Sunday, December 14, 2025
Sunday, December 14, 2025

MESCOM ಗುಡುಗು ಸಿಡಿಲು ಬಿರುಗಾಳಿಗೆ ತಾಳಗುಪ್ಪದಲ್ಲಿ ನೆಲಕ್ಕುರುಳಿದ ಮರಗಳು

Date:

MESCOM ಗುಡುಗು-ಸಿಡಿಲು ಬಿರುಗಾಳಿಯಿಂದ ಕೆಲವು ಕ್ಷಣ ಏನಾಗುತ್ತಿದೆ ಎಂದು ನೋಡುತ್ತಿದ್ದಂತೆ ತಾಳಗುಪ್ಪ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಪ್ಲೈವುಡ್ ಪ್ಯಾಕ್ಟರಿ ಸಮೀಪ ಬೃಹತ್ ಗಾತ್ರದ ಮಾವಿನ ಮರವೊಂದ ಹಲವು ರಂಬೆಗಳು ತುಂಡಾಗಿ ನೆಲಕ್ಕೆ ಅಪ್ಪಳಿಸಿದ ಪರಿಣಾಮ 4-5 ಮೆಸ್ಕಾಂ ವಿದ್ಯುತ್ ಕಂಬಗಳು ತುಂಡು ತುಂಡಾಗಿ ಮುರಿದು ನೆಲಕ್ಕುರುಳಿದವು.

ಮಧ್ಯಾಹ್ನ ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಗಾಳಿಯ ರಭಸದಿಂದ ಜನಸಾಮಾನ್ಯರು ಭಯದಿಂದ ವೀಕ್ಷಿಸುತ್ತಿದ್ದಂತೆ ಹೆದ್ದಾರಿ ಸಂಚಾರ ಬಂದ್ ಆಯಿತು.ತಾಳಗುಪ್ಪದ ಗೌರಿ ಕೆರೆ ಏರಿಯಲ್ಲಿನ ಹೆದ್ದಾರಿ ಅಂಚಿನ ಮಾವಿನ ಮರದ ಕೊಂಬೆ ಮುರಿದು ಬಿದ್ದಿದೆ. ಗೌರಿ ಕೆರೆ ಏರಿಯಿಂದ ತಾಳಗುಪ್ಪ ಪಟ್ಟಣ ಮತ್ತು ಹೆದ್ದಾರಿಯ ಮರತ್ತೂರು-ಬಲೆಗಾರು ವರೆಗೂ ರಸ್ತೆ ಅಂಚಿನ ನೀಲಗಿರಿ ಮರ ಸೇರಿದಂತೆ ಸಾಲುಮರಗಳು ಬುಡಸಮೇತ ಕಿತ್ತುಬಿದ್ದಿರುವ ಘಟನೆ ವರದಿಯಾಗಿದೆ.

ಹೆದ್ದಾರಿಯ 3-4ಕಡೆ ಹೆದ್ದಾರಿ ಸಂಚಾರ ಬಂದ್ ಆಯಿತು.ಪ್ರಯಾಣಿಕರು ವಾಹನ ಸವಾರರು ರಸ್ತೆಯ ಲ್ಲಿಯೇ ಪರದಾಡು ವಂತಾಯಿತು.
ವಾಹನಗಳ ಸರದಿ ಸಾಲುಗಟ್ಟಿದವು.ರಸ್ತೆಯಲ್ಲಿ ಜನಜಾತ್ರೆಯಂತೆ ನಿಲ್ಲುವಂತಾ ಯಿತು.ಇನ್ನೇನು ಮಳೆ ಸುರಿಯುತ್ತದೆ ಎನ್ನುವಷ್ಟರಲ್ಲಿ ಬಿರುಗಾಳಿಯಲ್ಲಿ ಅನಾಹುತ ಸೃಷ್ಟಿಸಿ ಮರಗಳನ್ನು ಉರುಳಿಸಿ ಮಳೆ ಹನಿಯೊಂದಿಗೆ ಮೋಡ ಗಳು ಮಾಯವಾದವು.

MESCOM ವಿಷಯ ತಿಳಿದ ಆಡಳಿತ ಹೆದ್ದಾರಿ ತೆರವು ಕೈಗೊಳ್ಳುವ ಮೂಲಕ ಕೆಲವು ಸಮಯಗಳ ನಂತರ ಹೆದ್ದಾರಿ ತೆರವುಗೊಳಿಸಲಾಯಿತು. ಬಿರುಗಾಳಿಯಿಂದ ಅನಾಹುತ ವಾದ 5-6 ಕಿ.ಮೀ ವ್ಯಾಪ್ತಿಯಲ್ಲಿ ಮಳೆ ಸುರಿ ಯಲಿಲ್ಲ. ಚೂರಿಕಟ್ಟೆಯಿಂದ ಜೋಗ-ಕಾರ್ಗಲ್‌ವರೆಗೂ ಮಳೆ ಸುರಿಯಿತು.ಹೀಗೆ ಜೋಗ ವ್ಯಾಪ್ತಿಯಲ್ಲಿ ಸುರಿದ ಮಳೆ ತಾಳಗುಪ್ಪದಿಂದ ಸಾಗರದವರೆಗೂ ಸುರಿಯ ಲಿಲ್ಲ. ಕೇವಲ ಮೋಡಕವಿದ ವಾತವರಣವಿದ್ದು,ಮಳೆ ಬೀಳಬಹುದು ಎನ್ನುವಂತಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...