Sunday, December 14, 2025
Sunday, December 14, 2025

Udda Langada College Dinagalu ಮಲೆನಾಡಿನ ಮಳೆ,ಗದ್ದೆ, ಕೊಯ್ಲು,ಅಡಿಕೆ, ಹಬ್ಬ ಹರಿದಿನಗಳ ನೆನಪು ಕಾಡುವ ಕೃತಿ” ಉದ್ದ ಲಂಗದ ಕಾಲೇಜು ದಿನಗಳು”-ಅಶ್ವಿನಿ ಹೊದಲ

Date:

Udda Langada College Dinagalu ಪ್ರತಿಯೊಬ್ಬರ ಬದುಕಲ್ಲೂ ಬಾಲ್ಯದ ನೆನಪುಗಳ ಆಪ್ತತೆ ನಮ್ಮನ್ನು ಕಾಡುತ್ತದೆ, ಬಾಲ್ಯದ ದಿನಗಳ ಕಳಕಳಿ ಅಂದಿನ ಜೀವನ ಮೌಲ್ಯಗಳಿಂದು ಮರೆಯಾಗುತ್ತಿದೆ. ಕಾಲಘಟ್ಟಕ್ಕೆ ತಕ್ಕಂತೆ ಮನಸ್ಥಿತಿ ಬದಲಾಗುತ್ತಿದೆ ಎಂದು ಬೆಂಗಳೂರಿನ ಸಾಹಿತ್ಯ ಸಂಸ್ಕೃತಿ ಚಿಂತಕಿ ಅಶ್ವಿನಿ ಹೊದಲ ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಹೊದಲದ ಅಂಬಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಟಿ.ಜಿ.ಹರೀಶ್ ಒಡ್ಡಿನಬಯಲು ರವರ “ಉದ್ದ ಲಂಗದ ಕಾಲೇಜು ದಿನಗಳು” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದರು.

ಈ ಕೃತಿಯಲ್ಲಿ ಎಂಬತ್ತು- ತೊಂಭತ್ತರ ದಶಕದ ಮಲೆನಾಡ ಬದುಕಿನ ಚಿತ್ರಣದ ವಿಶಿಷ್ಠ ಪ್ರಬಂಧಗಳ ಸಂಕಲನವಾಗಿದೆ. ಹಳೆಯ ನೆನಪುಗಳನು ಹೊಸತನದಲ್ಲಿ ಅಕ್ಷರಗಳ ಮೂಲಕ ಚಿತ್ರಿಸಿದ್ದಾರೆ. ನೆನಪುಗಳು ನಮಗೆ ಖುಷಿಕೊಡುತ್ತದೆ,ನೆನಪುಗಳು ಸಂಪನ್ನವಾದರೆ ಸದಾ ಯೋಚಿಸುತ್ತೇವೆ. ಬಾಲ್ಯದ ದಿನಗಳ ಮಲೆನಾಡ ಮಳೆ,ಹಬ್ಬಹರಿದಿನ,ಗದ್ದೆ ಕೊಯ್ಲು,ಅಡಿಕೆ ಕೊಯ್ಲು,ಶಾಲೆಯ ಆಟಗಳು ಮುಂತಾದ ಬದುಕಿನ ಪಾತ್ರಗಳು ಓದುಗರನ್ನು ಕಾಡುವ ಕೃತಿಯಿದು.

ಇಂದಿನ ಮಕ್ಕಳು,ಯುವಪೀಳಿಗೆ ಪುಸ್ತಕ ಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಕೃತಿಕಾರ ಟಿ.ಜಿ.ಹರೀಶ್ ಒಡ್ಡಿನಬಯಲು ಮಾತನಾಡಿ, ಕಲೆ,ಸಂಸ್ಕೃತಿಯ ಮರೆವು ಇಂದಿನ ಯುವ ಪೀಳಿಗೆಗೆ ಕಾಡುತಿದೆ,ಇಂದಿನ ಮಕ್ಕಳಿಗೆ ಜೀವನ ಅನುಭವಗಳು ಬೇಡವಾಗಿದೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಸಂಸ್ಕೃತಿ ಚಿಂತಕ ಸದ್ಯೋಜಾತ ಭಟ್ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ನಟರಾಜ್ ಅರಳಸುರಳಿ , ಬಾಳೆಹೊನ್ನೂರಿನ ಬಿ.ಜಿ.ಎಸ್.ಪ.ಪೂ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ವೈ.ಎ, ಹಾಗೂ ಹೊದಲ ಬಸವರಾಜ್ ಮಾತನಾಡಿದರು. ಅಧ್ಯಕ್ಷತೆಯನ್ನು ಎ.ಆರ್.ಶ್ರೀಧರ್ ಅರಳಾಪುರ ವಹಿಸಿದ್ದರು.

Udda Langada College Dinagalu ವೇದಿಕೆಯಲ್ಲಿ ಹಿರಿಯ ರಂಗಕಲಾವಿದ ಟಿ.ಪಿ.ಸೀತಾರಾಮಯ್ಯ, ಟಿ.ಜಿ.ಜಗದೀಶ್ ಉಪಸ್ಥಿತರಿದ್ದರು. ಹೆಚ್.ಆರ್.ಭಾಸ್ಕರ್ ಶೆಟ್ಟಿ ಸ್ವಾಗತಿಸಿ,ವಿಶ್ವನಾಥ್ ಪ್ರಭು ಪ್ರಾಸ್ತಾವಿಸಿ,ಶ್ರೀ ಹರ್ಷ ಅರಳಾಪುರ ವಂದಿಸಿ,ಹೆಚ್.ಜಿ.ಪ್ರಕಾಶ್ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...