B. Y. Raghavendra ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರೌಢಶಾಲಾ ಹಂತ ಉತ್ತಮವಾಗಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ “ಮೈ ಸೇವಾ ಟ್ರಸ್ಟ್” ವತಿಯಿಂದ ಹೈ ಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದರು.
ಮೈತ್ರಾದೇವಿ ಯಡಿಯೂರಪ್ಪ ಎಂದು ಇದ್ದು ಅವರ ಹೆಸರಿನಲ್ಲಿ ಸಂಸ್ಥೆ ನಿರ್ಮಿಸಿ ಸಾಮಾಜಿಕ ಕಾರ್ಯ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದರು. ನಮಗೆ ಗಾಂಧೀಜಿ, ಅಂಬೇಡ್ಕರ್ ,ಸಾವರ್ಕರ್, ಆಜಾದ್ ಚಂದ್ರಶೇಖರ್ ಮಾದರಿಯಾಗಿರಬೇಕು ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಮಾತನಾಡಿ, ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ , ನೀವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಿಮ್ಮ ತಂದೆ ತಾಯಿಗಳು ತಾವು ತಿನ್ನುವ ತುತ್ತಿನಲ್ಲಿ, ನಿಮಗೆ ತುತ್ತು ಕೊಟ್ಟು ಸಾಕಿ ಬೆಳೆಸಿದ್ದಾರೆ , ಅವರಿಗೆ ವಯಸ್ಸಾದ ಕಾಲಕ್ಕೆ, ಅವರ ಮನಸ್ಸಿಗೆ ನೋವಾಗದಂತೆ ಅವರನ್ನು ದೂರ ಮಾಡದಂತೆ ನೀವು ನೋಡಿಕೊಳ್ಳಬೇಕು ಎಂದರು.
ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ ಹೆದರಿ ಓಡಿ ಹೋಗದೆ, ಅವುಗಳನ್ನು ಧೈರ್ಯವಾಗಿ ನಿಂತು ದಿಟ್ಟವಾಗಿ ಎದುರಿಸಿ ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ಸುಗಳ ಸಮಸ್ಯೆ ಇದ್ದು , ಈಗಾಗಲೇ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಹಲವು ಲೈನ್ ಗಳಿಗೆ ಬಸ್ಸು ಗಳನ್ನು ಓಡಿಸಲಾಗುತ್ತಿದೆ, ಇನ್ನು ಬಾಕಿ ಇರುವ ಪ್ರದೇಶಗಳಿಗೆ ಮತ್ತೆ ಸಾರಿಗೆ ಸಚಿವರ ಜೊತೆ ಮಾತುಕತೆ ನಡೆಸಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಎಸ್ ಬಿ ಮಠದ್ ವಹಿಸಿದ್ದರು.
B. Y. Raghavendra ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ಶಾಸಕ ರಾಮಮೂರ್ತಿ , ಎಂ ಎ ಡಿ ಬಿ ಮಾಜಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ , ಮೈ ಟ್ರಸ್ಟಿನ ಕಾರ್ಯದರ್ಶಿ ಹಾಗೂ ಹಿರಿಯ ವಕೀಲರ ಸಂದೀಪ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಇರ್ಫಾನ್ ಖಾನ್ , ಅಶೋಕ್ ನಾಯಕ್, ಸೋಮಶೇಖರ್ , ಬಿ ಪಾಪಯ್ಯ, ನಿಂಬೆಗೊಂದಿ ಸಿದ್ದಲಿಂಗಪ್ಪ , ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ , ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ , ಮುಂತಾದವರು ಪಾಲ್ಗೊಂಡಿದ್ದರು.