Wednesday, October 2, 2024
Wednesday, October 2, 2024

Thirtahalli Poultry farm ತೀರ್ಥಹಳ್ಳಿ ತಾಲ್ಲೂಕಿನ ನಂಟೂರಿನಲ್ಲಿ ಮಳೆಗೆ ಷೆಡ್ ಬಿದ್ದು 50 ಕೋಳಿ ಸಾವು

Date:

Thirtahalli Poultry farm ತೀರ್ಥಹಳ್ಳಿ ತಾಲೂಕು ನಂಟೂರು ಗ್ರಾಮದ ಶ್ರೀಕಾಂತ್ ಎಂಬುವವರ ಕೋಳಿ ಫಾರಂ ಮೇಲೆ ಮಳೆ ಗಾಳಿಗೆ ಬೃಹದಾಕಾರದ ಮರ ಬಿದ್ದಿದ್ದು ಸುಮಾರು 50 ಕೋಳಿಗಳು ಸತ್ತು ಹೋಗಿವೆ.

ಫಾರಂನ ಶೀಟ್‌ಗಳು ಜಖಂ ಆಗಿದ್ದು, ಈ ಮರ ತೆರವುಗೊಳಿಸುವ ಸಂದರ್ಭದಲ್ಲಿ ಇಬ್ಬರು ಶೆಡ್ ನಿಂದ ಕೆಳಗೆ ಬಿದ್ದು ತುಂಬಾ ಗಾಯಗಳಾಗಿವೆ.

ಇನ್ನೊಂದು ಘಟನೆಯಲ್ಲಿ ಆಗುಂಬೆ ಹೋಬಳಿ ಚಂಗಾರು ಗ್ರಾಮದ ಹುಂಚಿಕೊಪ್ಪದಲ್ಲಿ ಸುರೇಶ್ ಎಂಬುವರ ಮನೆ ಪಕ್ಕದಲ್ಲಿ ರಾತ್ರಿ 1:15 ರ ಸಮಯದಲ್ಲಿ ಬೃಹತ್ ತೆಂಗಿನಮರ ಧರೆಗುರುಳಿದ್ದು , ಜೊತೆಗೆ ಕರೆಂಟ್ ಕಂಬ ಕೂಡ ಬಿದ್ದಿದ್ದು ತಂತಿ ಕಟ್ ಆಗಿದೆ. ಇನ್ನೂ ತೆಂಗಿನ ಮರ ಸ್ವಲ್ಪ ಚದುರಿ ಬಿದ್ದಿದ್ದು ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.

ಮರ ಬಿದ್ದು ಅಪಾರ ಹಾನಿ:
ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ಕೀರ್ತಿನಗರದ ಮನೆಯೊಂದರ ಮೇಲೆ ಬೃಹದಾಕಾರದ ಮರದ ಕೊಂಬೆಯೊAದು ಬಿದ್ದಿದೆ.
ಹಳೆಯ ಜೈಲ್ ಕಾಂಪೌಡಿನಲ್ಲಿರುವ ಈ ಮರವನ್ನು ತೆರವುಗೊಳಿಸುವಂತೆ ಮನೆಯ ಮಾಲಿಕ ಹರೀಶ್ ಹಲವು ಬಾರಿ ಸಂಬಧಪಟ್ಟ ಇಲಾಖೆಗಳಿಗೆ ಮಾನವಿ ಮಾಡಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸಿಲ್ಲ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.

Thirtahalli Poultry farm ಮರದ ಕೊಂಬೆ ಮನೆಯಮೇಲೆ ಬಿದ್ದಿದೆ. ಅದೃಷ್ಟವಶಾತ್ ಮನೆಯ ಮುಂಭಾಗದಲ್ಲಿ ಕೊಂಬೆ ಬಿದ್ದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಹಳೆ ಜೈಲಿನ ಕಾಂಪೌಂಡ್ ಕೂಡ ಮನೆಯ ಕಡೆ ಬಾಗಿದೆ. ಈ ವಿಚಾರವಾಗಿಯೂ ಮನೆಯ ಮಾಲಿಕರು ಜಿಲ್ಲಾಡಳಿತ, ಅರಣ್ಯ ಇಲಾಖೆ, ಪಾಲಿಕೆ ಹಾಗೂ ಜೈಲಿನ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...