Consumer Disputes Redressal Commission ಅಖಿಲಾ ಸಿ.ಕೆ ಜೈನ್ ಎಂಬುವವರು ತಮ್ಮ ವಕೀಲರ ಮೂಲಕ ಬಾತ್ಲಾ ಟೆಲಿ ಟೆಕ್ ಪ್ರೈವೇಟ್ ಲಿಮಿಟೆಡ್, ತಮಿಳುನಾಡು ಮತ್ತು ಸ್ಯಾಮ್ಸಂಗ್ ಸವೀರ್ಸ್ ಸೆಂಟರ್ ಶಿವಮೊಗ್ಗ ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಅರ್ಜಿದಾರ ಅಖಿಲಾ ಸಿ.ಕೆ ಜೈನ್ ರವರು ಎದುರಾರ ಬಾತ್ಲಾ ಟೆಲಿ ಟೆಕ್ ಪ್ರೈವೇಟ್ ಲಿಮಿಟೆಡ್, ತಮಿಳುನಾಡು ಮತ್ತು ಸ್ಯಾಮ್ಸಂಗ್ ಸವೀರ್ಸ್ ಸೆಂಟರ್ ಶಿವಮೊಗ್ಗದಲ್ಲಿ ಪ್ಲಿಪ್ ಕಾರ್ಟ್ ಮೂಲಕ ಸ್ಯಾಮ್ಸಂಗ್ ವಾಷಿಂಗ್ ಮಿಷನ್ ಖರೀದಿಸಿದ್ದರು.
ಮಿಷನ್ಗೆ ಮೂರು ವರ್ಷಗಳ ಹಾಗೂ ಬಿಡಿಭಾಗಗಳಿಗೆ 10 ವರ್ಷಗಳ ವಾರಂಟಿ ಇರುತ್ತದೆ. ಆದರೆ 2023 ರಲ್ಲಿ ವಾಷಿಂಗ್ ಮಷಿನ್ ಡ್ರಮ್ ಹಾಳಾಗಿದ್ದು, ಹೊಸದಾಗಿ ಡ್ರಮ್ ಅಳವಡಿಸಿಕೊಡಲು 5,291 ರೂಗಳನ್ನು ಪಡೆದಿರುತ್ತಾರೆ. ಆದರೆ ಬದಲಿಸಿದ ನಂತರವು ನೀರು ಸೊರಲು ಪ್ರಾರಂಭವಾಗುತ್ತದೆ.
Consumer Disputes Redressal Commission ಸರ್ವೀಸ್ ಸೆಂಟರ್ರವರಿಗೆ ದೂರು ನೀಡಿದ್ದು, ಮನೆಗೆ ಬಂದು ಡ್ರಮ್ ಸರಿಯಾದ ರೀತಿಯಲ್ಲಿ ಅಳವಡಿಸದೆ, ಪ್ರಶ್ನಿಸಿದಾಗ ಯಾವುದೆ ಪ್ರತಿ ಕ್ರಿಯೆ ನೀಡದೆ ಹೋರಹೋಗಿರುತ್ತಾರೆ.
ಈ ಕುರಿತು ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಎದುರುದಾರರಿಗೆ ಆಯೋಗವು ನೋಟೀಸ್ ನೀಡಿ ದೂರಿನ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ತಿಳಿಸಿದ್ದು, ನೋಟೀಸ್ ಪಡೆಯದ ಹಾಗೂ ನೋಟೀಸ್ ಪಡೆದು ಹಾಜರಾಗದ ಕಾರಣ ಪ್ರಕರಣವನ್ನು ಏಕಪಕ್ಷೀಯವೆಂದು ಆಯೋಗವು ತೀರ್ಮಾನಿಸಿದೆ. ಅರ್ಜಿದಾರರ ಅಂಶಗಳು, ಪ್ರಮಾಣ ಪತ್ರ, ದಾಖಲೆಗಳನ್ನು ಮತ್ತು ದೂರುದಾರರ ಪರ ವಕೀಲರ ವಾದವನ್ನು ಆಲಿಸಿ, ಸೇವಾ ನ್ಯೂನತೆ ಎಸಗಿರುವುದು ಕಂಡುಬಂದಿದ್ದು, ಎದುರುದಾರರು ದೂರುದಾರರಿಂದ 45 ದಿನದೊಳಗೆ ವಾಷಿಂಗ್ ಮಷಿನ್ ಬದಲಿಸಿಕೊಡಲು ಮತ್ತು ವಾಷಿಂಗ್ ಮಷಿನ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿಕೊಡಲು ಸೂಚಿಸಿದೆ.
ಈ ಆದೇಶ ಪಾಲಿಸುವರೆಗೂ ದಿನಕ್ಕೆ ರೂ. 150 ರಂತೆ ವಾಷಿಂಗ್ ಚಾರ್ಜ್ ನೀಡಲು ಹಾಗೂ ರೂ.5.291 ಡ್ರಮ್ ಚಾರ್ಜಸ್ ಮತ್ತು ರೂ. 10,000 ಗಳನ್ನು ಮಾನಸಿಕ ಹಿಂಸೆ ಹಾಗೂ ಹಾನಿಗಳಿಗೆ ಪರಿಹಾರವಾಗಿ ಹಾಗೂ ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತಾಗಿ ನೀಡಬೇಕು. ತಪ್ಪಿದಲ್ಲಿ ಆದೇಶವಾದ ದಿನಾಂಕದಿಂದ ಈ ಮೊತ್ತಗಳಿಗೆ ವಾರ್ಷಿಕ ಶೇ.9 ರಷ್ಟು ಬಡ್ಡಿಯನ್ನು ಪೂರಾ ಹಣ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಸೆ.18 ರಂದು ಆದೇಶಿಸಿದೆ.