Sunday, December 14, 2025
Sunday, December 14, 2025

Apsara Ice Creams ಅಪ್ಸರಾ ಐಸ್ ಕ್ರೀಮ್ಸ್ ನಿಂದ ‘ಮುಸ್ಕಾನ್’ ಉಪಕ್ರಮದಿಂದ ವಿತರಣಾ ಚಟುವಟಿಕೆ

Date:

Apsara Ice Creams ಅಪ್ಸರಾ ಐಸ್ ಕ್ರೀಮ್ಸ್ 53ನೇ ವಾರ್ಷಿಕೋತ್ಸವದಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮುಸ್ಕಾನ್ ಎಂಬ ವಿಶಿಷ್ಟ ಉಪಕ್ರಮವನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಹೊಂದಿರುವ ಸ್ಥಾಪಿತ ಮತ್ತು ವಿಶ್ವಾಸಾರ್ಹ ಬ್ರಾಂಡ್ ಅಪ್ಸರಾ ಐಸ್ ಕ್ರೀಮ್ಸ್, ಪ್ರಾರಂಭದಿಂದಲೂ ತಮ್ಮ ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟದ ಐಸ್ಕ್ರೀಮ್ಗಳನ್ನು ಒದಗಿಸುತ್ತಾ ಬಂದಿದೆ. ಆಗಸ್ಟ್ 15ರಂದು ಮುಂಬೈ ಮತ್ತು ಪುಣೆಯಲ್ಲಿ ಪ್ರಾರಂಭಿಸಲಾಗುವುದು ಮತ್ತು ಹಂತ ಹಂತವಾಗಿ ಇತರ ನಗರಗಳಲ್ಲಿ ಕೈಗೊಳ್ಳಲಾಗುವುದು.

ಮುಸ್ಕಾನ್ ಉಪಕ್ರಮದ ಅಡಿಯಲ್ಲಿ, ಕಂಪನಿಯು 53,000 (ಐಸ್ ಕ್ರೀಮ್) ಗಳನ್ನು ವಿತರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಇದು ನಾಲ್ಕು ಟನ್ ಐಸ್ಕ್ರೀಮ್ಗಳಿಗೆ ಹತ್ತಿರದಲ್ಲಿದೆ. ಇನ್ನು ಎನ್ಜಿಒಗಳು ಮತ್ತು ಲಯನ್ಸ್ ಕ್ಲಬ್, ಲಿಯೋ, ಲಯನ್ ಇಂಟರ್ನ್ಯಾಷನಲ್ ಲ್ಯಾಂಡ್, ಸ್ವದೇಸ್ ಫೌಂಡೇಶನ್ನಂತಹ ಪ್ರಮುಖ ಸಾಮಾಜಿಕ ಸಂಸ್ಥೆಗಳು ಸಹ ಈ ಉಪಕ್ರಮದ ಭಾಗವಾಗಲಿವೆ. ಭಾರತದ 9 ರಾಜ್ಯಗಳು ಮತ್ತು 25 ನಗರಗಳನ್ನು ಒಳಗೊಳ್ಳುತ್ತದೆ. ಮಾತನಾಡಿದ ಅಪ್ಸರಾ ಐಸ್ ಕ್ರೀಮ್ಸ್ನ ಸ್ಥಾಪಕ ಪಾಲುದಾರ ನೆಮ್ ಚಂದ್ ಶಾ, “ಸಮಾಜದ ವಿವಿಧ ವರ್ಗಗಳ ಜನರ ಮುಖದಲ್ಲಿ ನಗು ತರುವುದು ಮತ್ತು ನಮ್ಮ 53ನೇ ವಾರ್ಷಿಕೋತ್ಸವ ಆಚರಿಸುವುದು ಮುಸ್ಕಾನ್ನ ಮುಖ್ಯ ಉದ್ದೇಶ .

ಆ. 15 ರಂದು 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಇದನ್ನು ಬಿಡುಗಡೆ ಮಾಡಲಿದ್ದೇವೆ. ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

Apsara Ice Creams ಅಪ್ಸರಾ ಐಸ್ಕ್ರೀಮ್ಸ್ನ ವ್ಯವಸ್ಥಾಪಕ ಪಾಲುದಾರ ಕೆಯೂರ್ ಶಾ ಮಾತನಾಡಿ, ಸಮಾಜದ ವಿವಿಧ ಸ್ತರಗಳನ್ನು ತಲುಪುವುದು ನಮ್ಮ ಆದ್ಯತೆಯಾಗಿದೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಾವು ನಮ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದರು. ನಮ್ಮ ಎಲ್ಲಾ ಫ್ರ್ಯಾಂಚೈಸ್ ಪಾಲುದಾರರು ಮತ್ತು ಸಂಸ್ಥೆಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ಈ ಸಂದರ್ಭದಲ್ಲಿ ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...