Monday, December 15, 2025
Monday, December 15, 2025

World Peace Youth Service Committee Bangalore ಮೂಡಬಿದರೆಯಲ್ಲಿ ಜೈನರಿಂದ ಸೆ,22 ರಂದು ವಿಶ್ವ ದಾಖಲೆ ಕಾರ್ಯಕ್ರಮ

Date:

World Peace Youth Service Committee Bangalore ವಿಶ್ವಶಾಂತಿ ಯುವ ಸೇವಾ ಸಮಿತಿ ಬೆಂಗಳೂರು ಇವರ ನೇತೃತ್ವದಲ್ಲಿ ವೀಣಾ ರಘುಚಂದ್ರ ಶೆಟ್ಟಿ ಇವರು ರಚಿಸಿರುವ, ಭಗವಾನ್ ಆದಿನಾಥ ಸ್ವಾಮಿಯ ಸಹಸ್ರ ನಾಮಗಳುಳ್ಳಂತಹ ಸಾಂಗತ್ಯ ರೂಪದ ಸ್ತುತಿಯನ್ನು ಅಂದರೆ ಸಾವಿರದೆಂಟು ಪ್ಯಾರಗಳುಳ್ಳ ಈ ಹಾಡನ್ನು ಯಾವುದೇ ವಿರಾಮವಿಲ್ಲದೆ ೧೨ ತಾಸುಗಳ ಕಾಲ ಸುಮಾರು ೨೨೦ ಜನರು ಹಾಡುವುದರ ಮೂಲಕ ವಿಶ್ವದಾಖಲೆ ಮಾಡಲು ಮುಂದಾಗಿದ್ದಾರೆ
World Peace Youth Service Committee Bangalore ಸೆಪ್ಟೆಂಬರ್ ೨೨, ಭಾನುವಾರ ದಂದು ಜೈನಕಾಶಿ ಮೂಡುಬಿದಿರೆಯ, ಕಲ್ಲಬೆಟ್ಟು ಎಕ್ಸೆಲೆಂಟ್ ಕಾಲೇಜಿನಲ್ಲಿ ವಿಶ್ವದಾಖಲೆಯ ಕಾರ್ಯಕ್ರಮ ನಡೆಯಲಿದೆ. ಸಮಯ- ೪ ಗಂಟೆ ಬೆಳಗಿನ ಜಾವದಿಂದ ರಾತ್ರಿ ೯ ಗಂಟೆಯವರೆಗೆ. ಸಂಜೆ ೬ ಗಂಟೆಯಿಂದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಜೈನ ಮಠ ಮೂಡುಬಿದಿರೆ ಇವರ ಸಾನಿಧ್ಯವಿರಲಿದೆ. ಅಧ್ಯಕ್ಷರಾಗಿ ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಡಿ ಹರ್ಷೇಂದ್ರಕುಮಾರ್ ಹಾಗೂ ಅವರ ಧರ್ಮಪತ್ನಿ ಸುಪ್ರಿಯಾ ಹರ್ಷೇಂದ್ರಕುಮಾರ್ ಆಗಮಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಎಕ್ಸೆಲೆಂಟ್ ಕಾಲೇಜು ಮೂಡುಬಿದಿರೆಯ ಸಂಸ್ಥಾಪಕ ಯುವರಾಜ್ ಜೈನ್, ಅವರ ಧರ್ಮಪತ್ನಿ ರಶ್ಮಿತಾ ಜೈನ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಮೂಡುಬಿದಿರೆ ಆಗಮಿಸಲಿದ್ದಾರೆ.
ಜೈನಧರ್ಮವನ್ನು ವಿಶ್ವದೆಲ್ಲೆಡೆ ಸಾರುವ ದಿನ ಅಂದರೆ ಸೆಪ್ಟೆಂಬರ್ ೨೨ ರಂದು ಆಗಮಿಸಿದ ಪ್ರತಿಯೋರ್ವರಿಗೂ ಶುದ್ಧ ಜೈನ ಆಹಾರದ ವ್ಯವಸ್ಥೆ ಇರುತ್ತದೆ. ಜಿನಸಹಸ್ರನಾಮ ಪಠಣೆಯಿಂದ ಇಷ್ಟಾರ್ಥ ಸಿದ್ಧಿ, ಮಾನಸಿಕ ನೆಮ್ಮದಿ, ಪುಣ್ಯಪ್ರಾಪ್ತಿಯಾಗುತ್ತದೆ. ಇಂತ ಸಾವಿರದೆಂಟು ನಾಮಗಳಿಗೂ ಒಂದೊಂದು ಪದ್ಯಗಳ ಮೂಲಕ ಭಕ್ತಿಯ ಸಮರ್ಪಣೆ ಮಾಡುವ ಕಾರ್ಯಕ್ರಮ ಇದಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...