Sunday, December 7, 2025
Sunday, December 7, 2025

S.N.Channabasappa ಜಿಲ್ಲಾ ಕೆಡಿಪಿ ಸಭೆಯಲ್ಲಿ ಬಕ್ರೀದ್ ಗೋಹತ್ಯೆ ಕುರಿತು ಶಾಸಕ ಚೆನ್ನಿ ಮತ್ತು ಶಾಸಕಿ ಬಲ್ಕಿಶ ಬಾನು ನಡುವೆ ವಾಗ್ಯುದ್ಧ

Date:

ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋಹತ್ಯೆ ಮಾಡಲಾಗುತ್ತಿದೆ. ಕಾನೂನು ಪಾಲನೆ ಮಾಡದೆ ಇರುವುದು ಸರಿಯಲ್ಲ. ಸರ್ಕಾರದಿಂದ ಕಾನೂನು ಪಾಲನೆ ಮಾಡಬಾರದೆಂಬ ಆದೇಶವಿದೆಯೇ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಬಕ್ರೀದ್ ಹಬ್ಬದಲ್ಲಿ ಗೋಹತ್ಯೆಯಾಗಿಲ್ಲ ಎಂದು ಈ ವೇಳೆ ಶಾಸಕಿ ಬಲ್ಕೀಶ್ ಬಾನು ಹೇಳಿದಾಗ, ಇದಕ್ಕೆ ಶಾಸಕ ಚನ್ನಬಸಪ್ಪ ಹಬ್ಬದ ಬಗ್ಗೆ ಆಕ್ಷೇಪವಿಲ್ಲ. ಆದರೆ ಗೋಹತ್ಯೆ ನಡೆದಿಲ್ಲ ಎಂದರೆ ರಾಜೀನಾಮೆ ನೀಡುತ್ತೇನೆ ಎಂದರು.

ಗೋಹತ್ಯೆ ವಿಷಯದಲ್ಲಿ ಶಾಸಕ ಚನ್ನಬಸಪ್ಪ ಮತ್ತು ನೂತನ ಎಂಎಲ್ ಸಿ ಬಲ್ಕೀಶ್‌ಬಾನು ನಡುವೆ ಜುಗಲ್ ಬಂಧಿ ನಡೆಯಿತು.

ಚನ್ನಬಸಪ್ಪ ಮಾತನ್ನು ಬೆಂಬಲಿಸಿದ ಶಾಸಕ ಆರಗ ಮತ್ತು ವಿಜಯೇಂದ್ರ ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಗೊಳಿಸಿ ಎಂದರು. ಇದಕ್ಕೆ ಎಸ್ಪಿ ಮಿಥುನ್‌ಕುಮಾರ್ ಮಾತನಾಡಿ, ಕಳೆದ ವರ್ಷ ೨೧ ಗೋಹತ್ಯೆ ಪ್ರಕರಣ ದಾಖಲಾಗಿದೆ ಈ ವರ್ಷ 44 ಪ್ರಕರಣ ದಾಖಲಾಗಿದೆ.

ಗೋವಿನ ಬಗ್ಗೆ ಮಾಹಿತಿ ಇದ್ದರೆ ನಮ್ಮ ಗಮನಕ್ಕೆ ತನ್ನಿ. ಗಮನಕ್ಕೆ ತಂದ ನಂತರ ಕ್ರಮವಾಗದಿದ್ದರೆ ನೀವು ಆರೋಪಿಸಿ ಎಂದಿದ್ದೆ ಎಂದ ಎಸ್ಪಿ, ಅವರು ಈ ಬಗ್ಗೆ 100 ದೂರು ಬಂದಿದೆ.
ಎಲ್ಲರ ಬಗ್ಗೆ ಕ್ರಮಜರುಗಿಸಲಾಗುವುದು ಎಂದರು.

S.N.Channabasappa ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಗೋಹತ್ಯೆ ನಿಷೇಧ ಕಾನೂನು ವಿಚಾರದಲ್ಲಿ ನಾನು ಮಧ್ಯ ಪ್ರವೇಶಿಸುವುದಿಲ್ಲ. ಕಾನೂನು ಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡಿ ಎಂದಿರುವೆ. ಕಾನೂನು ಬಿಟ್ಟರೆ ಜನಪ್ರತಿನಿಧಿಗಳು ನನ್ನ ಗಮನಕ್ಕೆ ತನ್ನಿ. ಗೋಹತ್ಯೆ ವಿಷಯ ಸೂಕ್ಷ್ಮ ವಿಚಾರವಾಗಿದೆ. ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇದಕ್ಕೆ ಆಕ್ಷೇಪಿಸಿದ ಶಾಸಕ ಚನ್ನಬಸಪ್ಪ ಸೂಕ್ಷ್ಮವಾಗಿದ್ದರೆ ಕ್ರಮ ಜರುಗಿಸಿ. ಹತ್ಯೆಯಾಗಿರುವ ಬಗ್ಗೆ ಕ್ರಮ ಜರುಗಿಸಿ ಎಂದರು. ಎಸ್ಪಿ ಮಿಥುನ್‌ಕುಮಾರ್ ಮಾತನಾಡಿ, ಗೋಹತ್ಯೆ ಪ್ರಕರಣದಲ್ಲಿ ಕಾನೂನು ಬಾಹಿರವಾಗಿದ್ದರೆ ಕ್ರಮ ನಿಶ್ಚಿತ ಎಂದರು. ಗೋಹತ್ಯೆಯೇ ಕಾನೂನು ಬಾಹಿರ ಎಂದು ಮತ್ತೆ ಶಾಸಕ ಚೆನ್ನಿ ಹೇಳಿದರು.

ಮುನ್ಸಿಪಾಲ್ಟಿ ವಾಹನದಲ್ಲಿ ಗೋತ್ಯಾಜ್ಯ ಸಾಗಾಣೆ ಆಗಿದೆ. ಇದು ಕಾನೂನು ಬಾಹಿರವಲ್ಲವೇ ಎಂದ ಶಾಸಕ ಚೆನ್ನಿಗೆ ಎಸ್ಪಿ ವಿವರಣೆ ನೀಡಿ, ಈ ವರ್ಷ 101 ಗೋರಕ್ಷಣೆ ಆಗಿದೆ ಎಂದು ಹೇಳಿದರು.

ರಕ್ಷಕರ ವಿರುದ್ಧ ಎಷ್ಟು ಕೇಸ್ ಹಾಕಿದ್ದೀರಿ ಎಂದು ಎಂಎಲ್ ಸಿ ಅರುಣ್ ಪ್ರಶ್ನಿಸಿದರು. ಶಾಸಕ ಚೆನ್ನಿ ಅವರ ಮಾತಿಗೆ ಭದ್ರಾವತಿ ಶಾಸಕ ಸಂಗಮೇಶ್ವರ್ ಭದ್ರಾವತಿಯಲ್ಲಿ ಗೋಹತ್ಯೆ ನಡೆದಿಲ್ಲ ಎಂದರು.

ಈ ಮಧ್ಯೆ ಬಲ್ಕೀಶ್ ಬಾನು ಜಿಲ್ಲೆಯಲ್ಲಿ ಹಲವು ಸಮಸ್ಯೆ ಇದೆ. ಬೇರೆ ವಿಷಯ ಮಾತನಾಡಿ ಎಂದಾಗ, ನಿಮ್ಮ ಬಗ್ಗೆ ಗೌರವವಿದೆ. ಗೋಹತ್ಯೆ ಸಮಸ್ಯೆ ಅಲ್ವಾ ಎಂದು ಚನ್ನಬಸಪ್ಪ ಆಕ್ಷೇಪಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗೋಶಾಲೆಯಲ್ಲಿ ಗೋಸಾಗಣೆ ಮಾಡಿ ಹತ್ಯೆ ಮಾಡಲಾಗಿದೆ. ಕಾನೂನು ಸರಿಯಾಗಿ ಪಾಲನೆ ಆಗದಿದ್ದರೆ ಎರಡು ಧರ್ಮಗಳ ನಡುವೆ ಗಲಾಟೆ ಆಗಲಿದೆ ಎಂದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ ಗೋಶಾಲೆ ಆರಂಭಿಸಿ ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಗೋಶಾಲೆ ಆರಂಭ ವಿಳಂಬವಾಗಿರುವ ಬಗ್ಗೆ ಶಾಸಕ ಚನ್ನಬಸಪ್ಪ ಆಕ್ಷೇಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...