Monday, December 15, 2025
Monday, December 15, 2025

Dr. H B Manjunath ನಾಯಕತ್ವ ಎಂದರೆ ಇತರರ ಮೇಲೆ ದರ್ಪ ತೋರಿಸುವುದಲ್ಲ- ಡಾ.ಎಚ್.ಬಿ.ಮಂಜುನಾಥ್

Date:

Dr. H B Manjunath ಸ್ವ ಸಾಮರ್ಥ್ಯದ ಅರಿವು ಸಾಧನೆಗೆ ಪ್ರೇರಣೆಯಾಗುತ್ತದೆ, ಭಾರತದ ಯುವಶಕ್ತಿಯು ಜಾಗತಿಕ ಮಟ್ಟದ ಸಾಧನೆಗಾಗಿ ಸ್ವ ಸಾಮರ್ಥ್ಯದ ಅರಿವನ್ನು ಮಾಡಿಕೊಳ್ಳಬೇಕಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಕರೆಕೊಟ್ಟರು.

ದಾವಣಗೆರೆ ನಗರದ ಅಜ್ಜಂಪುರ ಗೋವಿಂದ ಸ್ವಾಮಿ ಭಾಗ್ಯಲಕ್ಷ್ಮಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ನಾಯಕತ್ವ ಗುಣ ಎಂದರೆ ಇತರರ ಮೇಲೆ ದರ್ಪ ತೋರಿಸುವುದಲ್ಲ, ಎಲ್ಲರ ಅಭಿಪ್ರಾಯಗಳಿಗೆ ಅವಕಾಶಕೊಟ್ಟು ಅದರಲ್ಲಿ ಯೋಗ್ಯವಾದದನ್ನು ವಿಧಾಯಕ ಕಾರ್ಯಗಳಿಗೆ ಅಳವಡಿಸುವುದಾಗಿದೆ. ಉತ್ತಮ ನಾಯಕ ಎನಿಸಿಕೊಳ್ಳಬೇಕಾದಲ್ಲಿ ಉತ್ತಮರೊಂದಿಗೆ ಸ್ನೇಹ ಸಹಾ ಅವಶ್ಯ, ಪಿಯುಸಿ ಅವಧಿಯು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರ್ವಕಾಲವಾಗಿದೆ, ದೇಶದಲ್ಲಿ ವಾರ್ಷಿಕ ಸುಮಾರು ಒಂದುವರೆ ಕೋಟಿ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಎದುರಿಸುತ್ತಿದ್ದು ಕರ್ನಾಟಕದಲ್ಲಿ 6,98,000 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಎದುರಿಸುತ್ತಾರೆ.

Dr. H B Manjunath ಪದವಿಯ ನಂತರ ಉದ್ಯೋಗ ಅರಸುವುದಕ್ಕಿಂತ ಉದ್ಯೋಗ ದಾತರಾಗುವುದು ವೈಯುಕ್ತಿಕ ಭವಿಷ್ಯಕ್ಕೂ ರಾಷ್ಟ್ರದ ಭವಿಷ್ಯಕ್ಕೂ ಉತ್ತಮ ಎಂದರು. ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ವಜ್ರ ಮಹೋತ್ಸವ ವಿದ್ಯಾಪೀಠ ಹಾಗೂ ಕಾಲೇಜಿನ ಉಪಾಧ್ಯಕ್ಷ ಆರ್ ಎಲ್ ಪ್ರಭಾಕರ್ ರವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿಯ ಕಾಸಲ್ ಎಸ್ ಸತೀಶ್, ಆರ್ ಜಿ ನಾಗೇಂದ್ರ ಪ್ರಸಾದ್, ಜೆ ವಿ ಗೋಪಾಲಕೃಷ್ಣ ಶ್ರೇಷ್ಟಿ, ಡಾ. ಬಿ ಪಿ ಕುಮಾರ್, ಆರ್ ಸಿ ಹಾಲಪ್ಪ ಶೆಟ್ಟಿ, ಪ್ರಾಂಶುಪಾಲ ಎಸ್ ಪ್ರದೀಪ್ ಕುಮಾರ್, ವಿದ್ಯಾರ್ಥಿ ಸಂಘದ ಮುರಳಿಧರ ಹೆಚ್, ನರೇಂದ್ರ ಗೌಡ ಜಿ, ಸಮೀರ್ ಆರ್ ಉಪಸ್ಥಿತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು. ಕುವೆಂಪು ಕನ್ನಡ ಭವನದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಅಧ್ಯಾಪಕ ವರ್ಗದ ಸಂಗೀತಾ, ಉಷಾ, ಪ್ರಸನ್ನ ರವರು ಮಾಡಿದರೆ ಪ್ರಾರ್ಥನೆಯನ್ನು ಗಗನ ಶ್ರೀ ಹಾಡಿದರು, ವಂದನೆಗಳನ್ನು ಮಂಜುನಾಥ ಸಮರ್ಪಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...