Saturday, December 6, 2025
Saturday, December 6, 2025

Raghavendra Swamy ಭರಮಸಾಗರದಲ್ಲಿ ಶ್ರೀರಾಯರ ಆರಾಧನೆ

Date:

Raghavendra Swamy ಪ್ರತಿ ವರ್ಷದಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ದಿನಾಂಕ 20-8-2024 ರಿಂದ 22-8-2023. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹ ಐದನೇಯ ಮಂತ್ರಾಲಯ ಭರಮಸಾಗರದಲ್ಲಿ ಆರಾಧನೆ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.

ದಿನಾಂಕ 20-8-2024 ರಂದು ಶ್ರೀ ಗುರು ರಾಯರ ಆರಾಧನಾ ಕಳಸ ಸ್ಥಾಪನೆ, ಪೂರ್ವಾರಾಧನೆ ಪೂಜಾಕಲಾಪಗಳು, ಪಂಚಾಮೃತಾಬಿಷೇಕ, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಸ್ಥಳೀಯ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಿನಾಂಕ 21-8-2024 ರಂದು ಮಧ್ಯಆರಾಧನೆ , ವಿಶೇಷ ಫಲ ಪಂಚಾಮೃತ ಅಭಿಷೇಕ ಮತ್ತು ರುದ್ದರಾಭಿಷೇಕ, ನೂತನ ವಸ್ರ್ರಾಧಾರಣೆ, ಗುರುಬಿಕ್ಷ, ಗುರು ಪಾದಕೆ ಪೂಜೆ, ಪುಷ್ಪ ಅಲಂಕಾರ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ. ಮಧ್ಯ ಆರಾಧನಾ ಪೂಜಾಕಲಾಪಗಳು, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಗುರುದರ್ಶನದ ಭಕ್ತರಿಂದ ಭಕ್ತಿ ಸಂಗೀತ ಮತ್ತು ಭಜನೆ ಆಯೋಜಿಸಲಾಗಿತ್ತು.

ದಿನಾಂಕ 22-08-2024 ರಂದು ಗುರುವಾರ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ತರರಾಧನೆ ವಿಶೇಷವಾಗಿ ಶ್ರೀ ರಾಯರ ಬೃಂದಾವನ ಕ್ಕೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ ಭಕ್ತ ಮಹಿಳೆಯರಿಂದ ಸುಮಂಗಲಿ ಪೂಜೆ, ಅರಿಷಿಣ ಕುಂಕುಮ ಸಮರ್ಪಣೆ, ಶ್ರೀ ಸತ್ಯನಾರಾಯಣ ಪೂಜೆ, ಸರ್ವ ಸಮರೋಪನೋತ್ಸವ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ, ಪ್ರಸಾದ ವಿತರಣೆ. ನೆರವೇರಿತು. ಸಂಜೆ ಭರಮಸಾಗರದ ಸಾಯಿ ಭಕ್ತ ಮಂಡಲಿಯ ಸದಸ್ಯರಿಂದ ಸಾಯಿ ಭಜನೆ ಕಾರ್ಯಕ್ರಮ ಭಕ್ತರಿಂದ ಭಕ್ತಿ ಗೀತೆಗಳು, ಗುರು ಭಜನೆ ಮತ್ತು ಮಂಗಳಾರತಿ ಲಾಲಿ ಸೇವೆಯನ್ನು ನೆರವೇರಿಸಲಾಯಿತು.

Raghavendra Swamy ಭರಮಸಾಗರದ ರಾಯರ ವಿಶ್ರಾಂತಿ ಗೃಹ ಕ್ಕೆ ಜಾತಿಬೇದವಿಲ್ಲದೆ ನಂಬಿ ಬಂದ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದಂತೆ ಕಾರ್ಯಕ್ರಮದಲ್ಲಿ ಹಾಜರಾಗಿ ಆಶೀರ್ವಾದ ಪಡೆದರು.

ಮುರುಳಿಧರ್ ನಾಡಿಗೇರ್

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹ , ಐದನೇಯ ಮಂತ್ರಾಲಯ. ಭರಮಸಾಗರ
ಚಿತ್ರದುರ್ಗ ತಾ ಮತ್ತು ಜಿಲ್ಲೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...