Friday, December 5, 2025
Friday, December 5, 2025

Forest Department ಶೆಟ್ಟಿ ಕೊಪ್ಪದ ಮನೆಯೊಂದರಲ್ಲಿ ನುಗ್ಗಿದ ಕಾಳಿಂಗ ಸರ್ಪ

Date:

Forest Department ಎನ್ ಆರ್ ಪುರ ತಾಲ್ಲೂಕಿನ ಶೆಟ್ಟಿಕೊಪ್ಪದ ಮನೆಯೊಂದರ ಅಡುಗೆ ಕೋಣೆಗೆ ಕಾಳಿಂಗ ಸರ್ಪವೊಂದು ನುಗ್ಗಿ ಆತಂಕ ಸೃಷ್ಟಿಸಿತ್ತು. ನಂತರ ಅದನ್ನು ರಕ್ಷಣೆ ಮಾಡಿ, ಮನೆಯವರ ಭಯ ನಿವಾರಣೆ ಮಾಡಲಾಗಿದೆ.
ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ 12ಅಡಿ ಉದ್ದದ ಕಾಳಿಂಗ ಸರ್ಪ ಡಿ. ಮಂಜುನಾಥ ಗೌಡ ಅವರ ಮನೆಯ ಅಡುಗೆ ಮನೆ ಸೇರಿಕೊಂಡಿತ್ತು.

ಹಾಗಾಗಿ ಕೆಲಕಾಲ ಆತಂಕ ಉಂಟಾಗಿತ್ತು,
ಮಂಜುನಾಥ ಗೌಡ ಅವರು ಸಂಜೆ ಮನೆಯಲ್ಲಿ ಸ್ನಾನ ಮಾಡಿ ಬಟ್ಟೆ ಹರಡಲು ಹಿಂಬದಿ ಬಾಗಿಲು ತೆಗೆಯುತ್ತಿದ್ದಂತೆ ದಿಢೀರನೇ ಮನೆ ಒಳಗೇ ನುಗ್ಗಿದ ಕಾಳಿಂಗಸರ್ಪ ಅಡುಗೆ ಮನೆ ಸೇರಿಕೊಂಡು ಅಲ್ಲೆ ಮಲಗಿಬಿಟ್ಟಿದೆ.
ಆನಂತರ ಮನೆಯವರು ಕುದುರೆ ಗುಂಡಿಯ ಉರಗ ಸಂರಕ್ಷಕ ಪಿ.ಜಿ.ಹರೀಂದ್ರ ಅವರಿಗೆ ಕರೆ ಮಾಡಿದ್ದಾರೆ. ಅವರು ಸ್ಥಳಕ್ಕೆ ಆ ಕಾಳಿಂಗ ಸರ್ಪವನ್ನು ಜಾಗರುಕವಾಗಿ ಹಿಡಿದ್ದಿದ್ದಾರೆ.

Forest Department ವಿಶೇಷ ಅಂದರೆ ಮನೆ ತನ್ನದೆಂಬಂತೆ ಒಳಗೆ ಬಂದಿದ್ದ ಕಾಳಿಂಗ ಯಾರಿಗೂ ಅಪಾಯವುಂಟು ಮಾಡಲಿಲ್ಲ. ಮೇಲಾಗಿ ತನ್ನ ಹಿಡಿಯುವಾಗಲು ಅದು ವಿರೋಧ ತೋರಲಿಲ್ಲ. ಸುರಕ್ಷಿತವಾಗಿ ಸೆರೆಯಾದ ಅದನ್ನು ಅರಣ್ಯ ಇಲಾಖೆ ಸಲಹೆಯಂತೆ ಅಭಯಾರಣ್ಯಕ್ಕೆ ಬಿಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...