Wednesday, October 2, 2024
Wednesday, October 2, 2024

Shivamogga Police ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಆಭರಣಗಳ ಬ್ಯಾಗ್ ಕಳವು ಮಾಡುವ ಕಳ್ಳರ ಗ್ಯಾಂಗ್ ಅಂದರ್

Date:

Shivamogga Police ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಹಿಳೆಯರು ರಶ್ ಮಧ್ಯೆಯೇ ಬಸ್ ಏರುವ ವೇಳೆ ಬ್ಯಾಗಿನಿಂದ ಚಿನ್ನಾಭರಣ ಕದಿಯುತ್ತಿದ ಕಳ್ಳಿಯರ ತಂಡವನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಕಳ್ಳಿಯರೆಲ್ಲ ಭದ್ರಾವತಿಯ ಹೊಸಮನೆಯವರು.
ಹೊಸಮನೆಯ ಹನುಮಂತನಗರದ ಶಾಂತಿ ಅಲಿಯಾಸ್ ಕರ್ಕಿ (31), ಮೀನಾಕ್ಷಿ 38), ಸಾವಿತ್ರಿ ಅಲಿಯಾಸ್ ಬಾಬಾ (29), ) ಸುಶೀಲಮ್ಮ 66) ಮತ್ತು ಹೊಸಮನೆ ಬೋವಿ ಕಾಲನಿಯ ದುರ್ಗಾ ಅಲಿಯಾಸ್ ಸಣ್ಣದುರ್ಗಾ (29) ಬಂಧಿತರು. ಜೂನ್ 29 ರಂದು ಶಿವಮೊಗ್ಗ ನಗರದ ಜೆ. ಸಿ. ನಗರದ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ಸಂಬಂಧಿಕರ ಮದುವೆಗಾಗಿ ದಾವಣಗೆರೆಗೆ ಹೊರಟಿದ್ದರು.

ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ನಲ್ಲಿ ಬಸ್ ಹತ್ತಿದ್ದರು. ಆ ಬಳಿಕ ಫೋನ್ ಮಾಡಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದ್ದ ಅವರಿಗೆ ಆಘಾತವಾಗಿತ್ತು. ಏಕೆಂದರೆ ಅದರಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 379 ಐಪಿಸಿ ಕೇಸ್ ದಾಖಲಾಗಿತ್ತು.

ನಂತರ ಪ್ರಕರಣದ ಪತ್ತೆಗಾಗಿ ಪಿಐ ರವಿ ಪಾಟೀಲ್ ನೇತೃತ್ವದಲ್ಲಿ ನಾಗರಾಜ್ ಎಎಸ್‌ಐ, ಹೆಚ್‌ಸಿ ಪಾಲಾಕ್ಷ ನಾಯ್ಕ, ಲಚ್ಚಾ ನಾಯ್ಕ್, ಸಿಪಿಸಿ ಚಂದ್ರ ನಾಯ್ಕ, ಗುರು ನಾಯ್ಕ, ನಿತಿನ್, ಪುನೀತ್ ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪಾ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷ್ಮಿ ಅವರನ್ನು ಒಳಗೊಂಡ ತನಿಖಾ ತಂಡವ ರಚನೆಯಾಗಿತ್ತು. ತಂಡವು ಆರೋಪಿಗಳನ್ನು ಬಂಧಿಸಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ ಒಟ್ಟು 7 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ಮೌಲ್ಯ 8,13,000 ರೂ ಗಳ 122 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಅಮಾನತುಪಡಿಸಿಕೊಂಡಿದೆ.
ಶಿವಮೊಗ್ಗದ ಇನೊಬ್ಬ ಕಳ್ಳಿಯ ಬಂಧನ
ಮಹಿಳೆಯರು ಬಸ್ ಏರುವ ವೇಳೆ ಬ್ಯಾಗಿನಿಂದ ಚಿನ್ನಾಭರಣ ಕದಿಯುತ್ತಿದ ಎರಡು ಪ್ರಕರಣಕ್ಕೆ ಸಬಂಧಿಸಿ ಕಳ್ಳಿಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

Shivamogga Police ಮಂಜುನಾಥ ಬಡಾವಣೆಯ ವಾಸಿ ತಾಹಿರಾ ರೋಹಿ, (32) ಬಂಧಿತ ಕಳ್ಳಿ.
ಜೂನ್ 29 ರಂದು ಭದ್ರಾವತಿ ಕೂಡ್ಲಿಗೆರೆ ಗ್ರಾಮದ ಮಹಿಳೆಯೊಬ್ಬರು ಭದ್ರಾವತಿಗೆ ಹೋಗಲು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ನೆಕ್ಲಸ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಂಡುಬಂದಿತ್ತು.

ಅವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿತ್ತು. ತಂಡವು ಕಳ್ಳಿಯನ್ನು ದಸ್ತಗಿರಿ ಮಾಡಿ, ೨ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 5,45,೦೦೦ ರೂ ಗಳ 81 ಗ್ರಾಂ 800 ಮಿಲಿ ತೂಕದ ಬಂಗಾರದ ಆಭರಣಗಳನ್ನು ಅಮಾನತುಪಡಿಸಿಕೊಂಡಿದೆ.
ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...