Friday, September 27, 2024
Friday, September 27, 2024

Shivaganga Yoga Centre ಗುರು ಎಂದರೆ ವ್ಯಕ್ತಿಯಲ್ಲ. ರಾಷ್ಟ್ರದ ಶಕ್ತಿ- ಎಚ್.ಎಂ.ಚಂದ್ರಶೇಖರಯ್ಯ

Date:

Shivaganga Yoga Centre ಸಮಾಜ ಸುವ್ಯವಸ್ಥಿತ ಹಾಗೂ ಸುಸಂಸ್ಕೃತವಾಗಿ ನಡೆಯಬೇಕಾದರೆ ಗುರುವಿನ ಪಾತ್ರ ತುಂಬಾ ದೊಡ್ಡದು. ಎಲ್ಲ ಕ್ಷೇತ್ರಗಳನ್ನು ಗುರುವಿನ ಮಹತ್ವ ಅತಿ ಮುಖ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿವೃತ್ತ ಉಪನ್ಯಾಸಕ, ಯೋಗ ಶಿಕ್ಷಕ ಎಚ್.ಎಂ.ಚಂದ್ರಶೇಖರಯ್ಯ ಹೇಳಿದರು.

ಕೃಷಿ ನಗರ ಶಾಖೆಯಲ್ಲಿ ಶಿವಗಂಗಾ ಯೋಗಕೇಂದ್ರದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಎಂದರೆ ವ್ಯಕ್ತಿಯಲ್ಲ, ರಾಷ್ಟ್ರದ ಶಕ್ತಿ. ಪ್ರತಿಯೊಂದು ಹಂತದಲ್ಲೂ ಗುರುವಿನ ಮಾರ್ಗದರ್ಶನ ನಮಗೆ ಅಗತ್ಯವಾಗಿ ಬೇಕು. ಸಮಾಜದ ಓರೆಕೋರೆಗಳನ್ನು ತಿದ್ದುವಂತಹ ಶಕ್ತಿ ಗುರುವಿಗೆ ಇದೆ. ವ್ಯಕ್ತಿ ಎಂತಹ ದೊಡ್ಡ ಸ್ಥಾನದಲ್ಲಿ ಇದ್ದರೂ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ದೇಶಿಯ ವಿದ್ಯಾ ಶಾಲೆ ನಿವೃತ್ತ ಉಪನ್ಯಾಸಕ ನೀಲಕಂಠ ರಾವ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರುವಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ. ಸಾಮಾಜಿಕ ಜಾಲತಾಣದಿಂದ ಮಕ್ಕಳ ಮನಸ್ಸು ವಿಕಲಗೊಳ್ಳುತ್ತಿದೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ತುಂಬಾ ಅಗತ್ಯ. ಎಲ್ಲಿ ಗುರುವನ್ನ ಪೂಜಿಸುತ್ತಾರೋ ಗೌರವಿಸುತ್ತಾರೋ ಅಂತಹ ಸ್ಥಳ ಪವಿತ್ರತೆಯಿಂದ ಕೂಡಿರುತ್ತದೆ ಎಂದರು.

ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ತುಂಬಾ ಪಾವಿತ್ರತೆ ಹಾಗೂ ನಿಸ್ವಾರ್ಥತೆಯಿಂದ ಕೂಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಗುರುಗಳನ್ನ ಗೌರವಿಸಬೇಕು ಎಂದು ತಿಳಿಸಿದರು.

Shivaganga Yoga Centre ಇದೇ ಸಂದರ್ಭದಲ್ಲಿ ಮೇರಿ ಇಮ್ಯಾಕುಲೇಟ್ ಶಿಕ್ಷಕಿ ನಾಗರತ್ನಮ್ಮ ಚಂದ್ರಶೇಖರಯ್ಯ ಮಾತನಾಡಿ, ಅಲ್ಲಮ ಪ್ರಭುಗಳ ವಚನ ಇಂದಿಗೂ ಪ್ರಸ್ತುತ. ಗುರುಗಳ ಬಗ್ಗೆ ಅವರು ಹಾಡಿದ ಮಾತು ಇಂದು ಸತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಕೃಷಿ ನಗರದ ಎಲ್ಲ ಯೋಗಪಟುಗಳು ಗುರುಗಳಿಗೆ ಶುಭಾಶಯಗಳು ತಿಳಿಸಿ ಗೌರವಿಸಿದರು.

ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಜಯಣ್ಣ, ಮಹೇಶ್ವರಪ್ಪ, ಅನಿಲ್, ಚಿದಾನಂದ, ಬಿಂದು ವಿಜಯ ಕುಮಾರ್ ಹಾಗೂ ಯೋಗ ಶಿಕ್ಷಕರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...