Wednesday, October 2, 2024
Wednesday, October 2, 2024

Ananadapura Police ಮಾಂಗಲ್ಯವನ್ನು ಪಾಲೀಶ್ ಮಾಡುತ್ತೇವೆಂದು ಮಹಿಳೆಯರಿಗೆ ವಂಚನೆಗೈದ ಗ್ಯಾಂಗ್ ಪೊಲೀಸ್ ವಶ

Date:

Ananadapura Police ಬೆಂಡೋಲೆ, ಸರ, ಮಾಂಗಲ್ಯವನ್ನು ಪಾಲಿಶ್ ಹಾಕಿಕೊಡುತ್ತೇವೆ ಎಂದು ಯಾಮಾರಿಸುವ ಗ್ಯಾಂಗ್‌ನ್ನು ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ಹಿಡಿದಿದ್ದಾರೆ.

ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ ಕೆಲವು ತಿಂಗಳಗಳ ಹಿಂದೆ ಹೊಸಂತೆ ಗ್ರಾಮದ ಬಸಮ್ಮ ಎಂಬ ಮಹಿಳೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು..

ಈ ವೇಳೆ ಅವರನ್ನು ಮುಖಾಮುಖಿಯಾಗಿ ಭೇಟಿಯಾದ ವ್ಯಕ್ತಿಯೊಬ್ಬ ಓಲೆ ಹಳೆಯದಾಗಿದೆ. ಕೊಡು ಪಾಲಿಶ್ ಮಾಡಿಕೊಡುತ್ತೇನೆ ಎಂದಿದ್ದಾನೆ. ಪಾಲಿಶ್ ಮಾಡಿ ಕೊಡುವರೆಗೂ ಈ ಈ ಎರಡು ಬಂಗಾರದ ಪದಕಗಳನ್ನು ಇಟ್ಕೊಂಡಿರು ಎಂದಿದ್ದಾನೆ.
ಚಿನ್ನದ ಪದಕದ ಮಾತನ್ನು ನಂಬಿದ ಅಜ್ಜಿ ಓಲೆ ಬಿಚ್ಚಿ ಆತನ ಕೈಗೆ ಕೊಟ್ಟಿದ್ದಾಳೆ. ಆತ ಅದನ್ನು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ. ಆತ ವಾಪಸ್ ಬರದಿರುವುದನ್ನ ನೋಡಿ ಅಜ್ಜಿ ಅಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಪದಕಗಳನ್ನು ಪರೀಕ್ಷೆ ಮಾಡಿಸಿದ್ದಾಳೆ. ಆಗ ಅವಳಿಗೆ ಆಘಾತ ಎದುರಾಗಿತ್ತು.

Ananadapura Police ದಾರಿಹೋಕ ಕೊಟ್ಟ ಪದಕ ನಕಲಿಯಾಗಿತ್ತು. ಹೀಗಾಗಿ ಬಸಮ್ಮ ಆನಂದಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರು ಶಿಕಾರಿಪುರ ಗ್ರಾಮದ ಕೃಷ್ಣಪ್ಪ (65) ಹಾಗೂ ವೀರೇಶ್ (32) ಎಂಬಿಬ್ಬರನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ಅಜ್ಜಿ ಓಲೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...