅಂಕಣ, ಕವನ, ಅನುವಾದ, ಕಾದಂಬರಿ ಹೀಗೆ ಹಲವು ಆಯಾಮಗಳಲ್ಲಿ ಅವರ ಸಾಹಿತ್ಯ ಕೃಷಿಯ ವಿಸ್ತಾರವಿದೆ. ವೃತ್ತಿಯ ನಿಮಿತ್ತ ಹಲವು ದೇಶ-ವಿದೇಶಗಳಲ್ಲಿ ಕಾರ್ಯ ನಿರ್ವಹಿಸಿದ ಅವರ ಜೀವನಾನುಭವ, ಮನು? ಜೀವನದ ಆಧ್ಯಾತ್ಮಿಕ ಮೌಲ್ಯಗಳು ಅವರ ಕಾದಂಬರಿಯಲ್ಲಿ ಕಾಣಸಿಗುತ್ತದೆ.

ಕರ್ನಾಟಕ ಸಂಘ ಇವರ ಬರಹದ ಕಸುವನ್ನು ಪ್ರಪ್ರಥಮವಾಗಿ ೨೦೦೬ಲ್ಲೇ ಗುರುತಿಸಿ ಇವರ ಅಂಕಣ ಬರಹಕ್ಕೆ ಡಾ. ಹಾ.ಮಾ ನಾಯಕರ ಹೆಸರಿನ ಪುಸ್ತಕ ಬಹುಮಾನ ನೀಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...