Tuesday, December 16, 2025
Tuesday, December 16, 2025

Shimoga Central Jail ವಿಚಿತ್ರ ಸುದ್ದಿ – ಜೈಲಿನಲ್ಲಿ ಮೊಬೈಲ್ ನುಂಗಿದ ಖೈದಿ

Date:

Shimoga Central Jail ಜೈಲು ಶಿಕ್ಷಾ ಬಂಧಿಯೊಬ್ಬ ನಿಷೇಧಿತ ಮೊಬೈಲ್ ನ್ನೇ ನುಂಗಿ ವಿಷಕಂಠನಾಗಲು ಹೊರಟವನನ್ನ ಆಪರೇಷನ್ ಮೂಲಕ ಉಳಿಸಿರುವ ಘಟನೆ ನಡೆದಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಪರಶುರಾಮ ಪರ್ಸ ಚಿಂಗಾರಿ ಮಾ.28 ರಂದು ಹೊಟ್ಟೆನೋವು ಎಂದು ಕೂಗತೊಡಗಿದ್ದಾನೆ. ಕರ್ತವ್ಯ ನಿರತ ಅಧಿಕಾರಿ / ಸಿಬ್ಬಂದಿಗಳು ತಿಳಿಸಿದ ತಕ್ಷಣ ಆತನಿಗೆ ಕಾರಾಗೃಹದ ಒಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಅದರೆ ಚಿಂಗಾರಿಗೆ ತನಗೆ ಹೊಟ್ಟೆನೋವು ಜಾಸ್ತಿ ಇರುವುದಾಗಿ ತಿಳಿಸಿದ ಕಾರಣ ಅದೇ ದಿನ ರಾತ್ರಿ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆಸ್ಪತ್ರೆಯ ವೈದ್ಯಾಧಿಕಾರಿಗಳು ಚಿಂಗಾರಿಯ ಹೊಟ್ಟೆ ನೋವಿಗೆ ಆತ ಕಲ್ಲು ನುಂಗಿರುವುದೇ ಕಾರಣ ಎಂದು ತಮ್ಮ ವರದಿಯಲ್ಲಿ ವೈದ್ಯರು ನೀಡಿದ ಕಾರಣ ಸೂಕ್ತ ಚಿಕಿತ್ಸೆಯನ್ನು ನೀಡಲು ತೀರ್ಮಾನಿಸಲಾಗಿತ್ತು.

ಅದರಂತೆ ಚಿಂಗಾರಿಯನ್ನು ಚಿಕಿತ್ಸೆಯನ್ನು ಕೊಡಿಸಲಾಗಿರುತ್ತದೆ. ಏ. 01 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈಯರ್ ಸೆಂಟರ್ ಗೆ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.‌

ಮೆಗ್ಗಾನ್ ನಿಂದ ಬೆಂಗಳೂರಿಗೆ ಕಳುಹಿಸಲಾಗಿದೆ. ಏ.03 ರಂದು ಕೇಂದ್ರ ಕಾರಾಗೃಹ ಬೆಂಗಳೂರು ರವರು ಖೈದಿಗೆ ಹಿರಿಯ ಮುಖ್ಯ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿ, ಅವರ ಶಿಫಾರಸ್ಸಿನಂತೆ ಏ.6 ರಂದು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಿರುತ್ತಾರೆ.

Shimoga Central Jail ಭದ್ರತಾ ಅಡಿಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ದಿನಾಂಕ: 25-04-2024 ರಂದು ಸದರಿ ಬಂದಿಯ ಹೊಟ್ಟೆಯಿಂದ 01 ಮೊಬೈಲ್ ಫೋನನ್ನು ಹೊರ ತೆಗೆದಿದ್ದಾರೆ. ಹೊಟ್ಟೆಯಲ್ಲಿ ನಿಷೇಧಿತ ವಸ್ತುವಾದ ಮೊಬೈಲ್ ದೊರೆತಿರುವುದರಿಂದ ಈತನ ವಿರುದ್ಧ ತುಂಗ ನಗರದಲ್ಲಿ ದೂರು‌ ದಾಖಲಿಸಿದ್ದಾರೆ.

ಪೇಸ್ಟ್ ನಲ್ಲಿ ಗಾಂಜಾ, ಗುದದ್ವಾರದಲ್ಲಿ ಗಾಂಜಾವನ್ನ ಜೈಲಿನಲ್ಲಿ ಸಾಗಿಸಲು ಯತ್ನಿಸಲಾಗಿತ್ತು. ಜೈಲಿನ ಬಂಧಿಗಳಿಗೆ ಚಾಕುಚೂರಿ ಸಾಗಿಸುವ ಘಟನೆ ನಡೆದಿತ್ತು.

ಜೈಲಿನಲ್ಲಿ ಕೈಗಾರಿಕಾ ಭದ್ರತಾ ಪಡೆಯನ್ನ‌ ನಿಯೋಜಿಸಿರುವುದರಿಂದ ಈ ಎಲ್ಲ ಪ್ರಕರಣಗಳು ಬೆಳಕಿಗೆ ಬಂದಿದೆ. ಶಿಕ್ಷಾಬಂಧಿ ಚಿಂಗಾರಿ ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಯಾಗಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...