Saturday, December 6, 2025
Saturday, December 6, 2025

District Banjara Committee ಶಿವಮೊಗ್ಗ ಜಿಲ್ಲಾ ಬಂಜಾರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶ

Date:

District Banjara Committee ಶಿವಮೊಗ್ಗ ಜಿಲ್ಲಾ ಬಂಜಾರಾ ಸಮಿತಿಯವರು ಹಲವು ಸಂದರ್ಭಗಳಲ್ಲಿ ಬೈಲಾ ಮತ್ತು ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ ಸಂಘದ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತ ಎಂದು ಹೇಳಿರುವ ಸಹಕಾರ ಇಲಾಖೆಯ ನಿಬಂಧಕ ಕ್ಯಾಪ್ಟನ್ ಕೆ. ರಾಜೇಂದ್ರ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಸೂಚನೆ ನೀಡಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ಬಂಜಾರಾ ಸಂಘದ ಮುಖಂಡದ ಉಮಾಮಹೇಶ್ವರ ನಾಯ್ಕ್ ಮತ್ತು ಶಶಿಕುಮಾರ್ ನಾಯ್ಕ, ಸಂಘ ನಡೆಸಿರುವ ಅಕ್ರಮಗಳ ಬಗ್ಗೆ ಸಹಕಾರ ಇಲಾಖೆಗೆ ದೂರು ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನಾಗಿ ಸಹಾಯಕ ನಿಬಂಧಕರನ್ನು ನೇಮಿಸಲಾಗಿತ್ತು. ಅವರು ನೀಡಿರುವ ವರದಿಯ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ ಎಂದರು.

ಸಂಘದ ಆಡಳಿತ ಮಂಡಳಿಯು ವಾರ್ಷಿಕ ಸಭೆಯಲ್ಲಿ ಒಪ್ಪಿಗೆ ಪಡೆದು ನಿಯಮಾನುಸಾರ ನೊಂದಣಾಧಿಕಾರಿಗಳಿಂದ ಬೈಲಾದಲ್ಲಿ ಸೂಕ್ತ ತಿದ್ದುಪಡಿ ಮಾಡಿಕೊಳ್ಳದೆ ಸದಸ್ಯತ್ವವವ್ವನು ೧೦೦ ರೂ. ನಿಂದ ೫೦೦ ರೂ. ಗೆ ಏರಿಸಿದೆ. ಇದರಿಂದ ಬಂದ ಹಣ೨, ೪೯, ೬೦೦ ರೂ. ಆಗಿದೆ.

District Banjara Committee ಶುಲ್ಕ ಹೆಚ್ಚಳ ಸಂಘದ ಬೈಲಾ ಉಲ್ಲಂಘನೆಯಾಗಿದೆ. ಆಡಳಿತ ಮಂಡಳಿಯ ಅವಧಿ ಮುಗಿದಿದ್ದರೂ ಹೊಸ ಮಂqಳಿ ರಚನೆ ಮಾಡದೆ ಕರ್ತವ್ಯಲೋಪ ಮಾಡಲಾಗಿದೆ. ಇದೂ ಸಹ ಬೈಲಾ ಉಲ್ಲಂಘನೆಯಾಗಿದೆ. ದೇಣಿಗೆ ನೀಡಿರುವವರ ವಿವರಕ್ಕೂ, ಸಂಘವು ನೀಡಿರುವ ದಾಖಲಾತಿಗಳ ವಿವರಕ್ಕೂ ವ್ಯತ್ಯಾಸವಿದೆ. ಹಣ ಜಮಾ ಆಗದೇ ಇದ್ದರೂ ತಾಂಡಾಗಳ ಹೆಸರನ್ನು ನಾಮಫಲಕದಲ್ಲಿ ಅಳವಡಿಸಲಾಗಿದೆ.

ಇದಕ್ಕೆ ಆಡಳಿತ ಮಂಡಳಿ ಹೊಣೆ ಎಂದು ಆದೇಶದಲ್ಲಿ ಹೇಳಲಾಗಿದೆ ಎಂದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...