Monday, February 2, 2026
Monday, February 2, 2026

Kavite with K Live ಕವಿತೆ ವಿತ್ ಕೆ ಲೈವ್

Date:

Kavite with K Live ಸಜ್ಜನರ ಸಂಗ ದುರ್ಜನರ ಸಂಗ
ಈ ಲೋಕದೊಳಗೆ ಎಲ್ಲಕ್ಕಿಂತ
ಮಿಗಿಲಾದ ಸಂಗ ಮನಸೊಳಗಿನ
ಏಕಾಂತದ ನಿರುಮ್ಮಳ ಸಂಗ.

ಹುಟ್ಟು ಉಚಿತ ಸಾವು ಖಚಿತ
ಎರಡಕ್ಕೂ ಹೆಸರಿಲ್ಲದೆ ಸದಾ
ಜಂಜಾಟದಲ್ಲಿ ರೋಸಿಹೋಗಿ
ಕಳೆದೋಗುವುದೇ ಈ ಸಂಗ.

ಕಾಲದೊಂದಿಗೆ ಬಂದಾಗ ಬಂದಂತೆ
ಕಾಲಾನಂತರ ಇದ್ದಾಗ ಇದ್ದಂತೆ
ಒಳ್ಳೆಯವರನ್ನು ಹುಡುಕುವುದಕ್ಕಿಂತ
ನಾವೇ ಬದಲಾದರೆ ಒಳಿತಲ್ಲವೇ.

ಏನೇ ಆಗಲಿ ಬಂದದ್ದು ಬರಲಿ
ಹೋಗೋದು ಇಲ್ಲೆ ಹೋಗಲಿ
ಎಲ್ಲಾ ಭಾರಕ್ಕಿಂತ ಈ ಜೀವನದ
ಭಾರವು ಎಲ್ಲಕ್ಕಿಂತ ಮಿಗಿಲಲ್ಲವೇ.

ಕಷ್ಟ ಸುಖ ಏನೇನೋ ಬರಲಿ
ಜೀವನದ ಬಂಡಿ ಮುಂದೆ ಸಾಗಲಿ
ಹಸಿವಿನ ಶಕ್ತಿ ಇಂಗಿಸೋ ಕೈಗಳಿಗೆ
ಆತ್ಮಸ್ಥೈರ್ಯದ ಬಲ ಒದಗಲಿ.

Kavite with K Live ಈ ಹೊಟ್ಟೆ ಉರಿಸಲೆಂದೆ ನೂರಾರು
ಕಿಡಿಗಳು ಕಾದಿವೆ ಜಗ್ಗದೆ ಕುಗ್ಗದೆ
ಮುಗಿಲ ಕಡೆ ಮುಖವ ಮಾಡಿ
ಮುನ್ನುಗ್ಗುತಾ ಸಾಗಲೇಬೇಕು.

ಎಲ್ಲವನು ಮೀರುವುದಕ್ಕಿಂತ
ಯೋಚಿಸಿ ಕೂತರೆ ಲೇಸು
ಕರಿಮಸಿಯೊಳಗಿನ ಬಿಂಬಕ್ಕೆ
ಯಾವತ್ತೂ ಸರದಾರನಾಗಬಾರದು.

ರಚನೆ : ರವಿಕುಮಾರ್.ಕೆ.ಎಂ, ಸಹಾಯಕ ಪ್ರಾಧ್ಯಾಪಕರು, ಯುವಕವಿ, ಹವ್ಯಾಸಿ ಬರಹಗಾರರು, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...