Tuesday, February 3, 2026
Tuesday, February 3, 2026

Shikaripura Ulli Foundation ಪೌರ ಕಾರ್ಮಿಕರಿಗೆ ಸಿಹಿ- ಕೊಡುಗೆ ವಿತರಿಸಿ ಮಾಜಿ ಶಾಸಕರ ಜನ್ಮದಿನ ಆಚರಣೆ

Date:

Shikaripura Ulli Foundation ಶಿಕಾರಿಪುರ ಉಳ್ಳಿ ಫೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಸೀರೆ ಹಾಗೂ ಸಿಹಿ ವಿತರಿಸುವ ಮೂಲಕ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು ಹಾಗು ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್ ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು ಹಾಗು ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್.ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ಶಿಕಾರಿಪುರ ಪುರಸಭೆಯ ಪೌರ-ಕಾರ್ಮಿಕರಿಂದ ಕೇಕ್ ಕತ್ತರಿಸಿ ಸುಮಾರು 35ಜನ ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗು ಸಿಹಿ ವಿತರಿಸಿ ಮಾತನಾಡಿದ ಉಳ್ಳಿ ಫೌಂಡೇಶನ್ ಅದ್ಯಕ್ಷರಾದ ಉಳ್ಳಿ ದರ್ಶನ್ ರವರು, ಪ್ರತಿನಿತ್ಯ ಪಟ್ಟಣವನ್ನು ಸ್ವಚ್ಚವಾಗಿ ಇಡುವ ಹಾಗೂ ಕರೋನಾ ಸಂಧರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡಿದ ಅವರ ಕಾರ್ಯ ಶ್ಲಾಘನೀಯ ಆದ್ದರಿಂದ ನಮ್ಮ ನಾಯಕರು, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್ ರವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದು, ಸರಳ ಸಜ್ಜನ ವ್ಯಕ್ತಿತ್ವದವರಾದ ಅವರ ಕೊಡುಗೆ ಶಿಕಾರಿಪುರಕ್ಕೆ ಅಮೂಲ್ಯವಾದದ್ದು, ಆ ದೇವರು ಅವರಿಗೆ ಆಯುರ್-ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.

Shikaripura Ulli Foundation ಕೆಪಿಸಿಸಿ ಸದಸ್ಯರು, ನಿಕಟಪೂರ್ವ ಕಾಂಗ್ರೆಸ್ ಅಭ್ಯರ್ಥಿಗಳಾದ ಗೋಣೆ ಮಾಲತೇಶ್ ರವರು ಮಾತನಾಡಿ ನಮ್ಮ ನಾಯಕರಾದ ಆರ್.ಪ್ರಸನ್ನಕುಮಾರ್ ರವರು ನಗರಸಭಾ ಅದ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾಗಿ, ವಿಧಾನಪರಿಷತ್ ಶಾಸಕರಾದರೂ ಕೂಡ ಕಿಂಚಿತ್ತು ಅಹಂ ಅನ್ನು ತೋರಿಸದೇ ಸಾಮಾನ್ಯ ಕಾರ್ಯಕರ್ತರಿಗೂ ಸ್ಪಂದಿಸುವ ವ್ಯಕ್ತಿ, ಅವರಿಗೆ ಆ ದೇವರು ಇನ್ನೂ ಹೆಚ್ಚಿನ ಅಧಿಕಾರ, ಆರೋಗ್ಯ ನೀಡಲಿ ಎಂದರು.

ಈ ಸಂದರ್ಭದಲ್ಲಿ ಮಾಜಿ ತಾಂಡಾ ಅಭಿವೃದ್ದಿ ನಿಗಮದ ಸದಸ್ಯರಾದ ಶಿವು ನಾಯಕ್, ಬುಡೇನ್ ಸಾಬ್, ಸ.ನಾ.ಮಂಜಪ್ಪ, ನಗರದ ಮಾಲತೇಶ್, ಗುಡ್ಡಳ್ಳಿ ಸಂತೋಷ್, ಶಶಾಂಕ್, ಸಂತೋಷ್ ಮಡಿವಾಳ್, ಪ್ರದೀಪ್ ಮುಂತಾದ ಮುಖಂಡರು ಹಾಗೂ ಪುರಸಭೆಯ ಅಧಿಕಾರಿಯಾದ ರಾಜಕುಮಾರ್, ನವೀನ್ ಹಾಗು ಪೌರಕಾರ್ಮಿಕರು ಪಾಲ್ಗೊಂಡಿದ್ದರು..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...