Sunday, December 7, 2025
Sunday, December 7, 2025

Bhadravati Police ಮುದ್ದಿನ ಅಜ್ಜಿಯನ್ನ ಹಣದಾಸೆಗೆ ಮೊಮ್ಮಗನೇ ಕೊಂದ ಘಟನೆ

Date:

Bhadravati Police ಹಣಕ್ಕಾಗಿ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಅಂತರಗಂಗೆಯಲ್ಲಿ ನಡೆದಿದೆ.
ಅಂತರಗಂಗೆಯ ಭೋವಿಕೇರಿಯಲ್ಲಿ ರಾಮಕ್ಕ (72 ) ನನ್ನು ಮೊಮ್ಮಗನೇ ಹೊಂಚು ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಅಜ್ಜಿಯ ಸೊಂಟದಲ್ಲಿದ್ದ 20 ಸಾವಿರ ರೂ ಮತ್ತು ಕಿವಿ ಓಲೆ ಕಿತ್ತುಕೊಂಡು ಹೋಗಿದ್ದಾನೆ.

ಈ ಸಂಬಂಧ ಮೊಮ್ಮಗ ಚೇತನ್, ಭರತ್, ರೋಹಿತ್, ಆದರ್ಶ ವಿರುದ್ಧ ದೂರು ದಾಖಲಾಗಿದೆ.‌
ರಾಮಕ್ಕನವರ ಮಗ ಗೋವಿಂದ ಜೆಸಿಬಿ ಖರೀದಿಸಿದ್ದು, ಅದರ ಸಾಲದ ಕಂತು ಕಟ್ಟಲು ಅಮ್ಮನ ಬಳಿ 20 ಸಾವಿರ ಕಂತು ಹಣ ನೀಡಿ ಗೋವಿಂದ ದಾವಣಗೆರೆಗೆ ಹೋದಾಗ ಈ ಕೊಲೆ ಸಂಭವಿಸಿದೆ.

ಈ ಕೊಲೆಗೆ ಚೇತನ್, ಭರತ್, ರೋಹಿತ್, ಆದರ್ಶ ಕಾರಣವೆಂದು ಗೋವಿಂದ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚೇತನ್ ರಾಮಕ್ಕನವರ ಮಗ ಹನುಮಂತಪ್ಪನ ಮಗ ಆಗಿದ್ದಾನೆ. ಮೈತುಂಬ ಸಾಲ ಮಾಡಿಕೊಂಡಿದ್ದ ಚೇತನ್ ಅಜ್ಜಿಯ ಬಳಿ ಹಣವಿರುವುದನ್ನು ಗಮನಿಸಿದ್ದನು.

Bhadravati Police ತಂದೆ ಹನುಮಂತಪ್ಪನವರನ್ನು ಸ್ನೇಹಿತರೊಂದಿಗೆ ಪಾರ್ಟಿಗೆ ಕಳುಹಿಸಿ ಅಜ್ಜಿ ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ದೂರಿನಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...