Monday, February 2, 2026
Monday, February 2, 2026

M.B.B.S ನಮ್ಮದೊಂದೇ ಗುರಿ.ಡಾಕ್ಟರಾಗೋದು” ಒಂದೇ ಕುಟುಂಬದ ನಾಲ್ವರು ಸೋದರಿಯರ ದಿಟ್ಟ ನಿರ್ಧಾರ

Date:

M.B.B.S ಹೆಣ್ಣು ಮಕ್ಕಳಿಗೆ ಶಿಕ್ಷಣದಲ್ಲಿ ಹೆಚ್ಚು ಹೆಚ್ಚು ಅವಕಾಶ ನೀಡಿದಂತೆ ಸಾಧನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಒಂದೇ ಕುಟುಂಬದ ನಾಲ್ವರು ಸಹೋದರಿಯರಿಗೆ MBBS ಸೀಟ್ ಪಡೆದು ವೈದ್ಯರಾಗಲು ಹೊರಟಿದ್ದಾರೆ.

ನಾಲ್ವರು ಸಹೋದರಿಯರು ತಮ್ಮ ಕಠಿಣ ಪರಿಶ್ರಮದ ಮೂಲಕವೇ ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯದ ಡಾಕ್ಟರ್ಸ್ ಆಗಲು ಹೊರಟಿದ್ದಾರೆ. ಇದೀಗ ನಾಲ್ವರು ಸಹೋದರಿಯರ ಸಾಧನೆಯ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಎಂ.ಬಿ.ಬಿ.ಎಸ್ ಓದಿ ಡಾಕ್ಟರ್ಸ್ ಆಗಲು ಕಠಿಣ ಪರಿಶ್ರಮದ ಜೊತೆಗೆ ಹಣವೂ ಇರಬೇಕು . ಯಾಕಂದ್ರೆ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಗುವುದು ಭಾರೀ ಕಷ್ಟದ ಮಾತು ಅಂತಾನೇ ಹೇಳಬಹುದು. ಅಂತಹದರಲ್ಲಿ ಇಲ್ಲೊಂದು ಒಂದೇ ಕುಟುಂಬದ ನಾಲ್ವರು ಮಕ್ಕಳು ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯ ವೈದ್ಯರಾಗಲು ತಯಾರಾಗಿದ್ದಾರೆ.

ತೆಲಂಗಾಣದ ಸಿದ್ದಿಪೇಟೆಯ ನಾಲ್ವರು ಸಹೋದರಿಯರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದುಕೊಂಡು ಪೋಷಕರಿಗೆ ಹೆಮ್ಮೆ ತರುವಂತಹ ಕೆಲಸವನ್ನು ಮಾಡಿದ್ದಾರೆ.
ತಮ್ಮ ನಾಲ್ವರು ಹೆಣ್ಣು ಮಕ್ಕಳ ಈ ಸಾಧನೆಗೆ ಪೋಷಕರಾದ ಕೊಂಕ್ ರಾಮಚಂದ್ರಂ ಮತ್ತು ಶಾರದ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

M.B.B.S ಈ ಪತಿ-ಪತ್ನಿಯರಿಬ್ಬರು ಟೈಲರ್ ಕೆಲಸವನ್ನು ಮಾಡಿ ಕಷ್ಟಪಟ್ಟು ನಾಲ್ವರು ಮಕ್ಕಳನ್ನು ಓದಿಸಿದ್ದು, ಇದೀಗ ಈ ನಾಲ್ವರು ಹೆಣ್ಣು ಮಕ್ಕಳು ತಂದೆ ತಾಯಿ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ.

ಅವರ ಹಿರಿಯ ಮಗಳಾದ ಮಮತಾ 2018 ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆದು ಇತ್ತೀಚಿಗಷ್ಟೇ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾಳೆ.
ಇನ್ನೂ ಅವರ ಮಗಳು ಮಾಧವಿ 2020 ರಲ್ಲಿ ಎಂಬಿಬಿಎಸ್ ಸೀಟ್ ಪಡೆದು ಪ್ರಸ್ತುತ ಅಂತಿಮ ವರ್ಷದ ಎಂಬಿಬಿಎಸ್ ಪದವಿ ಶಿಕ್ಷಣವನ್ನು ಪಡೆದಯುತ್ತಿದ್ದಾಳೆ. ಇದೀಗ ಇವರ ಅವಳಿ ಮಕ್ಕಳಾದ ರೋಹಿಣಿ ಮತ್ತು ರೋಷಿಣಿ ಕೂಡಾ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆಯುವ ಮೂಲಕ ತಂದೆ-ತಾಯಿಗೆ ಹೆಮ್ಮೆ ತರುವಂತಹ ಕಾರ್ಯವನ್ನು ಮಾಡಿದ್ದಾರೆ. ಎಷ್ಟೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ನಮಗೆ ಇಷ್ಟು ಒಳ್ಳೆಯ ಶಿಕ್ಷಣವನ್ನು ನೀಡಿದ ನಮ್ಮ ತಂದೆ-ತಾಯಿಯ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ನಾಲ್ವರು ಪುತ್ರಿಯರು ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...