Sunday, December 7, 2025
Sunday, December 7, 2025

Breaking News ಮದುವೆಗೆ ಮಂಗಳವಾದ್ಯ ನುಡಿಸಲು ಹೊರಟವರಿಗೆ ಮೃತ್ಯು ಕಾಡಿತ್ತು…

Date:

Breaking News ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಶುಭಶ್ರೀ ಕಲ್ಯಾಣಮಂಟಪದಲ್ಲಿದ್ದ ಮದುವೆಗೆ ವ್ಯಾದ್ಯ ನುಡಿಸಲು ಹೋಗುತ್ತಿದ್ದ ನಾಲ್ವರಲ್ಲಿ ಇಬ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ವಾದ್ಯಗಾರ ಮಂಜುನಾಥ್ ಬೈಕ್‌ನಲ್ಲಿ, ಅಜಯ್ ಮತ್ತು ರಮೇಶ್ ಇನ್ನೊಂದು ಬೈಕಿನಲ್ಲಿ ಹಾಗೂ ಮನು ಮತ್ತು ಜ್ಯೋತಿಕುಮಾರ್ ಒಂದು ಬೈಕ್‌ನಲ್ಲಿ ಹೊನ್ನಾಳಿಯ ಹಿರೆಬಾಸೂರು ಗ್ರಾಮದಿಂದ ಹೊರಟು ರಾತ್ರಿ ಸುಮಾರು ೯:೩೦ ಗಂಟೆಯ ಸಮಯದಲ್ಲಿ ಶಿವಮೊಗ್ಗ ತಾಲ್ಲೂಕು ಬುಳ್ಳಾಪುರ ಗ್ರಾಮದ ಬಳಿ ಬರುತ್ತಿದ್ದಾಗ ಶಿವಮೊಗ್ಗದಿಂದ ಬರುತ್ತಿದ್ದ ಬೈಕ್ ಸವಾರರಿಬ್ಬರು ಡಿಕ್ಕಿ ಹೊಡೆದಿದ್ದಾರೆ.

Breaking News ಓವರ್ಟೇಕ್ ಮಾಡಲು ಹೋಗಿ ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿದ್ದಾನೆ. ಅಪಘಾತಪಡಿಸಿದ್ದರಿಂದ ಎರಡು ಬೈಕ್ ನಲ್ಲಿ ಇದ್ದವರು ಬೈಕ್ ಸಮೇತ ಕೆಳಗೆ ರಸ್ತೆಯ ಮೇಲೆ ಬಿದ್ದಿದ್ದು ಆಗ ಅಲ್ಲೇ ಹಿಂಬದಿಯಲ್ಲಿ ಬರುತ್ತಿದ್ದ ಮಂಜುನಾಥ್ ಹಾಗೂ ಮನು ಮತ್ತು ಜ್ಯೋತಿ ಕುಮಾರ್ ಕೆಳಗೆ
ಬಿದ್ದವರನ್ನು ಉಪಚರಿಸಿ ನೋಡಲಾಗಿ ಅಜಯ್ ರವರಿಗೆ ಎಡಕಾಲಿಗೆ ಮತ್ತು ತಲೆಗೆ ಪೆಟ್ಟಾಗಿತ್ತು, ರಮೇಶ ಮುಖಕ್ಕೆ, ತಲೆಗೆ, ಎಡಕಾಲಿಗೆ ಪೆಟ್ಟಾಗಿತ್ತು. ಅಪಘಾತಪಡಿಸಿದ ಬೈಕ್‌ನಲ್ಲಿ ಇದ್ದ ಮುಬಾರಕ್ ಮತ್ತು ಜಾಫರ್ ಸಾದಿಕ್ ಅವರಿಗೂ ಪೆಟ್ಟಾಗಿತ್ತು.

ಅಜಯ್ ಮತ್ತು ರಮೇಶ್ ರವರನ್ನು ಅಂಬುಲೆನ್ಸ್ ನಲ್ಲಿ ಮೆಗ್ರಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಅಜಯ್ ಮೃತಪಟ್ಟಿರುವುದನ್ನು ಘೋಷಿಸಿದರು. ಕೆಲವೇ ಹೊತ್ತಿನಲ್ಲಿ ರಮೇಶ ಸಹ ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...