Thursday, October 3, 2024
Thursday, October 3, 2024

Udda Langada College Dinagalu ಮಲೆನಾಡಿನ ಮಳೆ,ಗದ್ದೆ, ಕೊಯ್ಲು,ಅಡಿಕೆ, ಹಬ್ಬ ಹರಿದಿನಗಳ ನೆನಪು ಕಾಡುವ ಕೃತಿ” ಉದ್ದ ಲಂಗದ ಕಾಲೇಜು ದಿನಗಳು”-ಅಶ್ವಿನಿ ಹೊದಲ

Date:

Udda Langada College Dinagalu ಪ್ರತಿಯೊಬ್ಬರ ಬದುಕಲ್ಲೂ ಬಾಲ್ಯದ ನೆನಪುಗಳ ಆಪ್ತತೆ ನಮ್ಮನ್ನು ಕಾಡುತ್ತದೆ, ಬಾಲ್ಯದ ದಿನಗಳ ಕಳಕಳಿ ಅಂದಿನ ಜೀವನ ಮೌಲ್ಯಗಳಿಂದು ಮರೆಯಾಗುತ್ತಿದೆ. ಕಾಲಘಟ್ಟಕ್ಕೆ ತಕ್ಕಂತೆ ಮನಸ್ಥಿತಿ ಬದಲಾಗುತ್ತಿದೆ ಎಂದು ಬೆಂಗಳೂರಿನ ಸಾಹಿತ್ಯ ಸಂಸ್ಕೃತಿ ಚಿಂತಕಿ ಅಶ್ವಿನಿ ಹೊದಲ ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಹೊದಲದ ಅಂಬಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಟಿ.ಜಿ.ಹರೀಶ್ ಒಡ್ಡಿನಬಯಲು ರವರ “ಉದ್ದ ಲಂಗದ ಕಾಲೇಜು ದಿನಗಳು” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದರು.

ಈ ಕೃತಿಯಲ್ಲಿ ಎಂಬತ್ತು- ತೊಂಭತ್ತರ ದಶಕದ ಮಲೆನಾಡ ಬದುಕಿನ ಚಿತ್ರಣದ ವಿಶಿಷ್ಠ ಪ್ರಬಂಧಗಳ ಸಂಕಲನವಾಗಿದೆ. ಹಳೆಯ ನೆನಪುಗಳನು ಹೊಸತನದಲ್ಲಿ ಅಕ್ಷರಗಳ ಮೂಲಕ ಚಿತ್ರಿಸಿದ್ದಾರೆ. ನೆನಪುಗಳು ನಮಗೆ ಖುಷಿಕೊಡುತ್ತದೆ,ನೆನಪುಗಳು ಸಂಪನ್ನವಾದರೆ ಸದಾ ಯೋಚಿಸುತ್ತೇವೆ. ಬಾಲ್ಯದ ದಿನಗಳ ಮಲೆನಾಡ ಮಳೆ,ಹಬ್ಬಹರಿದಿನ,ಗದ್ದೆ ಕೊಯ್ಲು,ಅಡಿಕೆ ಕೊಯ್ಲು,ಶಾಲೆಯ ಆಟಗಳು ಮುಂತಾದ ಬದುಕಿನ ಪಾತ್ರಗಳು ಓದುಗರನ್ನು ಕಾಡುವ ಕೃತಿಯಿದು.

ಇಂದಿನ ಮಕ್ಕಳು,ಯುವಪೀಳಿಗೆ ಪುಸ್ತಕ ಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಕೃತಿಕಾರ ಟಿ.ಜಿ.ಹರೀಶ್ ಒಡ್ಡಿನಬಯಲು ಮಾತನಾಡಿ, ಕಲೆ,ಸಂಸ್ಕೃತಿಯ ಮರೆವು ಇಂದಿನ ಯುವ ಪೀಳಿಗೆಗೆ ಕಾಡುತಿದೆ,ಇಂದಿನ ಮಕ್ಕಳಿಗೆ ಜೀವನ ಅನುಭವಗಳು ಬೇಡವಾಗಿದೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಸಂಸ್ಕೃತಿ ಚಿಂತಕ ಸದ್ಯೋಜಾತ ಭಟ್ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ನಟರಾಜ್ ಅರಳಸುರಳಿ , ಬಾಳೆಹೊನ್ನೂರಿನ ಬಿ.ಜಿ.ಎಸ್.ಪ.ಪೂ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ವೈ.ಎ, ಹಾಗೂ ಹೊದಲ ಬಸವರಾಜ್ ಮಾತನಾಡಿದರು. ಅಧ್ಯಕ್ಷತೆಯನ್ನು ಎ.ಆರ್.ಶ್ರೀಧರ್ ಅರಳಾಪುರ ವಹಿಸಿದ್ದರು.

Udda Langada College Dinagalu ವೇದಿಕೆಯಲ್ಲಿ ಹಿರಿಯ ರಂಗಕಲಾವಿದ ಟಿ.ಪಿ.ಸೀತಾರಾಮಯ್ಯ, ಟಿ.ಜಿ.ಜಗದೀಶ್ ಉಪಸ್ಥಿತರಿದ್ದರು. ಹೆಚ್.ಆರ್.ಭಾಸ್ಕರ್ ಶೆಟ್ಟಿ ಸ್ವಾಗತಿಸಿ,ವಿಶ್ವನಾಥ್ ಪ್ರಭು ಪ್ರಾಸ್ತಾವಿಸಿ,ಶ್ರೀ ಹರ್ಷ ಅರಳಾಪುರ ವಂದಿಸಿ,ಹೆಚ್.ಜಿ.ಪ್ರಕಾಶ್ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ Navaratri Festival ವಂದೇ ವಾಂಛಿತ ಲಾಭಾಯಚಂದ್ರಾರ್ಧಕೃತಶೇಖರಂ/ವೃಷಾರೂಢಂ...

Gandhi Jayanthi ನಗರದ ರೋವರ್ಸ್ ಕ್ಲಬ್ ನಲ್ಲಿ ಗಾಂಧಿ ಜಯಂತಿ ಆಚರಣೆ

Gandhi Jayanthi ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ...

B.Y.Raghavendra ಸಾರ್ವಜನಿಕ ಉದ್ಯಮಗಳು & ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಸಂಸದ ರಾಘವೇಂದ್ರರಿಗೆ ಅಭಿನಂದನೆ

B.Y.Raghavendra ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ,...

Mahatma Gandhi ಗಾಂಧಿ ಟೋಪಿ ಧಾರಣೆ ಕೇವಲ ತೋರಿಕೆಯಾಗಬಾರದು. ಆದರ್ಶಗಳ ಪಾಲನೆಯಾಗಬೇಕು-ಡಾ.ಎಚ್.ಬಿ.ಮಂಜುನಾಥ್.

Mahatma Gandhi ಗಾಂಧಿ ಟೋಪಿಯನ್ನು ಧರಿಸುವುದು ಕೇವಲ ತೋರಿಕೆಯಾಗದೆ ಮಹಾತ್ಮರ ಆದರ್ಶಗಳ...