Tuesday, February 3, 2026
Tuesday, February 3, 2026

Chandan Shetty ಬೇರೆಯಾಗುತ್ತಿರುವ “ಬಿಗ್ ಬಾಸ್” ದಂಪತಿ, ಚಂದನ್- ನಿವೇದಿತಾ

Date:

Chandan Shetty ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿಗಳಲ್ಲಿ ಸಾಕಷ್ಟು ಜೋಡಿಯ ಹೆಸರು ಓಡಾಡುತ್ತಲೇ ಇರುತ್ತದೆ ಅವರ ಮದ್ಯೆ ಸದಾ ಸುದ್ದಿಯಲ್ಲಿ ಇರುವ ಹೆಸರು ಎಂದ್ರೆ ಅದು ಚಂದನ್ ಹಾಗೂ ನಿವೇದಿತಾ ಗೌಡ. ಇನ್ನೂ ಇವರಿಬ್ಬರ ವಿಧಿಯ ಬರಹ ನೋಡುವುದಾದರೆ ಎಲ್ಲರೂ ಹೇಳುವಂತೆ ಡಿಸ್ಟಿನಿ ಎಷ್ಟು ಮುಖ್ಯ ಎಂಬುದು ನಿಮಗೆ ತಿಳಿಯುತ್ತದೆ. ಏಕೆಂದ್ರೆ ಮೈಸೂರಿನಲ್ಲಿ ಓದುತ್ತಾ ಟಿಕ್ ಟಾಕ್ ಮಾಡುತ್ತಾ ಪರಿಚಯವೇ ಇಲ್ಲದ ಹುಡುಗಿ ಬಿಗ್ ಬಾಸ್ ಗೆ ಬಂದು ಚಂದನ್ ಪರಿಚಿತವಾಗಿ ಆ ಪರಿಚಯ ಪ್ರೀತಿಯಾಗಿ ಈಗ ಮದುವೆಯಾಗಿರುವುದು ನಿಜಕ್ಕೆ ವಿಧಿಯ ಬರಹ ಎಂದೇ ಹೇಳಬಹುದು. ಇನ್ನೂ ಚಂದನ್ ಶೆಟ್ಟಿ ಅವರು ಕನ್ನಡದ ಪ್ರಸಿದ್ಧ ರಾಪರ್, ಗಾಯಕ, ಮತ್ತು ಸಂಗೀತ ನಿರ್ದೇಶಕರಾಗಿ ಹೆಸರಾಗಿದ್ದಾರೆ.
ಇವರು ಮೊದಲಿಗೆ ಅಲ್ಬಾಂ ಸಾಂಗ್ ಆದ “3 ಪೆಗ್” ಎಂಬ ಹಾಡಿನ ಮೂಲಕ ಬಹಳಷ್ಟು ಜನಪ್ರಿಯತೆ ಪಡೆದುಕೊಂಡರು. ಚಂದನ್ ಶೆಟ್ಟಿಯವರು “ಬಿಗ್ ಬಾಸ್ ಕನ್ನಡ” ರಿಯಾಲಿಟಿ ಶೋನ ಸೀಸನ್ 5ರ ವಿಜೇತರೂ ಆಗಿದ್ದಾರೆ.
ಚಂದನ್ ಬಿಗ್ ಬಾಸ್ ಗೆದ್ದ ನಂತರ ಅವರ ಪ್ರಖ್ಯಾತಿ ಹೆಚ್ಚಾದ ನಂತರ ಈಗ ಚಲನಚಿತ್ರ ಸಂಗೀತ, ರಾಪ್ ಸಂಗೀತ, ಮತ್ತು ರಿಯಾಲಿಟಿ ಟಿವಿ ಹಾಗೂ ಸಿನಿಮಾಗಳ ಹೀರೋ ಆಗಿ ಮಿಂಚುತ್ತಾ ಇದ್ದಾರೆ ಎಂದು ಹೇಳಬಹುದು. ನಿವೇದಿತಾ ಗೌಡ ಕನ್ನಡದ ರಿಯಾಲಿಟಿ ಶೋ “ಬಿಗ್ ಬಾಸ್ ಕನ್ನಡ”ದ ಸೀಸನ್ 5ರಲ್ಲಿ ಭಾಗವಹಿಸಿದ್ದು, ಈ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಈ ಮೂಲಕವೇ ಜನರಿಗೆ ಇವರ ಪರಿಚಯ ಆಗಿದ್ದು .. ಈಗ ಸದ್ಯದಲ್ಲಿ ರಿಯಾಲಿಟಿ ಶೋ ಮೂಲಕ ಬ್ಯುಸಿ ಆಗಿದ್ದಾರೆ.
Chandan Shetty ಮೊದಲಿಗೆ ಸ್ನೇಹಿತರಾಗಿ ಇದ್ದ ಇವರು ಮದುವೆಯಾಗುತ್ತಾರೆ ಎಂದು ಯಾರೊಬ್ಬರಿಗೂ ಕೊಡ ನಿರೀಕ್ಷೆ ಇರಲಿಲ್ಲ. ಇನ್ನೂ 2019 ನಲ್ಲಿ ಯುವದಸರಾ ಸಮಯದಲ್ಲಿ ವೇದಿಕೆಯ ಮೇಲೆ ತಮ್ಮ ಪ್ರೇಮ ನಿವೇದನೆ ಮಾಡಿ ಆ ನಂತರ ಮದುವೆಯಾದವರು ಇವರು. ಇವರಿಬ್ಬರೂ “ಬಿಗ್ ಬಾಸ್ ಕನ್ನಡ”ದ ಸೀಸನ್ 5ರಲ್ಲಿ ಪಾಲ್ಗೊಂಡು, ಅಲ್ಲಿ ಪರಿಚಯವಾದರು ಮತ್ತು ಒಬ್ಬರನ್ನೊಬ್ಬರು ಪ್ರೀತಿಸಲಾರಂಭಿಸಿದರು. ಅದಾದ ಬಳಿಕ 24 ಫೆಬ್ರವರಿ 2020 ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಅನ್ಯೋನ್ಯತೆ ಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುಗರಿಗೆ ಹೊಟ್ಟೆ ಕಿಚ್ಚು ತರಿಸಿ ಇನ್ಸಫೈರ್ ಆಗುವ ರೀತಿಯಲ್ಲಿ ಇದ್ದ ಜೋಡಿ ಈಗ ಡೈವೋರ್ಸ್ ಹಂತ ತಲುಪಿದೆ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...