Yakshagana Adhyayana Kendra ಯಕ್ಷಭೂಮಿ ,ಯಕ್ಷಗಾನ ಅಧ್ಯಯನ ಕೇಂದ್ರ,ತೀರ್ಥಹಳ್ಳಿ ವತಿಯಿಂದ ಜೂನ್ 23 ರ ಭಾನುವಾರ ಸಂಜೆ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ತಾಳಮದ್ದಳೆ ಹಾಗೂ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಅಧ್ಯಕ್ಷ ಶೈಲೇಶ್ ತೀರ್ಥಹಳ್ಳಿ ಹೇಳಿದರು.
Yakshagana Adhyayana Kendra ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5:30ಕ್ಕೆ ಅತಿಥಿ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಮಂಥರಾಂತರ ಹಾಗೂ 7:30ಕ್ಕೆ ಯಕ್ಷಭೂಮಿ ಸಂಸ್ಥೆ ವಿದ್ಯಾರ್ಥಿಗಳಿಂದ ಮೈಂದ ದ್ವಿವಿದ ಕಾಳಗ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಪ್ರಗತಿಪರ ಕೃಷಿಕ ಕೂಳೂರು ಸತ್ಯನಾರಾಯಣ್ ಹಾಗೂ ತೀರ್ಥಹಳ್ಳಿ ನಟಮಿತ್ರರು ಅಧ್ಯಕ್ಷ ಸಂದೇಶ್ ಜವಳಿ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.ಈ ಗೋಷ್ಟಿಯಲ್ಲಿ ಕಲಾವಿದರಾದ ರೋಹಿತ್,ಶಿವಕುಮಾರ್ ನೀನಾಸಂ,ನಿರಂಜನ್ ಪವಾರ್,ವಾಣಿಶ್ರೀ ಕಾಮತ್ ಉಪಸ್ಥಿತರಿದ್ದರು.
Yakshagana Adhyayana Kendra ಜೂನ್ 23 ತೀರ್ಥಹಳ್ಳಿಯಲ್ಲಿ ತಾಳಮದ್ದಳೆ & ಯಕ್ಷಗಾನ
Date: