Sunday, October 6, 2024
Sunday, October 6, 2024

Govt First Grade College ಮೌಢ್ಯತೆ ನಿವಾರಣೆಗೆ ವೈಚಾರಿಕತೆ ಬೇಕಿದೆ- ಡಾ.ಎಚ್.ಟಿ.ಕೃಷ್ಣ ಮೂರ್ತಿ

Date:

Govt First Grade College ನಮ್ಮ ವಿದ್ಯಾವಂತರಲ್ಲಿ ಮೌಢ್ಯ ಜಾಸ್ತಿಯಾಗಿದೆ. ನಾವು ಆರೋಗ್ಯವಾಗಿದ್ದರೆ ದೇಶವೂ ಆರೋಗ್ಯ ವಾಗಿರುತ್ತದೆ. ಅಂತಹ ಆರೋಗ್ಯಕ್ಕೆ ಕುವೆಂಪು ಹೇಳಿದ ನಿತ್ಯವೂ ಅವತರಿಪ ಸತ್ಯಾವತಾರವನ್ನು ಕಾಣಬೇಕು. ನಾವು ಮೌಢ್ಯದ ಅದೀನದಲ್ಲಿದ್ದೇವೆ. ಸತ್ಯವನ್ನು ನಮಗೆ ಯಾರೂ ಹೇಳುತ್ತಿಲ್ಲ. ವೈಚಾರಿಕತೆ ಮೌಢ್ಯದ ನಿವಾರಣೆಗೆ ರೂಢಿಸಿಕೊಳ್ಳುವ ಅಗತ್ಯವನ್ನು ಸಾಹಿತಿಗಳು, ವಿಶ್ರಾಂತ ಪ್ರಿನ್ಸಿಪಾಲರಾದ ಡಾ. ಎಚ್. ಟಿ. ಕೃಷ್ಣಮೂರ್ತಿ ವಿವರಿಸಿದರು.

ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್. ಎಸ್.ಎಸ್. ವಾರ್ಷಿಕ ಶಿಬಿರವು ಅಗಸನಹಳ್ಳಿಯಲ್ಲಿ ನಡೆಯುತಿದ್ದು, ಈ ಶಿಬಿರದಲ್ಲಿ ಏರ್ಪಡಿಸಿದ್ದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯದಲ್ಲಿನ ವೈಚಾರಿಕ ಪ್ರಜ್ಞೆ ವಿಚಾರವಾಗಿ ಮಾತನಾಡಿದರು..

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಬದುಕನ್ನು ನಿರ್ವಹಿಸುವುದು ಕಲಿಯಬೇಕು. ಈ ಶಿಬಿರದ ಸದುಪಯೋಗ ವಾಗಲಿ ಎಂದು ಹಾರೈಸಿದರು.

ಹೊಳೆಹೊನ್ನೂರು ಕಸಾಪ ಹೋಬಳಿ ಅಧ್ಯಕ್ಷರಾದ ಹ. ಬ. ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್, ನಶೆಗೆ ಮಾರುಹೋಗದೆ ಉತ್ತಮ ವಿಚಾರ, ಜೀವನ ಪದ್ದತಿ ಅಳವಡಿಸಿಕೊಳ್ಳಲು ಕುವೆಂಪು ಅವರ ಸಾಹಿತ್ಯ ಓದಿ ಎಂದರು.

Govt First Grade College ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ರೈತ ಮುಖಂಡರಾದ ಕೃಷ್ಣಮೂರ್ತಿ, ಕಸಾಪ ಉಪಾಧ್ಯಕ್ಷರಾದ ಶ್ರೀನಿವಾಸ್, ಕಾಲೇಜು ಉಪನ್ಯಾಸಕರಾದ ಚಂದ್ರಪ್ಪ, ಸುರೇಶ್, ಸೌಮ್ಯ, ಗಾಯತ್ರಿ, ಅಂಬಿಕಾ, ತಾ. ಕಾರ್ಯದರ್ಶಿ ಎಚ್. ತಿಮ್ಮಪ್ಪ, ಹೋಬಳಿ ಕಾರ್ಯದರ್ಶಿ ಚಂದ್ರಪ್ಪ ಉಪಸ್ಥಿತರಿದ್ದರು.

ಕು. ಚಂದನ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಕು. ಮಾನಸ ಸ್ವಾಗತಿಸಿದರು, ಕು. ಚಂದನ ನಿರೂಪಿಸಿದರು. ಪ್ರಿಯಾ ವಂದಿಸಿದರು. ರಾ. ಸೇ. ಯೋ. ಕಾರ್ಯಕ್ರಮಾಧಿಕಾರಿಗಳಾದ ಎಚ್. ರುದ್ರಮುನಿ, ಡಾ. ರಾಜುನಾಯ್ಕ ಎಸ್. ನಿರ್ವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅಕ್ಟೋಬರ್ 7 ರಂದು ಆಲ್ಕೊಳ‌ ಸುತ್ತಮುತ್ತ ವಿದ್ಯುತ್ ಸರಬರಾಜು ಇರುವುದಿಲ್ಲ

MESCOM ಶಿವಮೊಗ್ಗ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಶಿವಮೊಗ್ಗ...

Nehru Stadium Shimoga ಪ್ರಾಥಮಿಕ ಶಾಲಾಮಕ್ಕಳ ಕ್ರೀಡಾಕೂಟ ಉದ್ಘಾಟನೆ

Nehru Stadium Shimoga ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ...

Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ

Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ...

Shivamogga News ಕೆರೆ,ಕಟ್ಟೆ,ಹಳ್ಳ ಜಮೀನು ಇತರೆ ಸರ್ಕಾರದ ಸ್ವತ್ತು ಒತ್ತುವರಿ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳಿ-ನ್ಯಾ.ಬಿ.ಎ.ಪಾಟೀಲ್

Shivamogga News ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು...