B. Y. Vijayendra ಶಾಸಕ ಮುನಿರತ್ನ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ನಾವು ಬೇಡ ಎನ್ನುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಹೇಳಿದರು. ನಗರದ ಬಸವಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಬಸವ ಮರುಳಸಿದ್ದ ” ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ. ಬೆದರಿಕೆ ದಾಖಲಾಗಿ ಜಾಮೀನು ಸಿಕ್ಕಿತ್ತು. ಈಗ ಅವರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಮುನಿರತ್ನ ಅವರಿಂದ ತಪ್ಪು ಆಗಿದ್ದರೆ ಶಿಕ್ಷೆ ಆಗಲಿ, ಆದರೆ ತನಿಖೆ ಮಾತ್ರ ಸರಿಯಾಗಿ ಆಗಬೇಕು. ರಾಜಕೀಯ ಹಗೆತನಕ್ಕಾಗಿ ಪ್ರಕರಣ ದಾಖಲಾಗುವುದು ಮತ್ತು ತನಿಖೆ, ಬಂಧನದಂತಹ ಪ್ರಕ್ರಿಯೆಗಳು ನಡೆಯಬಾರದು. ಈ ಬೆಳವಣಿಗೆಗಳು ರಾಜಕೀಯಕ್ಕೆ ಒಳ್ಳೆ ಹೆಸರು ತರುವುದಿಲ್ಲ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಅಲ್ಲಿನ ಪೊಲೀಸರು ವಿದ್ಯಾರ್ಥಿಗಳನ್ನು ಗಣಪತಿ ವಿಸರ್ಜನೆಗೆ ಕಳುಹಿಸಬೇಡಿ ಎಂದು ಪತ್ರ ಬರೆಯುತ್ತಾರೆ. ಈ ರೀತಿಯ ನಡವಳಿಕೆ ಹಿಂದೆ ಯಾವ ಸರಕಾರದ ಅವಧಿಯಲ್ಲಿಯೂ ಆಗಿಲ್ಲ. ಹಬ್ಬ ಆಚರಣೆಯಲ್ಲಿ ಭಾಗವಹಿಸಬಾರದು ಎಂದು ಪತ್ರ ಬರೆದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಕುಲಸಚಿವರು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
B. Y. Vijayendra ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗೆಲ್ಲ ಹಿಂದೂಗಳ ಮೇಲೆ ದಬ್ಬಾ ಳಿಕೆಗಳು ಹೆಚ್ಚುತ್ತವೆ. ಬಹುಸಂಖ್ಯಾತರ ಹಬ್ಬ ಹರಿದಿನಗಳನ್ನೂ ನೆಮ್ಮದಿಯಾಗಿ ಆಚರಿಸುವಂತಿಲ್ಲ. ಗಣೇಶೋತ್ಸವದ ಮೆರವಣಣಿಗೆ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆಯಲಾಗುತ್ತಿದೆ. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ಕೃತ್ಯಗಳು ನಡೆಯುತ್ತಲೇ ಇವೆ. ನಾಗಮಂಗಲದಲ್ಲಿ ಮತೀಯ ಶಕ್ತಿಗಳು ದಾಂಧಲೆ ಎಬ್ಬಿಸಿವೆ. ಹಬ್ಬದ ಸಂಭ್ರಮ ದಲ್ಲಿದ್ದ ಊರಿನಲ್ಲಿ ದ್ವೇಷ ಕಾರಲಾಗಿದೆ ಎಂದರು.
B. Y. Vijayendra ಮುನಿರತ್ನ ತಪ್ಪೆಸಗಿದ್ದರೆ ಶಿಕ್ಷೆಯಾಗಲಿ: ಬಿ.ವೈ.ವಿಜಯೇಂದ್ರ
Date: