Saturday, September 28, 2024
Saturday, September 28, 2024

Youth Hostels Association ಚಾರಣಗಳಲ್ಲಿ ನಿರಂತರ ಭಾಗಿಯಾಗಿದ್ದಕ್ಕೆ ರಾಷ್ಟ್ರೀಯ ಮಂಡಳಿ ಮನ್ನಣೆ- ಅ.ನಾ.ವಿಜೇಂದ್ರರಾವ್

Date:

Youth Hostels Association ಚಾರಣಗಳಲ್ಲಿ ಹೆಚ್ಚು ಯಶಸ್ಸು ಸಾಧಿಸಲು ಸಾಧ್ಯವಾಗಿದ್ದು, ನಿರಂತರ ಚಾರಣಗಳಲ್ಲಿ ಭಾಗವಹಿಸಿದ್ದರಿಂದ ಉನ್ನತ ಸ್ಥಾನ ಲಭಿಸಿದೆ ಎಂದು ಯೂತ್ ಹಾಸ್ಟೆಲ್ ರಾಷ್ಟ್ರೀಯ ಮಂಡಳಿ ಸದಸ್ಯ ಅ.ನಾ.ವಿಜಯೇಂದ್ರ ರಾವ್ ಹೇಳಿದರು.

ಶಿವಮೊಗ್ಗದಲ್ಲಿ ಯೂತ್ ಹಾಸ್ಟೆಲ್ ತರುಣೋದಯ ಘಟಕದಿಂಧ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಸದಸ್ಯರು ಅತ್ಯುತ್ತಮವಾಗಿ ಚಾರಣಗಳಲ್ಲಿ ಭಾಗವಹಿಸುತ್ತಿದ್ದಾರೆ. ನನಗೆ ಉನ್ನತ ಸ್ಥಾನ ದೊರಕಲು ಎಲ್ಲರ ಸಹಕಾರ ಕಾರಣ. ಈ ಸನ್ಮಾನ ನಿಮ್ಮೆಲ್ಲರಿಗೂ ಸಲ್ಲಬೇಕು ಎಂದು ತಿಳಿಸಿದರು.

ಯೂತ್ ಹಾಸ್ಟೆಲ್ಸ್ ನಿಯಮ, ನಿಬಂಧನೆಗಳು, ಸುರಕ್ಷಿತ ನಡುವಳಿಕೆ, ಪ್ರತ್ಯೇಕ ವಸತಿ ಸೌಕರ್ಯ, ಉತ್ತಮ ಆಹಾರ, ಕಡಿಮೆ ಖರ್ಚಿನಲ್ಲಿ ಇರುವ ಅನುಕೂಲಗಳನ್ನು ನಮ್ಮ ಘಟಕದ ಸದಸ್ಯರು ಉಪಯೋಗಿಸುತ್ತಿದ್ದಾರೆ. ಇದರಿಂದ ನಮ್ಮ ಘಟಕವನ್ನು ಗುರುತಿಸಿ ರಾಷ್ಟ್ರೀಯ ಆಡಳಿತ ಮಂಡಳಿ ಸದಸ್ಯನಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.

Youth Hostels Association ಅಧ್ಯಕ್ಷತೆ ವಹಿಸಿದ್ದ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಪ್ರತಿಯೊಬ್ಬರೂ ದಿನನಿತ್ಯದ ಜಂಜಾಟದಿಂದ ಹೊರಬರಲು ಆಗಾಗ್ಗೆ ಪ್ರಕೃತಿಯೊಂದಿಗೆ ಬೆರೆತು ಚಾರಣ ಮಾಡಿದಾಗ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಹೊಸ ಸ್ನೇಹಿತರು ದೊರಕುತ್ತಾರೆ. ಈ ವಿಚಾರದಲ್ಲಿ ಯೂತ್ ಹಾಸ್ಟೆಲ್ಸ್ ಉತ್ತಮ ಕಾರ್ಯಕ್ರಮ ಮಾಡುತ್ತಿರುವುದರಿಂದ ನಮ್ಮ ಘಟಕದ ಸದಸ್ಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಹೆಚ್ಚು ಸದಸ್ಯರನ್ನು ಪರಿಚಯಿಸಬೇಕು ಎಂದು ತಿಳಿಸಿದರು.

ತರುಣೋದಯ ಘಟಕ ಹೆಚ್ಚು ಚಾರಣಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಸುಮಾರಾಣಿ ಪ್ರಾರ್ಥಿಸಿದರು. ದಿಲೀಪ್ ನಾಡಿಗ್ ಸ್ವಾಗತಿಸಿದರು. ಜಿ.ವಿಜಯಕುಮಾರ್ ನಿರೂಪಿಸಿದರು. ಪ್ರಕೃತಿ ಮಂಚಾಲೆ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...