Friday, March 20, 2026
Friday, March 20, 2026

K.S.Eshwarappa ಈಶ್ವರಪ್ಪ ,ಆಸ್ತಿ ವಿವರ ಘೋಷಣೆ.₹10 ಕೋಟಿಗೂ ಮೀರಿ ಸ್ಥಿರಾಸ್ತಿ

Date:

K.S.Eshwarappa ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ‌ಈಶ್ವರಪ್ಪ ಅವರು ತಮ್ಮ ಆಸ್ತಿ ವಿವರವನ್ನು ಚುನಾವಣೆ ಅಧಿಕಾರಿಗಳಿಗೆ ನೀಡಿದ್ದಾರೆ. ಇಂದು ನಾಮಪತ್ರ ಸಲ್ಲಿಸಿದ ಈಶ್ವರಪ್ಪ ಆಯೋಗಕ್ಕೆ ತಮ್ಮ ಆಸ್ತಿ ವಿವರಣೆಯನ್ನ ಪ್ರಕಟಿಸಿದ್ದಾರೆ.
ಅವರ ಹೆಸರಿನಲ್ಲಿ 98 ಲಕ್ಷದ 92 ಸಾವಿರದ 20 ರೂ ಹೊಂದಿದ್ದಾರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 35 ಲಕ್ಷ 50 ಸಾವಿರದ 20 ರೂ. ಹೊಂದಿದ್ದಾರೆ. ಈಶ್ವರಪ್ಪ ಅವರ ಕೈಯಲ್ಲಿ ಇರುವ ನಗದು 25 ಲಕ್ಷ ರೂ.ಪತ್ನಿ ಜಯಲಕ್ಷ್ಮಿ ಅವರ ಕೈಯಲ್ಲಿ ಇರುವ ನಗದು 2 ಲಕ್ಷ ಎಂದು ಸಲ್ಲಿಸಿದ್ದಾರೆ.
ಈಶ್ವರಪ್ಪ ಹೆಸರಿನಲ್ಲಿ ಬಂಗಾರ 300 ಗ್ರಾಂ, ಬೆಳ್ಳಿ 2 ಕೆ.ಜಿ ಸಾಮಾಗ್ರಿಗಳನ್ನ ಹೊಂದಿದ್ದಾರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಬಂಗಾರ 500 ಗ್ರಾಂ, ಬೆಳ್ಳಿ 5 ಕೆ.ಜಿ. ಹೊಂದಿದ್ದಾರೆ.
ಈಶ್ವರಪ್ಪ ಹೆಸರಿನಲ್ಲಿ ನಿದಿಗೆ ಗ್ರಾಮದ ಬಳಿ 1 ಎಕರೆ31 ಗುಂಟೆ ಕೃಷಿ ಭೂಮಿ ಹೊಂದಿದ್ದಾರೆ. ಕೃಷಿಯೇತರ ಭೂಮಿ 4 ಎಕರೆ 24 ಗುಂಟೆ ಹೊಂದಿದ್ದಾರೆ. ಬೆಂಗಳೂರಿನ‌ ಜಯನಗರದಲ್ಲಿ ನಿವೇಶನ, ಶಿವಮೊಗ್ಗದಲ್ಲಿ ವಾಸದ ಮನೆ ಹೊಂದಿದ್ಷಾರೆ.

K.S.Eshwarappa ಈಶ್ವರಪ್ಪ ಹೆಸರಿನಲ್ಲಿ 5 ಕೋಟಿ 87 ಲಕ್ಷದ 39 ಸಾವಿರ ಸಾಲ ತೋರಿಸಲಾಗಿದೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 70 ಲಕ್ಷದ 80 ಸಾವಿರದ 13 ಸಾವಿರ ರೂ. ಈಶ್ವರಪ್ಪ ಅವರ ಹೆಸರಿನಲ್ಲಿ ಚರಾಸ್ಥಿ 4 ಕೋಟಿ 28 ಲಕ್ಷದ 61 ಸಾವಿರ ರೂ. ಹೊಂದಿದ್ದಾರೆ. 3 ಕೋಟಿ 77 ಲಕ್ಷದ 34 ಸಾವಿರ ರೂ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಚರಾಸ್ಥಿ‌ ಇದೆ.
ಈಶ್ವರಪ್ಪ ಹೆಸರಿನಲ್ಲಿ ಸ್ಥಿರಾಸ್ಥಿ‌ 10 ಕೋಟಿ 95 ಲಕ್ಷದ 59 ಸಾವಿರ ರೂ‌ ಮೌಲ್ಯವಿದ್ದರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಸ್ಥಿರಾಸ್ಥಿ 7 ಲಕ್ಷದ 31 ಸಾವಿರವಿದೆ.‌ ತಮ್ಮ ಐದು ವರ್ಷಗಳ ಆದಾಯವನ್ನ ತೋರಿಸಿರುವ ಈಶ್ವರಪ್ಪ 2018-19 ರಲ್ಲಿ 34,88,380 ರೂ. ಆದಾಯವಿದೆ ಎಂದು ತೋರಿಸಿದರೆ 2019-20 ರಲ್ಲಿ 74,35,520ರೂ.ಎಂದು ತೋರಿಸಿದ್ದಾರೆ.

2020-21 ರಲ್ಲಿ 54,50,390 ರೂ. 2021-22 ರಲ್ಲಿ 88,35,420 ರೂ. ಇದ್ದರೆ 2022-23 ರಲ್ಲಿ 98,92,200 ರು ಆದಾಯ ಎಂದು ಘೋಷಿಸಿಕೊಂಡಿದ್ದಾರೆ. ವರ ವಿರುದ್ಧ ಯಾವುದೇ ಎಫ್ಐಆರ, ಯಾವುದೇ ಅಪರಾಧಗಳು ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...