Monday, February 2, 2026
Monday, February 2, 2026

Prashant Kishore ಬಿಜೆಪಿ 300 ಕ್ಕೂ‌ ಹೆಚ್ಚು ಸೀಟುಗಳನ್ನ ಗೆಲ್ಲುವ ಸಾಧ್ಯತೆ- ಪ್ರಶಾಂತ್ ಕಿಶೋರ್

Date:

Prashant Kishore ಚುನಾವಣೆಯ ಫಲಿತಾಂಶ ಮುಂಚೆಯೇ ಹೇಳಿದರೆ ಜನ ನಗುತ್ತಾರೆ. ಆದರೆ ಈಗೀಗ ದೃಶ್ಯಮಾಧ್ಯಮಗಳಲ್ಲಿ
ಖಾಸಗಿ ಏಜೆನ್ಸಿ,
ಟೀವಿ ಗಳು ನಡೆಸಿರುವ ಸಮೀಕ್ಷೆಗಳು ಪ್ರಸಾರವಾಗುತ್ತಿವೆ.

ಜನ ನಂಬುವುದೋ ಬಿಡುವುದೋ ಎಂಬ ಇಬ್ಬಂದಿತನಕ್ಕೆ ಒಂದು ಸೆಕೆಂಡ್ ಸಿಲುಕುತ್ತಾರೆ.
ನಂತರ ಯಾರು ಬಂದ್ರೆ ಏನು ?ಎಲ್ಲರ ಹಣೇಬರಹ ಒಂದೇನೆ! ಎಂಬ ಫಿಲಾಸಫಿಗೆ ಒರಗಿ ಬಿಡುತ್ತಾರೆ.
ನಿಜ, ಆದರೆ ರಾಜಕೀಯ ಪಕ್ಷಗಳು ಹಾಗಿಲ್ಲ. ತಮ್ಮದೇ ಹಿಡಿತ,ಪೋಷಣೆಯಲ್ಲಿರುವ ಏಜೆನ್ಸಿ ಗಳಿಗೆ
ಪ್ರಯೋಜಕತ್ವ ನೀಡಿ ಸಮೀಕ್ಷೆ ಮಾಡಿಸುವುದೂ ಇದೆ
ಅಷ್ಟೇ ಅಲ್ಲ ಗೆಲ್ಲುವ ತಂತ್ರಗಾರಿಕೆ ಪರಿಣಿತರನ್ನ ನೇಮಿಸಿಕೊಳ್ಳುವುದೂ ನಡೆದಿದೆ.
ಕರ್ನಾಟಕದ ಗ್ಯಾರಂಟಿ ಸಫಲತೆಗೆ
ಹಿನ್ನಲೆಯಲ್ಲಿ ಸುನೀಲ್ ಕನುಗೋಳ್ ಎಂಬ ಪರಿಣಿತ ಇದ್ದದ್ದೂ ಈಗ ರಹಸ್ಯವಾಗುಳಿದಿಲ್ಲ.

ಈ ಪರಿಣಿತರ ಪಟ್ಟಿಯಲ್ಲಿ ಮೊದಲ ಹೆಸರು ಪ್ರಶಾಂತ್ ಕಿಶೋರ್.
ಪಶ್ಚಿಮ ಬಂಗಾಳದಲ್ಲಿ ಲೋಕಸಭೆಗೆ ಬಿಜೆಪಿ ಸೀಟುಗಳಿಕೆ ಹೆಚ್ಚುತ್ತದೆ ಎಂದಿದ್ದಾರೆ.

Prashant Kishore ಮೋದಿ ಅವರ ಚಾರ್ ಸೌ ಪಾರ್ ಎನ್ನುವ ಹೇಳಿಕೆಗೂ ಪ್ರತಿಕ್ರಯಿಸಿದ್ದಾರೆ.
ಬಿಜೆಪಿ ಒಂದೇ ಪಕ್ಷವು ಮೂನ್ನೂರಕ್ಕು ಅಧಿಕ ಸೀಟು ಗೆಲ್ಲಲಿದೆ ಎಂದಿದ್ದಾರೆ.

ತಮಿಳಿನಾಡಿನಲ್ಲಿ ಮತಹಂಚಿಕೆಯ ಪ್ರಮಾಷದಲ್ಲಿ ಬಿಜೆಪಿಗೆ ಏರಿಕೆ ಕಾಣಲಿದೆ.ಒಡಿಶಾದಲ್ಲಿ ಹೆಚ್ಚುಸ್ಥಾನ ಗೆಲ್ಲಲಿದೆ.
ಗೆಲ್ಲಬೇಕಾದ ಕಡೆ ಪ್ರವಾಸ ಬಿಟ್ಟು ಸುಮ್ಮನೆ ಮಣಿಪುರ ,ಮೇಘಾಲಯ ಪ್ತವಾಸ ಮಾಡಿದರೆ ಏನು ಲಾಭ ?ಎಂದು ಕಾಂಗ್ರೆಸ್ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
ಪ್ರಬಲ ವಿರೋಧಪಕ್ಷವಾಗಿ ಸಂವರ್ಧಿಸುವ ಅವಕಾಶಗಳನ್ನ ವಿಪಕ್ಷಗಳು ಕೈಚೆಲ್ಲಿವೆ. ಒಂದು ರೀತಿ ಸೋಮಾರಿತನ
ಮತ್ತು ತಪ್ಪು ತಂತ್ರಗಾರಿಕೆಯಿಂದ ಅತ್ಯುತ್ತಮ ಅವಕಾಶಗಳನ್ನ ಹಾಳುಮಾಡಿಕೊಂಡಿವೆ ಎಂದು ಪಿಟಿಐ ಸಂಪಾದಕರ ಜೊತೆ ನಡೆಸಿದ ಸಂವಾದದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ
ರಾಹುಲ್ ಗಾಂಧಿ ಪಕ್ಷದ ಮಹತ್ವದ ನಿರ್ಧಾರಗಳಿಂದ ದೂರ ಉಳಿಯುವುದು ಉತ್ತಮ ಎಂದೂ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ
ರಾಹುಲ್ ಗಾಂಧಿ ಪಕ್ಷದ ಮಹತ್ವದ ನಿರ್ಧಾರಗಳಿಂದ ದೂರ ಉಳಿಯುವುದು ಉತ್ತಮ ಎಂದೂ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...