Saturday, December 6, 2025
Saturday, December 6, 2025

K.S.Eshwarappa ಬೊಮ್ಮಾಯಿ ಪುತ್ರನಿಗೆ ಟಿಕೆಟ್: ಕುಟುಂಬ ರಾಜಕಾರಣದ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ

Date:

K.S.Eshwarappa ಚನ್ನಪಟ್ಟಣದಲ್ಲಿ ಯೋಗೀಶ್ವರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವುದು ಹೊಸದಲ್ಲ. ಆದರೆ ಸಿದ್ದಾಂತವನ್ನೇ ಬಿಟ್ಟು ಹೋಗಿದ್ದು ಬೇಸರ ತರಿಸುತ್ತದೆ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ, ಸ್ವಜನ ಪಕ್ಷಪಾತ,. ಸಿದ್ದಾಂತವಿಲ್ಲದಂತೆ ರಾಜ್ಯ ರಾಜಕಾರಣ ನಡೆಯುತ್ತಿದೆ. ಇದಕ್ಕೆ ಯಡಿಯೂರಪ್ಪನವರನ್ನೇ ನೇರವಾಗಿ ದೂಷಿಸಲಾಗುತ್ತಿದೆ
ಶುಕ್ರವಾರ ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರ ಸ್ಪರ್ಧೆಗೆ ಪ್ರತಿಕ್ರಿಯಿಸಿದ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲದಂತಾಗಿದೆ. ಮೋದಿಗೆ ಅಪಮಾನವಾಗುವಂತೆ ರಾಜ್ಯದಲ್ಲಿ ನಡೆದುಕೊಳ್ಳಲಾಗುತ್ತಿದೆ. . ಕೆಲವು ನಾಯಕರು ನೇಪಥ್ಯಕ್ಕೆ ಹೋದಂತಾಗಿದೆ. ಆದರೆ ಪಕ್ಷ ಸಿದ್ದಾಂತವನ್ನು ಪರಿಪಾಲಿಸುವವರು ನೇಪಥ್ಯಕ್ಕೆ ಸರಿದಿಲ್ಲ. ಸಾವಿರಾರು ಜನ ನೋವು ಅನುಭವಿಸಿದ್ದಾರೆ. ನಾನು ಇದನ್ನು ಧಿಕ್ಕರಿಸಿ ಹೊರಗೆ ಬಂದೆ. ಪಕ್ಷದ ಹಿರಿಯರು ಇದನ್ನು ಸರಿಪಡಿಸಲಿದ್ದಾರೆ ಎಂದರು.
ಹಿಂದುತ್ವ, ಗೋಹತ್ಯೆ ನಿಷೇಧಕ್ಕೆ ಜನ ನಮಗೆ ಓಟು ಕೊಟ್ಟು ಅಧಿಕಾರಕ್ಕೆ ತಂದಿದ್ದಾರೆ. ಸಿದ್ದಾಂತದ ಮೇಲೆ ಅಧಿಕಾರವನ್ನು ಬಿಜೆಪಿ ನಡೆಸಿದೆ. ಕೆಲವರ ಹಿತಾಸಕ್ತಿಯಿಂದ ಪಕ್ಷ ಹಾಳಾಗಿದೆ. ಸರಿಯಾಗುವ ಭರವಸೆ ಇದೆ. ೭ ಜನ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈತ್ರಾದೇವಿಯ ಬಗ್ಗೆ ಮಾತನಾಡಿದ ಹಾಗೆ ಇದು ಆಗಿದೆ ಎಂದರು.
ಇಬ್ಬರೂ ಕ್ಷಮೆ ಯಾಚಿಸಲಿ:
K.S.Eshwarappa ಸಚಿವ ಬೈರತಿ ಸುರೇಶ್ ಮೈತ್ರಾದೇವಿಯ ಸಾವಿನ ಬಗ್ಗೆ ಮಾತನಾಡಿರುವುದು ಮತ್ತು ಸಚಿವೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಬಗ್ಗೆ ಮಾತನಾಡಿರುವುದು ಖಂಡನೀಯ. ಟೀಕೆ ಟಿಪ್ಪಣಿಗಳು ಸ್ವಾಭಾವಿಕ. ಸ್ವರ್ಗದಲ್ಲಿರುವ ತಾಯಿ ಮತ್ತು ಪುತ್ರನ ಬಗ್ಗೆ ಮಾತನಾಡಿರುವ ಬಗ್ಗೆ ಇಬ್ಬರೂ ಕ್ಷಮೆಯಾಚಿಸಲಿ ಎಂದು
ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.
ನನ್ನ ಶ್ರೀಮತಿ ಮತ್ತು ಮೈತ್ರಾದೇವಿಯರು ಹಲವೆಡೆ ಜಂಟಿಯಾಗಿ ಕೆಲಸ ಮಾಡಿದ್ದಾರೆ. ಅವರ ಸಾವು ಆಕಸ್ಮಿಕವಾಗಿದೆ. ಭೈರತಿ ಅವರು ಶೋಭಾ ಕರಂದ್ಲಾಂಜೆ ಹೇಳಿಕೆಗೆ ಪ್ರತಿಕ್ರಿಯಿಸಲು ಮುಂದಾಗಿ ಮೈತ್ರಾದೇವಿಯ ಸಾವಿನ ಬಗ್ಗೆ ಮಾತನಾಡಿ ನೈತಿಕ ಅಧಃಪತನಕ್ಕೆ ಇಳಿದಿದ್ದಾರೆ ಎಂದರು.
ಇವರು ಟೀಕೆ ಮಾಡಿದ್ದಕ್ಕೆ ಶೋಭಾ ಕರದ್ಲಾಂಜೆ ಅವರು ಸಿದ್ದರಾಮಯ್ಯನವರ ಪುತ್ರನ ಸಾವಿನ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಇದನ್ನೂ ಖಂಡಿಸುವೆ. ರಾಜಕಾರಣ ಮಾಡುವ ರೀತಿ ಇದಲ್ಲ. ಇಬ್ಬರೂ ದಾರಿತಪ್ಪಿ ಮಾತನಾಡಿದ್ದಾರೆ. ಸತ್ತವರ ಹೆಸರಿನಲ್ಲಿ ರಾಜಕೀಯ ಬೇಡ ಎಂದರು.
ಪೇಜಾವರ ಶ್ರೀಗಳ ಬಗ್ಗೆ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಮಾತನಾಡಿದ್ದಾರೆ. ಸ್ವಾಮೀಜಿ ಬಗ್ಗೆ ಇವರಿಗೆ ಮಾತನಾಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಜಾತಿ
ಜನಗಣತಿ ಬಗ್ಗೆ ಇತರೆ ಸ್ವಾಮಿಗಳು ಮಾತನಾಡಿದ್ದಾರೆ. ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದರಲ್ಲದೆ, ಪೇಜಾವರ ಶ್ರೀಗಳು ರಾಮಮಂದಿರದ ಬಗ್ಗೆ ಮಾತನಾಡುತ್ತಾರೆ. ಜಾತಿಜನಗಣತಿ ಮಾತನಾಡುತ್ತಾರೆ. ಅವರ ಅಭಿಪ್ರಾಯ ವ್ಯಕ್ತಪ್ತಡಿಸಲು ಸ್ವತಂತ್ರರಲ್ಲವೇ? ಹರಿಪ್ರಸಾದ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕೆಂದು ಎಚ್ಚರಿಸಿದರು.
ಬ್ರಿಗೇಡ್ ಸ್ಥಾಪಿಸಿ ಈಶ್ವರಪ್ಪ ಹಿಂದಿನ ರೀತಿಯಲ್ಲಿ ಯೂಟರ್ನ್ ಹೊಡೆಯದಿರಲಿ ಎಂದು ಆಯನೂರು ಮಂಜುನಾಥ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಹಿಂದೆ ದೊಡ್ಡವರನ್ನು ಮನವೊಲಿಸುವಷ್ಟು ದೊಡ್ಡವನಾಗಿರಲಿಲ್ಲ. ಹಾಗಾಗಿ ಮಾತು ಮೀರಲಿಲ್ಲ. ಈಗ ಅದೇ ದೊಡ್ಡವರು ಅಡ್ಡಬಂದರೆ ಮನವೊಲಿಸುವ ಪ್ರಯತ್ನ ನಡೆಸುವೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...