Beautycare Assistant Training ವೃತ್ತಿಕೌಶಲ್ಯ ತರಬೇತಿಯಿಂದ ಯಶಸ್ಸು ಸಾಧಿಸಿ ಆತ್ಮವಿಶ್ವಾಸದಿಂದ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಿ ಎಂದು ಜನ ಶಿಕ್ಷಣ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಛೇರ್ಮನ್ ಡಾ|| ವಾಣಿ ಕೋರಿಕರೆ ನೀಡಿದರು.
ಅವರು ಸೋಮವಾರ ಜನ ಶಿಕ್ಷಣ ಸಂಸ್ಥೆಯ ದುರ್ಗಿಗುಡಿ ತರಬೇತಿ ಕೇಂದ್ರದಲ್ಲಿ “ಬ್ಯುಟೀಕೇರ್ ಅಸಿಸ್ಟೆಂಟ್ ತರಬೇತಿಯ ಉದ್ಘಾಡಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ.ಅರುಣಾದೇವಿ ಮಾತನಾಡಿ, ಆರ್ಥಿಕ ಸಬಲೀಕರಣಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಅತ್ಯಂತ ಸುಲಭ ಸಾಧನವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸ್ವಂತ ಉದ್ಯಮದೆಡೆಗೆ ಗಮನಹರಿಸಿ ಎಂದರು. ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ವಿದ್ಯಾರ್ಥಿಗಳು 4 ತಿಂಗಳ ತರಬೇತಿಯ ಪ್ರಯೋಜನ ಪಡೆದುಕೊಳ್ಳಲು ಆಗಮಿಸಿದ್ದಾರೆ.
Beautycare Assistant Training ಸ್ವಾಗತ ಹಾಗೂ ಪ್ರಾಸ್ತಾವಿಕವನ್ನು ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಎಂ.ಸುಮನಾ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿ ಶ್ವೇತಾ ಬಿ.ಎಂ ಮತ್ತು ಕಲಿಕಾರ್ಥಿಗಳು ಭಾಗವಹಿಸಿದ್ದರು.
Date: