Sunday, December 14, 2025
Sunday, December 14, 2025

Madhu Bangarappa ಕೊಚ್ಚೆ ಮೇಲೆ ಕಲ್ಲು ನೀವೂ ಹಾಕಬೇಡಿ. ನಾನೂ ಹಾಕ್ಕೊಳ್ಳೋಕೆ ಹೋಗೋಲ್ಲ” ಕುಮಾರ್ ಬಂಗಾರಪ್ಪ ಬಗ್ಗೆ ಮಧು ಮಾತಿನ ಟಾಂಗ್

Date:

Madhu Bangarappa ಫ್ರೀ ರಿಚಾರ್ಜ್ ವಿಚಾರ ಬಳಸಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸಹೋದರ, ಮಾಜಿ ಶಾಸಕ ಕುಮಾರ ಬಂಗಾರಪ್ಪ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಕುಮಾರ ಬಂಗಾರಪ್ಪ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂಬ ಪ್ರಶ್ನೆ ಕೇಳುತ್ತಿದ್ದಂತೆ, ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ”ನೋಡಿ, ನಾವಿಬ್ಬರು ಪಕ್ಕದಲ್ಲೇ ನಿಂತಿರುತ್ತೇವೆ. ಪಕ್ಕದಲ್ಲೇ ಕೊಚ್ಚೆ ಇರುತ್ತದೆ. ಬಹಳ ವಾಸನೆ. ಅದಕ್ಕೆ ಕಲ್ಲು ಹಾಕಿದರೆ ನಮಗೂ ಅಹಸ್ಯ, ಪ್ರಶ್ನೆ ಕೇಳುವ ನಿಮಗೂ ಅಸಹ್ಯ. ಎರಡೇ ವಿಚಾರ.. ಯಾಕೆ ಸೋತ್ರಿ, ಇಷ್ಟು ದಿನ ಎಲ್ಲಿದ್ರಿ.. ಎಂಬ ಎರಡಕ್ಕೆ ಉತ್ತರ ತಗೊಳ್ಳಿ. ಮತ್ತೆ ನನಗೆ ಪ್ರಶ್ನೆ ಹಾಕಬೇಡಿ. ಜನರಿಗೆ ಪ್ರಶ್ನೆ ಮಾಡಬೇಕು ಅವ್ರು.. ನೀವು ನನಗೆ ಕೇಳಿದ್ರೆ ಉಪಯೋಗವಿಲ್ಲ” ಎಂದು ಗರಂ ಆದರು.

Madhu Bangarappa ”ಅದಕ್ಕೇ ಕೊಚ್ಚೆ ಮೇಲೆ ಕಲ್ಲು ನೀವೂ ಹಾಕಬೇಡಿ, ನಾನೂ ಹಾಕ್ಕೋಳೋಕೆ ಹೋಗೊಲ್ಲ. ಇಂತಹ ಸಂದರ್ಭದಲ್ಲಿ ಅದೆಲ್ಲ ಅಸಹ್ಯ. ಶರಾವತಿ ಡೆಂಟಲ್ ಕಾಲೇಜು ಎದುರುಗಡೆ ಟೆಂಟ್ ಹಾಕೋದು.. ಎಲೆಕ್ಷನ್ ಬಂದಾಗ ಇವೆಲ್ಲ ಇರ್ತವೆ. ಘನತೆ, ಗೌರವ ಉಳಿಸಿಕೊಳ್ಳಬೇಕು” ಎಂದು ಸಹೋದರನಿಗೆ ಟಾಂಗ್ ನೀಡಿದರು.

ರಿಚಾರ್ಜ್ ಗಿರಾಕಿ ಎಂದು ಟೀಕೆ: ”ಸಾಮಾನ್ಯವಾಗಿ ರಿಚಾರ್ಜ್ ಫ್ರಿ ಆಗಿ ಮಾಡ್ತಾರ ಅಥವಾ ದುಡ್ಡು ಕಟ್ಟುತ್ತಾರಾ? ರಿಚಾರ್ಜ್ ಫ್ರೀ ಅಗಿ ಯಾರೂ ಮಾಡಲ್ಲ. ಕೆಲವು ಗಿರಾಕಿಗಳು ಹಾಗೆಯೇ ಇರುತ್ತಾರೆ. ಈ ಮುಂಚೆ ಜಿಯೋ ಫ್ರೀ ಆಗಿ ಕೊಡುತ್ತಿದ್ದರು, ಅಷ್ಟೇ..” ಎಂದು ಸಹೋದರನ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...