Bharath Scout and Guides ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿರುವುದು ತೃಪ್ತಿತಂದಿದೆ. ಅನುಭವದ ಪ್ರೇರಣಾ ಪೂರ್ವಕ ಮಾತುಗಳಲ್ಲಿ ಮಕ್ಕಳನ್ನು ಅಗ್ನಿವೀರ ಸೇವೆಗೆ ಸೇರಿಸಿ ಸೇವೆ ಸಲ್ಲಿಸುವಂತೆ ಸುಬೇದಾರ್ (ನಿವೃತ್ತ) ಮಾಜಿ ಸೈನಿಕರು ಮಾಲತೇಶ್ ಕರೆ ನೀಡಿದರು.
ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಜಿಲ್ಲಾ ಸ್ಕೌಟ್ಸ ಭವನದಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸೈನಿಕರಿಗೊಂದು ಸಲಾಮ್’ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಅಮರ್ ಜವಾನ್ಗೆ ಪುಷ್ಪ ಅರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉಧ್ಘಾಟನೆ ಮಾಡಿ ಮಾತನಾಡಿದ ಅವರು, ತಮ್ಮ ಸೇನಾ ಸೇವಾ ಅವಧಿಯಲ್ಲಿ ವಿವಿಧ ಯುದ್ಧದಂತಹ ಕಠಿಣ ಸಮಯದಲ್ಲಿ ನಮ್ಮ ದೇಶದ ಗಡಿಯನ್ನು ಕಾಯುವ ಸೇನಾ ಬಳಗದ ಸೇವೆ ಶೌರ್ಯ, ಜಾಣ್ಮೆ, ನಿಸ್ವಾರ್ಥ ಸೇವೆ, ಮುಖ್ಯವಾಗಿ ದೇಶ ಪ್ರೇಮವನ್ನು ಮೆರೆದು ದೇಶದ ರಕ್ಷಣೆಗಾಗಿ ಕಾರ್ಗಿಲ್ ವಿಜಯದ ಸಮಯದಲ್ಲಿ ಕಾರ್ಗಿಲ್ಗಾಗಿ ಪ್ರಾಣತ್ಯಾಗ ಮಾಡಿದ ೫೨೦ ಜನ ವೀರಯೋಧರು ವೀರ ಸ್ವರ್ಗ ಸೇರಿದುದನ್ನು ಸ್ಮರಿಸಿದರು.
ಸಭೆಯಲ್ಲಿ ಉಪಸ್ಥಿತರಿರುವ ಮಕ್ಕಳಿಗೆ ದೇಶಭಕ್ತಿಯನ್ನು ಮೂಡಿಸುವ ವೀರ ಸೇನಾನಿಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮುಖ್ಯ ಕಾಯರ್ದರ್ಶಿ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಮಕ್ಕಳಿಗೆ ದೇಶಸೇವೆಯ ಮಹತ್ವವನ್ನು ತಿಳಿಸಿ, ದೇಶದ ಗಡಿಯಲ್ಲಿ ವಿದೇಶಿ ಸೈನಿಕರ ದಾಳಿಯಿಂದ ದೇಶವಾಸಿಗಳನ್ನು ರಕ್ಷಣೆಮಾಡಲು ಹಗಲು ರಾತ್ರಿ ಎನ್ನದೇ ಬಿಸಿಲು ಮಳೆಯ ಪರಿವಿಲ್ಲದೇ ಸೇವೆಸಲ್ಲಿಸುತ್ತಾರೆ. ಅಂಥಹ “ಸೈನಿಕರಿಗೊಂದು ಸಲಾಮ್” ಹಾಗೂ ಮಕ್ಕಳು ದೇಶಪ್ರೇಮವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ನನ್ನ ದೇಶ ನನ್ನ ಜನ ನನ್ನ ಮಾನ ಪ್ರಾಣ ಘನ ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ ಎಂಬ ಕವಿವಾಣಿಯಂತೆ ಸೈನಿಕರ ಸೇವೆ ಅತ್ಯಮೂಲ್ಯ ಹಾಗೂ ಅವಿಸ್ಮರಣೀಯ ಎಂದು ಹೇಳಿದರು.
Bharath Scout and Guides ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್.ಪರಮೇಶ್ವರ, ಜಂಟಿಕಾರ್ಯದರ್ಶಿ ಲಕ್ಷ್ಮಿ ಕೆ ರವಿ, ವಿಜಯಕುಮಾರ್, ಮಲ್ಲಿಕಾರ್ಜುನ ಕಾನೂರ್, ರಾಜೇಶ್ ವಿ ಅವಲಕ್ಕಿ, ಕಾತ್ಯಾಯಿನಿ.ಸಿ.ಎಸ್, ಎಂ.ಹೇಮಲತಾ, ಆರ್.ಮೀನಾಕ್ಷಮ್ಮ, ದಾಕ್ಷಾಯಣಿ, ರಾಜಕುಮಾರ್, ಸಂದೇಶ್ ನಾಡಿಗ್, ಬಿಂದು ಶೇಖರ್, ಗೀತಾ ಚಿಕ್ಮಠ್, ನಾಗಪ್ರಿಯ, ಕಸ್ತೂರಬಾ ಬಾಲಿಕಾ ಶಾಲೆಯ ಗೈಡ್ ವಿದ್ಯಾರ್ಥಿನಿಯರು, ಮೇರಿ ಇಮ್ಯಾಕ್ಯುಲೆಟ್ ಶಾಲೆಯ ಗೈಡ್ ಮಕ್ಕಳು, ಎಟಿಎನ್ಸಿಸಿ, ಡಿವಿಎಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ರೇಂಜರ್ ವಿದ್ಯಾರ್ಥಿಗಳು ದಳನಾಯಕ, ನಾಯಕಿಯರೊಂದಿಗೆ ಭಾಗವಹಿಸಿದ್ದರು.
ರಾಜೇಶ್ ವಿ ಅವಲಕ್ಕಿ ನಿರೂಪಿಸಿ, ಹೆಚ್.ಪರಮೇಶ್ವರ ಸ್ವಾಗತಿಸಿ, ವಿಜಯಕುಮಾರ್ ವಂದಿಸಿದರು. ರಾಷ್ಟç ಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.