Monday, February 2, 2026
Monday, February 2, 2026

Radio Shivamogga ರೇಡಿಯೊ ಶಿವಮೊಗ್ಗ ದಿಂದ ಆಗಸ್ಟ್ 15 ರಂದು ಆರ್ ಜೆ ಹಂಟ್ ಆಡಿಷನ್

Date:

Radio Shivamogga ಮಲೆನಾಡು ಸೀಮೆಯ ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ ೯೦.೮ ಎಫ್ ಎಮ್ ಈಗ ಸಾರ್ವಜನಿಕರಿಗೆ ಆರ್ ಜೆ ಹಂಟ್ ನಡೆಸುತ್ತಿದೆ. ಇದರಲ್ಲಿ ಶಿವಮೊಗ್ಗದ ಆಸಕ್ತರಿಗೆ ಭಾಗವಹಿಸಲು ಅವಕಾಶವಿದೆ.
ಆ.೧೫ ರಂದು ಆಡಿಷನ್ ನಡೆಯಲಿದೆ. ಇದರಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಗೂಗಲ್ ಅಪ್ಲಿಕೇಷನ್ ಭರ್ತಿ ಮಾಡಬೇಕು. ನೋಂದಣಿ ಶುಲ್ಕ ೫೦ರೂ. ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಒಂದು ಫೋಟೋ ಹಾಗೂ ಪೆನ್ ತರಬೇಕು. ಧ್ವನಿ, ಭಾಷಾ ಸ್ಪಷ್ಟತೆ, ಆತ್ಮ ವಿಶ್ವಾಸ, ನಿರೂಪಣೆ, ಸೋಷಿಯಲ್ ಮೀಡಿಯಾ ಆಸಕ್ತಿಗಳು, ಸಾಮಾನ್ಯ ಜ್ಞಾನ, ಸ್ಥಳೀಯ ಜ್ಞಾನ, ಬಾಡಿ ಲಾಂಗ್ವೇಜ್ ಇತ್ಯಾದಿಗಳನ್ನು ಗಮನಿಸಲಾಗುವುದು. ಆ.೧೩ ನೋಂದಣಿಗೆ ಕಡೆಯ ದಿನವಾಗಿದೆ.
ಭಾಗವಹಿಸುವವರು ತಮ್ಮ ಇಷ್ಟದ ಯಾವುದೇ ವಿಷಯದ ಬಗ್ಗೆ ೨-೩ ನಿಮಿಷದ್ಟು ಮಾತನಾಡಲು ಸಿದ್ಧರಾಗಿ ಬರಬೇಕು. ವಿಷಯದ ಆಯ್ಕೆಯಲ್ಲಿ ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನ, ಕ್ರೈಮ್, ಸೆಕ್ಸ್ ಯಾವುದೇ ಧರ್ಮ, ಜಾತಿ, ಸಮುದಾಯಗಳು, ಲಿಂಗದ ನಿಂದನೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಸಿದ್ದವಾಗಿ ಬಂದ ವಿಷಯದ ಬಗ್ಗೆ ಮಾತನಾಡುವುದು, ನಾವು ನೀಡುವ ವಿಚಾರದ ಬಗ್ಗೆ ಆಶು ಮಾತು ( ಸ್ಪಾಂಟೇನಿಯಸ್ ಟಾಕ್) ಇರುತ್ತದೆ.
Radio Shivamogga ಇದರಲ್ಲಿ ಆಯ್ಕೆಯಾದವರಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ ಆರ್ ಜೆ ಕಾರ್ಯ ನಿರ್ವಹಣೆ, ವಿಷಯ ಸಂಗ್ರಹ, ಬೇಸಿಕ್ ವಾಯ್ಸ್ ಎಡಿಟಿಂಗ್ ಇತ್ಯಾದಿಗಳನ್ನು ಕಲಿಸಿಕೊಡಲಾಗುತ್ತದೆ. ಈ ತರಬೇತಿಯಲ್ಲಿದ್ದವರಿಗೆ ಪ್ರಮಾಣ ಪತ್ರ ದೊರೆಯಲಿದೆ. ಇದರಲ್ಲಿ ಉತ್ತಮ ಪ್ರತಿಭೆಯನ್ನು ತೋರಿಸಿದವರನ್ನು ಆಯ್ಕೆ ಮಾಡಿಕೊಂಡು ಬಾನುಲಿಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುತ್ತದೆ.
ಗೂಗಲ್ ಅಪ್ಲಿಕೇಷನ್ ಹಾಗೂ ಹೆಚ್ಚಿನ ಮಾಹಿತಿಗೆ ನಿಲಯ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ (ಮೊ: ೭೨೫೯೧ ೭೬೨೭೯) ಇದಕ್ಕೆ ಸಂಪರ್ಕಿಸಬಹುದು. ರೇಡಿಯೋ ಶಿವಮೊಗ್ಗ ಆಪ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಳ್ಲಬಹುದು. ಎಂದು ಆಲಿಸಬಹುದೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...