Tuesday, March 24, 2026
Tuesday, March 24, 2026

International Yoga Day ವೈಜ್ಞಾನಿಕವಾಗಿ ಒಕ್ಕೊರಲ ಮನಸ್ಸಿನಿಂದ ಯೋಗವನ್ನು ಪ್ರಪಂಚವೇ ಒಪ್ಪಿ ಅಪ್ಪಿಕೊಂಡಿದೆ-ಶ್ರೀನಿವಾಸ ಆಚಾರ್ಯ

Date:

International Yoga Day ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಯೋಗ ದಿನವನ್ನು ಗೋಪಾಲಗೌಡ ಬಡಾವಣೆಯ ಬಿ ಬ್ಲಾಕ್‌ನಲ್ಲಿನ ಶ್ರೀ ಸಿದ್ಧಿ ಬುದ್ಧಿ ದೇವಸ್ಥಾನದ ಆವರಣದಲ್ಲಿ ಆಚರಿಸಲಾಯಿತು.

ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಯೋಗ ಗುರುಗಳಾದ ಶ್ರೀನಿವಾಸ ಆಚಾರ್ಯರವರು ಪಾಲ್ಗೊಂಡು, ಯೋಗಾಸನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗ ನಮ್ಮ ಸನಾತನ ಸಂಸ್ಕೃತಿಯ ವಿಶಿಷ್ಟ ಕೊಡುಗೆ. ಮನಸ್ಸಿನ ಸ್ಥಿರತೆ, ದೈಹಿಕ ಆರೋಗ್ಯವನ್ನು ಸಮತೋಲನವಾಗಿ ಕಾಯ್ದುಕೊಳ್ಳಲು ಇದು ಸಹಕಾರಿ. ಇಂದು ನಮ್ಮ ಪ್ರಾಚೀನ ಕಾಲದ ಯೋಗವನ್ನು, ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಒಕ್ಕೊರಲ ಮನಸ್ಸಿನಿಂದ ಪ್ರಪಂಚವೇ ಒಪ್ಪಿ ಅಪ್ಪಿಕೊಂಡಿದ್ದು, ಇದು ಭಾರತ ದೇಶದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ ಎಂದರು.

International Yoga Day ಬ್ಯಾಂಕಿನ ಕ್ಷೇತ್ರೀಯ ಪ್ರಬಂಧಕರಾದ ಪಂಕಜ್ ಕುಮಾರ್ ಸುಮನ್, ಉಪ ಮಹಾ ಪ್ರಬಂಧಕ ಯೋಗೀಶ್, ಮುಖ್ಯ ಪ್ರಬಂಧಕರಾದ ನವೀನ್ ಚಂದ್ರ, ಪ್ರದೀಪ್ ಶೆಟ್ಟಿ, ರಾಜ್ ಸಿನ್ನ ಮತ್ತು ಸಿಬ್ಬಂದಿ ವರ್ಗದವರು, ಸಿದ್ಧಿ ಬುದ್ಧಿ ಮಹಾಗಣಪತಿ
ದೇವಸ್ಥಾನದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಉಪಸ್ಥಿತರಿದ್ದು, ಯೋಗ ಗುರುಗಳಾದ ಶ್ರೀನಿವಾಸ ಆಚಾರ್ಯರನ್ನು ಸನ್ಮಾನಿನಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...