Monday, December 15, 2025
Monday, December 15, 2025

Gajunuru News ಪ್ರಗತಿಪರ ಕೃಷಿಕ ಗಾಜನೂರು ಎ.ಆರ್.ಮಲ್ಲೇಶಪ್ಪ ನಿಧನ

Date:

Gajunuru News 1930 ರ ಡೆಸೆಂಬರ್ 19 ರಂದು ವೀರಶೈವ ಸಮಾಜದಲ್ಲಿ ಜನಿಸಿದ ಶ್ರೀ ಎ.ಆರ್.ಮಲ್ಲೇಶಪ್ಪ ಗಾಜನೂರು, ಇವರು ಸಾರ್ಥಕ ಜೀವನ ನಡೆಸಿ 2024 ರ ಸೆಪ್ಟೆಂಬರ್ 05 ರ ಬೆಳಗ್ಗೆ ನಿಧನರಾದರು.

ಇವರು ಮೂಲತಃ ಕೃಷಿ ಕುಟುಂಬದವರಾಗಿದ್ದು, ಕೃಷಿಯಲ್ಲೇ ತಮ್ಮನ್ನು ತೊಡಗಿಸಿಕೊಂಡು ಪ್ರಗತಿ ಪರ ಕೃಷಿಕರೆಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದರು. 80 ರ ದಶಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಲ್ಲಿ ಸಕ್ರಿಯರಾಗಿದ್ದು, ಶ್ರೀಯುತ ಎನ್.ಡಿ.ಸುಂದರೇಶ್ ಹಾಗೂ ಇತರೆ ರೈತ ಮುಖಂಡರ ಒಡನಾಡಿಯಾಗಿದ್ದು, 1982 ರಲ್ಲಿ ರೈತ ಸಂಘದ ಜೈಲ್ ಭರೋ ರಸ್ತೆ ತಡೆ ಚಳುವಳಿಯಲ್ಲಿ ಮೊದಲು ಗಾಜನೂರಿನಿಂದ ಇವರ ನಾಯಕತ್ವದಲ್ಲಿ ನಡೆದು ಸುಮಾರು 20 ದಿನ ಬಳ್ಳಾರಿ ಜೈಲ್ ವಾಸ ಅನುಭವಿಸಿದ್ದರು.

Gajunuru News ಗಾಜನೂರು ವ್ಯವಸಾಯ ಸಹಕಾರಿ ಸಂಘದ ಗೌರವ ಕಾರ್ಯದರ್ಶಿಯಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ. ಶಿವಮೊಗ್ಗ ಎ.ಪಿ.ಎಂ.ಸಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಕೃಷಿ ಕ್ಷೇತ್ರದಲ್ಲಿ ಇವರ ಸಾಧನೆಗಾಗಿ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕøತರಾಗಿದ್ದರು.

ಮೃತರು ಧರ್ಮಪತ್ನಿ ಗೌರಮ್ಮ, ಗಂಡು ಮಕ್ಕಳಾದ ಉದಯಕುಮಾರ್.ಎ.ಎಂ, ಮಹೇಶ್.ಎ.ಎಂ, ಲಿಂಗರಾಜ್.ಎ.ಎಂ, ಗಣೇಶ್ ಎಂ ಅಂಗಡಿ, ಹೆಣ್ಣು ಮಕ್ಕಳಾದ ಪಾರ್ವತಿ ಓಂಕಾರ್, ಶಾರದಾ ಶಂಕರ್, ಮೊಮ್ಮಕ್ಕಳು ಮತ್ತು ಕುಟುಂಬ ವರ್ಗ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...