Wednesday, October 2, 2024
Wednesday, October 2, 2024

Kavite with K Live ಕವಿತೆ ವಿತ್ ಕೆ ಲೈವ್

Date:

Kavite with K Live ಸಜ್ಜನರ ಸಂಗ ದುರ್ಜನರ ಸಂಗ
ಈ ಲೋಕದೊಳಗೆ ಎಲ್ಲಕ್ಕಿಂತ
ಮಿಗಿಲಾದ ಸಂಗ ಮನಸೊಳಗಿನ
ಏಕಾಂತದ ನಿರುಮ್ಮಳ ಸಂಗ.

ಹುಟ್ಟು ಉಚಿತ ಸಾವು ಖಚಿತ
ಎರಡಕ್ಕೂ ಹೆಸರಿಲ್ಲದೆ ಸದಾ
ಜಂಜಾಟದಲ್ಲಿ ರೋಸಿಹೋಗಿ
ಕಳೆದೋಗುವುದೇ ಈ ಸಂಗ.

ಕಾಲದೊಂದಿಗೆ ಬಂದಾಗ ಬಂದಂತೆ
ಕಾಲಾನಂತರ ಇದ್ದಾಗ ಇದ್ದಂತೆ
ಒಳ್ಳೆಯವರನ್ನು ಹುಡುಕುವುದಕ್ಕಿಂತ
ನಾವೇ ಬದಲಾದರೆ ಒಳಿತಲ್ಲವೇ.

ಏನೇ ಆಗಲಿ ಬಂದದ್ದು ಬರಲಿ
ಹೋಗೋದು ಇಲ್ಲೆ ಹೋಗಲಿ
ಎಲ್ಲಾ ಭಾರಕ್ಕಿಂತ ಈ ಜೀವನದ
ಭಾರವು ಎಲ್ಲಕ್ಕಿಂತ ಮಿಗಿಲಲ್ಲವೇ.

ಕಷ್ಟ ಸುಖ ಏನೇನೋ ಬರಲಿ
ಜೀವನದ ಬಂಡಿ ಮುಂದೆ ಸಾಗಲಿ
ಹಸಿವಿನ ಶಕ್ತಿ ಇಂಗಿಸೋ ಕೈಗಳಿಗೆ
ಆತ್ಮಸ್ಥೈರ್ಯದ ಬಲ ಒದಗಲಿ.

Kavite with K Live ಈ ಹೊಟ್ಟೆ ಉರಿಸಲೆಂದೆ ನೂರಾರು
ಕಿಡಿಗಳು ಕಾದಿವೆ ಜಗ್ಗದೆ ಕುಗ್ಗದೆ
ಮುಗಿಲ ಕಡೆ ಮುಖವ ಮಾಡಿ
ಮುನ್ನುಗ್ಗುತಾ ಸಾಗಲೇಬೇಕು.

ಎಲ್ಲವನು ಮೀರುವುದಕ್ಕಿಂತ
ಯೋಚಿಸಿ ಕೂತರೆ ಲೇಸು
ಕರಿಮಸಿಯೊಳಗಿನ ಬಿಂಬಕ್ಕೆ
ಯಾವತ್ತೂ ಸರದಾರನಾಗಬಾರದು.

ರಚನೆ : ರವಿಕುಮಾರ್.ಕೆ.ಎಂ, ಸಹಾಯಕ ಪ್ರಾಧ್ಯಾಪಕರು, ಯುವಕವಿ, ಹವ್ಯಾಸಿ ಬರಹಗಾರರು, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...