Shimoga Chamber of Commerce and Industry ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ(ರಿ) ಅಡ್ವಾನ್ಸ್ ಸ್ಕಿಲ್ ಡೆವೆಲಪ್ಮೆಂಟ್ ಅಕಾಡೆಮಿ ಮತ್ತು ವಿಸ್ಟಾ ತಂತ್ರಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ತರಬೇತಿ ಬಗ್ಗೆ ಮಾರ್ಗದರ್ಶನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಉದ್ಘಾಟಿಸಿ ಮಾತನಾಡಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತುಂಬಾ ವರ್ಷಗಳ ಕನಸಾದ ಅಡ್ವಾನ್ಸ್ಡ್ ಸ್ಕಿಲ್ ಡೆವೆಲಪ್ಮೆಂಟ್ ಅಕಾಡೆಮಿಯನ್ನು ಪ್ರಾರಂಭಿಸಿರುವುದಕ್ಕೆ ಸಂಘದ ಅಧ್ಯಕ್ಷರು ಮತ್ತು ಪಧಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿ ಪ್ರತಿ ಕಾರ್ಯಕೇತ್ರದಲ್ಲೂ ಜ್ಞಾನಕ್ಕಿಂತ ಅನುಭವ ಆಧಾರಿತ ಕೌಶಲ್ಯದ ಅವಶ್ಯಕತೆಯನ್ನು ತಮ್ಮ ಭಾಷಣದಲ್ಲಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಎನ್ ಗೋಪಿನಾಥ್ ವಹಿಸಿ ಮಾತನಾಡಿ ಸಂಘದ ಅಡಿಯಲ್ಲಿ ಅಕಾಡೆಮಿ ಪ್ರಾರಂಬಿಸಿದ್ದು ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗದ ಮದ್ಯ ಇರುವ ಅಂತರವನ್ನು ಹೋಗಲಾಡಿಸಲು ಸುಮಾರು 25 ಲಕ್ಷ ಬಂಡವಾಳವನ್ನು ತೊಡಗಿಸಿದ್ದು ಇದು ಶಿವಮೊಗ್ಗ ಜಿಲ್ಲೆಯ ಭವಿಷ್ಯಕ್ಕಾಗಿ ಹಾಗೂ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೂಡಿದ ಬಂಡವಾಳ 2050ರ ಹೊತ್ತಿಗೆ ಶಿವಮೊಗ್ಗ ಕೈಗಾರಿಕಾ ಕ್ಷೇತ್ರ, ವಾಣಿಜ್ಯ ಕ್ಷೇತ್ರ ಹಾಗೂ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಹೊಂದಿದ ಜಿಲ್ಲೆ, ಉನ್ನತ ಕೌಶಲ್ಯ ಕೇಂದ್ರವಾಗಿ ಶಿವಮೊಗ್ಗ ವಿಷನ್ 2050ರ ಆಶಯದಂತೆ ಹೊರಹೊಮ್ಮುವ ನಂಬಿಕೆ ಇದೆ ಎಂದು ತಿಳಿಸಿದರು.
Shimoga Chamber of Commerce and Industry ಶ್ರೀಮತಿ ಪೂರ್ಣಿಮಾ ಡಿ, ಎಜುರೈಟ್ ಕಾಲೇಜಿನ ಪ್ರಂಶುಪಾಲರಾದ ಶ್ರೀ ಶಂಕರ್ನಾರಾಯಣ, ರಾಷ್ಟಿçÃಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಎಸ್.ಎನ್ ನಾಗಾರಾಜ್ ಮತ್ತು ಮಾನಸ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಜಿನಿ ಪೈ ರವರು ವಿದ್ಯಾರ್ಥಿಗಳಿಗೆ ಇಂದಿನ ವಿದ್ಯಾಭ್ಯಾಸದಲ್ಲಿ ಸ್ಕಿಲ್ನ ಅಗತ್ಯತೆಯ ಬಗ್ಗೆ ಸವಿವರವಾಗಿ ಮಾತನಾಡಿ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಅಗತ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಸ್ಟಾ ಕಂಪೆನಿಯ ಕೋ-ಫೌಂಡರ್ ಶ್ರೀ ವಿನಯ್ ಕುಮಾರ್ ಎ.ಎಸ್ ಮತ್ತು ಚಿಫ್ ಆಪರೇಟಿಂಗ್ ಆಫೀಸರ್ ಸ್ಕಿಲ್ ಅಕಾಡೆಮಿಯ ಉದ್ದೇಶದೊಂದಿಗೆ ಪ್ರಸ್ತಾವಿಕ ನುಡಿ ನುಡಿದರು ಶ್ರೀ ಸಂಜಯ್ ಕುಮಾರ್ ವಿಶ್ವಕರ್ಮರವರು ತರಬೇತಿ ಕಾರ್ಯಕ್ರಮದ ಮಾರ್ಗದರ್ಶನ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬಿ. ಗೋಪಿನಾಥ್ ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಡಿ.ಎಂ. ಶಂಕರಪ್ಪ, ಎಸ್.ಎಸ್ ಉದಯಕುಮಾರ್, ಮಧುಸೂದನ ಐತಾಳ್, ಪ್ರದೀಪ್ ವಿ. ಎಲಿ, ತೇಜಶ್ರೀ ಎಸ್.ಹೆಚ್ ಇತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಸಂತ್ ಹೋಬಳಿದಾರ್ರವರು ವಂದನಾರ್ಪಣೆ ಸಲ್ಲಿಸಿದರು.
