Friday, September 27, 2024
Friday, September 27, 2024

Ganesha Festival 2024 ಭಾರತದಲ್ಲಿ ಹಬ್ಬ ಆಚರಣೆಯ ಪರಂಪರೆಯೇ ಹರಿದು ಬಂದಿದೆ- ಶ್ರೀರಂಜಿನಿ ದತ್ತಾತ್ರಿ

Date:

Ganesha Festival 2024 ಭಾರತದಲ್ಲಿನ ಹಬ್ಬಗಳ ವೈಶಿಷ್ಟ್ಯ ಅಮೋಘವಾದದ್ದು ಪಾರಂಪರಿಕವಾದದ್ದು ಅನನ್ಯವಾದದ್ದು. ಜೀವನೋತ್ಸಾಹ ತುಂಬಿ ಹಳೆಯ ಕಹಿಗಳನ್ನು ಮರೆಸಿ ಬಾಂಧವ್ಯದ ಕೊಂಡಿಯನ್ನು ಬೆಸೆದು ಸಮುದಾಯದಲ್ಲಿ ಮನರಂಜನೆ ದೈವ ಭಕ್ತಿಯನ್ನು ಉಂಟು ಮಾಡಿ ಜೀವನದಲ್ಲಿ ನವ ಉಲ್ಲಾಸವನ್ನು ತಂದುಕೊಡುತ್ತದೆ ಎಂದು ಶ್ರೀಮತಿ ಶ್ರೀರಂಜಿನಿ ದತ್ತಾತ್ರಿ, ಅಧ್ಯಕ್ಷರು, ಕಾಸ್ಮೋ ಕ್ಲಮ್ ಮಿತ್ರೆ ಮಹಿಳಾ ಘಟಕ ಇವರು ಮಾತನಾಡಿದರು.

ದಿನಾಂಕ: 14.9.2024 ರ ಶನಿವಾರ ಕಾಸ್ಮೋ ಕ್ಲಬ್ ನ ಶುಭಾಂಗಣದಲ್ಲಿ “ಹಬ್ಬ ಸಂಭ್ರಮ” ವಿಶೇಷ ಕಾರ್ಯಕ್ರಮವನ್ನು ವಿಶ್ವವರಾ ತಂಡ ಹಾಗೂ ಮಿತ್ರೆ ಬಳಗದವರು ಏರ್ಪಡಿಸಿದ್ದರು.

ಭಾರತದಲ್ಲಿ ಹಬ್ಬಗಳ ಪಾರಂಪರಿಕತೆಯೇ ಹರಿದು ಬಂದಿದೆ. ಪೂರ್ವ ಭಾರತದಲ್ಲಿ ಅದರಲ್ಲೂ ಸ್ವತಂತ್ರ ಪೂರ್ವದಲ್ಲಿ ಹಬ್ಬಗಳ ಆಚರಣೆ ವೈವಿಧ್ಯಮಯವಾಗಿದ್ದು ವಿಶೇಷವಾದ ಗೌರಿ ಗಣೇಶ ಹಬ್ಬ ಶ್ರಾವಣ ಮಾಸದ ಭಾದ್ರಪದ ಶುಕ್ಲ ಚೌತಿಯಲ್ಲಿ ಬರುವಂತಹ ಗಣೇಶ ಹಬ್ಬವನ್ನು ಸ್ವಾತಂತ್ರ್ಯದ ಏಕತೆಗೆ ಗಣಪತಿಯ ಮೂರ್ತಿಗಳನ್ನು ದೇಶದ ಬೀದಿ ಬೀದಿಗಳಲ್ಲಿ ಮನೆ ಮನಗಳಲ್ಲಿ ಪ್ರತಿಷ್ಠಾಪಿಸಿ ಅ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನು ಊದಿದವರು ಶ್ರೀ ಬಾಲಗಂಗಾಧರ್ ತಿಲಕ್ ರವರು. ಸ್ವಾತಂತ್ರದ ನಂತರ ಭಾರತದಲ್ಲಿ ಹಬ್ಬಗಳನ್ನು ಮೂರು ವಿಧಗಳಾಗಿ ಆಚರಿಸುತ್ತೇವೆ ರಾಷ್ಟ್ರೀಯ ಹಬ್ಬಗಳು ಧಾರ್ಮಿಕ ಹಬ್ಬಗಳು, ಕಾಲೋಚಿತ ಹಬ್ಬಗಳು. ರಾಷ್ಟ್ರೀಯ ಹಬ್ಬಗಳಲ್ಲಿ ವರ್ಣ ಧರ್ಮ ಜಾತಿ ನೀತಿ ಎಲ್ಲವನ್ನ ಮರೆತು ರಾಷ್ಟ್ರದ ಏಕತೆಯನ್ನು ಎತ್ತಿ ಹಿಡಿಯುವ ಸಂಕೇತವಾಗಿ ಆಚರಿಸುತ್ತೇವೆ.
ಎರಡನೆಯರು ಧಾರ್ಮಿಕ ಹಬ್ಬಗಳು ಆಯಾ ಧರ್ಮದ ಅನುಷ್ಠಾನವಾಗಿ ನಡೆಸುವಂತಹ ಹಬ್ಬಗಳಾಗಿರುತ್ತವೆ. ಮೂರನೆಯದು ಕಾಲೋಚಿತ ಹಬ್ಬಗಳು ಅಂದರೆ ಋತುಮಾನ ಆಧಾರಿತವಾಗಿ ಪಂಚಮಿ, ಕ್ರಾಂತಿ, ಬಿಹು, ಓಣಂ ಇತ್ಯಾದಿಗಳಾಗಿರುತ್ತವೆ. ಒಟ್ಟಾರೆ ಹಬ್ಬಗಳು ನಮ್ಮ ಸಂಸ್ಕೃತಿ ಸಂಸ್ಕಾರ ವೈವಿಧ್ಯತೆಗಳ ಉಳಿವು ಬೆಳವಣಿಗೆಯ ಜೊತೆಗೆ ಪರಸ್ಪರ ಸ್ನೇಹ ಸಹಬಾಳ್ವೆ ಸಹಕಾರ ತತ್ವವನ್ನು ಸಾರುತ್ತದೆ. ಹಬ್ಬಗಳ ಮೂಲಕ ಕೊಡುವ, ಪರಸ್ಪರ ಪ್ರೀತಿ ಸ್ನೇಹ ಚುವ, ನಮ್ರತೆ, ಶಿಸ್ತು, ಕಾಳಜಿ ಶ್ರದ್ಧೆ ಭಕ್ತಿ ಭಾವ ವ್ಯಕ್ತವಾಗುವ ಭಾವವಾಗಿರುತ್ತದೆ..

Ganesha Festival 2024 ಗೌರಿ ಗಣಪತಿಯಂದು ನಾವು ಕಟ್ಟುವ ಕಂಕಣ, ಬಾಗಿಲಿನ ತೋರಣ, ಮನೆ ಮುಂದಿನ ರಂಗೋಲಿ, ತೊಡುವ ಉಡುಪು ವಸ್ತ್ರ ಗಳಲ್ಲಿ ವೈವಿಧ್ಯತೆ ಇದ್ದು ಸಂಭ್ರಮ ತುಂಬಿ ತುಳುಕಾಡುತ್ತದೆ. ಮನಸ್ಸಿನ ಸದೃಢತೆಯನ್ನು ಗಟ್ಟಿ ಮಾಡುವುದರ ಜೊತೆಗೆ ಮನೆಮನೆಗಳ ಸಾಂಘಿಕ ಶಕ್ತಿಗಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕಾಸ್ಮೋ ಕ್ಲಬ್ ಮಿತ್ರೆ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀರಂಜಿನಿ ದತ್ತಾತ್ರಿಯವರು ನುಡಿದರು.

ಕಾರ್ಯಕ್ರಮದ ಸರ್ವಸಿದ್ಧತೆಯನ್ನು ಮಿತ್ರೆ ಬಳಗದ ವಿಶ್ವವರಾ ತಂಡದ ನಾಯಕಿ ಪ್ರೇಮಾ ಶ್ರೀನಿವಾಸ್ ಮತ್ತವರ ತಂಡದ ಸದಸ್ಯರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದು . ತಂಡದ ನಾಯಕಿ ಪ್ರೇಮಕ್ಕ ಹಬ್ಬಗಳಲ್ಲಿ ವೈವಿಧ್ಯತೆ ಇದೆ ಸಡಗರವಿದೆ ಸಂಭ್ರಮವಿದೆ ನಮ್ಮ ನೋವುಗಳನ್ನು ಮರೆತು ಹೊಸತನವನ್ನು ಕಟ್ಟಿಕೊಡುವ ಬಾಂಧವ್ಯವಿದೆ ಎಂದು ಹೇಳಿ, ಹಬ್ಬ ಆಚರಣೆಗಳು ನಮ್ಮ ದೇಶದ ಹಿರಿಮೆ ಎಂದು ಹೇಳಿದರು .

ವಿಶ್ವವರಾ ತಂಡದ ನಾಯಕಿ ಪ್ರೇಮಕ್ಕ, ಸದಸ್ಯರಾದ ಮನು ಪ್ರೀತಮ್, ನಿವೇದಿತಾ, ಪದ್ಮಾವತಿ, ಮೀರಾ ನಾಡಿಗ್, ವಿನುತಾ, ವಿನೋದಾ ದಳವೆ, ನಿಖಿಲಾ ಯವರು ಹಬ್ಬ ಸಂಭ್ರಮವನ್ನು ಅಚ್ಚುಕಟ್ಟಾಗಿ ಜೋಡಿಸಿ, ನಡೆಸಿಕೊಟ್ಟರು

ಕಾರ್ಯ ಸಮಿತಿಯ ಕಾಸ್ಮೋ ಮಹಿಳಾ ವಿಭಾಗದ ಅಧ್ಯಕ್ಷರಾದ
ಶ್ರೀರಂಜಿನಿ ದತ್ತಾತ್ರಿ, ಕಾರ್ಯದರ್ಶಿ ದೀಪಾ ಶ್ರೀನಿವಾಸ್,
ಖಜಾಂಚಿ ವೀಣಾಹರ್ಷ, ಸಹಕಾರ್ಯದರ್ಶಿ ಹೇಮಲತಾ ಉಪಸ್ಥಿತರಿದ್ದರು

ಕಾರ್ಯಕ್ರಮದ ನಿರೂಪಣೆ ಪದ್ಮಾವತಿ ನೆರವೇರಿಸಿದರು. ಪ್ರಾರ್ಥನೆ ವಿನ್ನುತಾರವರು, ಸ್ವಾಗತ ಪ್ರೇಮಾ ಶ್ರೀನಿವಾಸ್, ವಿಶ್ವವರಾ ಮಹಾ ಪಂಡಿತೆ ಕುರಿತು ಮೀರಾ ನಾಡಿಗ್ ಪರಿಚಯಿಸಿದರು. ಹಬ್ಬ ಸಂಭ್ರಮದ ಬಗ್ಗೆ ಶ್ರೀರಂಜಿನಿ ದತ್ತಾತ್ರಿ ಮಾತನಾಡಿದರು. ಒಟ್ಟು ಕಾರ್ಯಕ್ರಮಗಳ ವರದಿಯನ್ನು ದೀಪ ಶ್ರೀನಿವಾಸ್ ಮಂಡಿಸಿದರು. ಪ್ರತಿಯೊಬ್ಬರಿಗೂ ಬಾಗಿನ ಕೊಡುವ ಮೂಲಕ ಹಬ್ಬ ಸಂಭ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hassan Manikya Prakashana ಶಿವಮೊಗ್ಗದ ಕವಿ ಶಿ.ಜು.ಪಾಶಾ ಅವರಿಗೆ “ಜನ್ನ ಕಾವ್ಯ ಪ್ರಶಸ್ತಿ”

Hassan Manikya Prakashana ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ ಜನ್ನ ಕಾವ್ಯ...

Vajreshwari Co Operative Society ಶ್ರೀವಜ್ರೇಶ್ವರಿ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

Vajreshwari Co Operative Society ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ...

Inner Wheel Shivamogga ದುರ್ಬಲರಿಗೆ ನೆರವು ನೀಡಿದಾಗ ಸೇವೆ ಸಾರ್ಥಕ- ಶಿಲ್ಪ ಗೋಪಿನಾಥ್

Inner Wheel Shivamogga ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ...

National Education Committee ಬೆಳಗುತ್ತಿ & ಮಲ್ಲಿಗೇನಹಳ್ಳಿಯಲ್ಲಿ ಗಮನ ಸೆಳೆದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

National Education Committee ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿರಂಗಪ್ರಯೋಗದ...